ಹಲವು ರಾಜ್ಯಗಳಿಗೆ ರಾಜ್ಯಪಾಲರ ಬದಲಾವಣೆ ಮಾಡಿದ ಕೇಂದ್ರ

ನವದೆಹಲಿ: ಮಾರ್ಚ್ 5 ರಂದು ಘೋಷಿಸಲಾದ ರಾಜ್ಯಪಾಲರ ವ್ಯಾಪಕ ಬದಲಾವಣೆಯು ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆದ ಅತ್ಯಂತ ಮಹತ್ವದ ಪುನಾರಚನೆಗಳಲ್ಲಿ ಒಂದಾಗಿದೆ. ಲಡಾಖ್‌ನ ಸಂಘರ್ಷಮಯ ಪ್ರದೇಶಗಳಿಂದ ಹಿಡಿದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಚುನಾವಣೆ ನಡೆಯಲಿರುವ ರಾಜ್ಯಗಳ ವರೆಗೆ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದೆ.
ಡಾ. ಸಿ.ವಿ. ಆನಂದ ಬೋಸ್ ರಾಜೀನಾಮೆ ; ಪಶ್ಚಿಮ ಬಂಗಾಳಕ್ಕೆ ಆರ್.ಎನ್. ರವಿ ಅವರ ನಿಯೋಜನೆ
ಈ ಬದಲಾವಣೆಯ ಅತ್ಯಂತ ಪ್ರಮುಖ ನಿರ್ಧಾರವೆಂದರೆ ಡಾ. ಸಿ.ವಿ. ಆನಂದ ಬೋಸ್ ಅವರ ರಾಜೀನಾಮೆ ಮತ್ತು ಅದರ ಬೆನ್ನಲ್ಲೇ ತಮಿಳುನಾಡು ರಾಜ್ಯಪಾಲರಾಗಿದ್ದ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಿರುವುದು. ಚೆನ್ನೈನ ರಾಜಭವನದಿಂದ ವರ್ಗಾವಣೆಗೊಂಡಿರುವ ರವಿ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ರಾಜ್ಯವು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅವರ ಆಗಮನವಾಗಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧವು ಸಂಘರ್ಷದಲ್ಲಿರುವ ಈ ರಾಜ್ಯಕ್ಕೆ ರವಿ ಅವರನ್ನು ನಿಯೋಜಿಸಲಾಗಿದೆ. ರವಿ ಅವರಿಂದ ತೆರವಾದ ತಮಿಳುನಾಡು ರಾಜ್ಯಪಾಲರ ಸ್ಥಾನಕ್ಕೆ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳದಿಂದ ತಮಿಳುನಾಡಿಗೆ ವರ್ಗಾಯಿಸಲಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

ಬಿಹಾರಕ್ಕೆ ಜನರಲ್ ಹಸ್ನೈನ್ ಮತ್ತು ದೆಹಲಿಗೆ ಸಂಧು
ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಿರುವುದು ಸಂಪ್ರದಾಯಕ್ಕಿಂತ ಭಿನ್ನವಾದ ನಿರ್ಧಾರವಾಗಿದೆ. ಕಾರ್ಯತಂತ್ರದ ವಿಷಯಗಳಲ್ಲಿ ಆಳವಾದ ಪರಿಣತಿ ಹೊಂದಿರುವ ಅಲಂಕೃತ ಮಿಲಿಟರಿ ಕಮಾಂಡರ್ ಜನರಲ್ ಹಸ್ನೈನ್ ಅವರು, ನಿತೀಶಕುಮಾರ ಅವರು ರಾಜ್ಯಸಭೆಗೆ ತೆರಳುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಪಾಟ್ನಾಕ್ಕೆ ರಾಜ್ಯಪಾಲರಾಗಿ ಆಗಮಿಸುತ್ತಿದ್ದಾರೆ. ಈ ನೇಮಕಾತಿಯು ಬಿಹಾರದ ನಾಯಕತ್ವದ ಬದಲಾವಣೆ ಮತ್ತು ಸೂಕ್ಷ್ಮ ಗಡಿ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ತೆಗೆದುಕೊಂಡ ನಿರ್ಧಾರ ಎಂದು ಸೂಚಿಸುತ್ತದೆ.
ಅದೇ ಸಮಯದಲ್ಲಿ, ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಈವರೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ವಿನಯಕುಮಾರ ಸಕ್ಸೇನಾ ಅವರ ಸ್ಥಾನಕ್ಕೆ ಸಂಧು (ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದವರು) ಬಂದಿದ್ದಾರೆ. ಸಕ್ಸೇನಾ ಅವರನ್ನು ಲಡಾಖ್‌ಗೆ ವರ್ಗಾಯಿಸಲಾಗಿದ್ದು, ಅಲ್ಲಿ ಅವರು ಕವಿಂದರ ಗುಪ್ತಾ (ಹಿಮಾಚಲ ಪ್ರದೇಶಕ್ಕೆ ವರ್ಗಾವಣೆಗೊಂಡವರು) ಅವರ ಸ್ಥಾನವನ್ನು ತುಂಬಲಿದ್ದಾರೆ. ಲಡಾಖ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಆರನೇ ಅನುಸೂಚಿಗಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಭಾಯಿಸಲು ಸಕ್ಸೇನಾ ಅವರ ಅನುಭವವು ಮಹತ್ವದ್ದಾಗಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಮಹಾರಾಷ್ಟ್ರಕ್ಕೆ ವರ್ಮಾ ಮತ್ತು ತೆಲಂಗಾಣಕ್ಕೆ ಶುಕ್ಲಾ
ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ ವರ್ಮಾ ಅವರನ್ನು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಅವರ ಬದಲಿಗೆ ತೆಲಂಗಾಣಕ್ಕೆ ಶಿವಪ್ರತಾಪ ಶುಕ್ಲಾ ಅವರನ್ನು ಹಿಮಾಚಲ ಪ್ರದೇಶದಿಂದ ತೆಲಂಗಾಣಕ್ಕೆ ವರ್ಗಾಯಿಸಲಾಗಿದೆ; ತೆಲಂಗಾಣದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ನಂದಕಿಶೋರ ಯಾದವ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸುವ ಮೂಲಕ ಈಶಾನ್ಯ ಭಾಗಕ್ಕೆ ಅನುಭವಿ ರಾಜಕೀಯ ವ್ಯಕ್ತಿಯನ್ನು ತರಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement