ಶಿರಾಳಕೊಪ್ಪ : ಚೀಲದಲ್ಲಿದ್ದ ವಸ್ತು ಸ್ಪೋಟ ; ಇಬ್ಬರಿಗೆ ಗಾಯ

ಶಿವಮೊಗ್ಗ: ಬ್ಯಾಗಿನಲ್ಲಿದ್ದ ವಸ್ತು ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭಾನುವಾರ (ಫೆ.18) ಸಂಭವಿಸಿದೆ.
ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಶಿರಾಳಕೊಪ್ಪದಲ್ಲಿನ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದ್ದು, ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭ ಅವರಿಟ್ಟಿದ್ದ ಚೀಲ ಸ್ಫೋಟಗೊಂಡಿದೆ ಎನ್ನಲಾಗಿದೆ. ಸಂತೆಯ ವೇಳೆ ಸಿಡಿಮದ್ದನ್ನು ತಂದಿದ್ದ ಚೀಲವನ್ನು ಅಂಗಡಿ ಬಳಿ ಇಟ್ಟಿದ್ದು, ಈ ವೇಳೆ ಅದು ಸ್ಫೋಟಗೊಂಡಿದ್ದು, ಅದರಲ್ಲಿ ಸಿಡಿಮದ್ದು ಇತ್ತು ಎಂದು ಹೇಳಲಾಗಿದೆ.
ಹಾವೇರಿಯ ದಂಪತಿ ತಂದಿದ್ದ ಬ್ಯಾಗ್ ನಲ್ಲಿ ಕಾಡುಪ್ರಾಣಿಗಳಿಗೆ ಇಡಲು ಬಳಸುವ ಸಿಡಿಮದ್ದು ತಂದಿದ್ದರು. ಈ ಘಟನೆಯ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋಟಗೊಂಡ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement