
ಪಾಟ್ನಾ: ಭಾನುವಾರ ರಾತ್ರಿ ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಬಲಪ್ರಯೋಗ ಮಾಡಿದ ನಂತರ ಕಾಲ್ತುಳಿತ ಸಂಭವಿಸಿ ಮೂವರು ಮಹಿಳೆಯರು ಸೇರಿದಂತೆ ಏಳು ಭಕ್ತರು ಮೃತಪಟ್ಟಿದ್ದಾರೆ. ಬರಾವರ್ ಬೆಟ್ಟದ ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಕಾಲ್ತುಳಿತದಲ್ಲಿ ಕನಿಷ್ಠ 35 ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿಯಿಂದಲೇ ಸಿದ್ದೇಶ್ವರನಾಥ ದೇಗುಲದಲ್ಲಿ ಭಕ್ತರ ದಂಡೇ ಇತ್ತು ಎಂದು ದೇಗುಲದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ದೇವಸ್ಥಾನದಲ್ಲಿದ್ದವರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಲಾರಂಭಿಸಿದರು, ಇದರಿಂದಾಗಿ ಹತ್ತಾರು ಜನರು ದೇವಾಲಯದ ಆವರಣದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡರು.
ಜೆಹಾನಾಬಾದ್ನ ಟೌನ್ ಇನ್ಸ್ಪೆಕ್ಟರ್ ದಿವಾಕರಕುಮಾರ ವಿಶ್ವಕರ್ಮ ಅವರು ಏಳು ಮೃತದೇಹಗಳನ್ನು ಜೆಹಾನಾಬಾದ್ ಪೋಸ್ಟ್ ಮಾರ್ಟಮ್ ಗೆ ಆಗಮಿಸಿವೆ ಎಂದು ಖಚಿತಪಡಿಸಿದ್ದಾರೆ.

ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಭಕ್ತರು ದೇವಸ್ಥಾನದಲ್ಲಿ ಜಮಾಯಿಸಿದ್ದರು. ಮಖ್ದುಂಪುರ ಬ್ಲಾಕ್ನ ವನವರ್ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಮಖ್ದುಂಪುರ ಮತ್ತು ಜೆಹಾನಾಬಾದ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಜೆಹಾನಾಬಾದ್ನ ದೃಶ್ಯಗಳು ಕುಟುಂಬಗಳು ದುಃಖಿಸುತ್ತಿರುವುದನ್ನು ತೋರಿಸಿವೆ ಮತ್ತು ಗಾಯಾಳುಗಳು ಸ್ಥಳೀಯ ಮಖ್ದುಂಪುರ ಮತ್ತು ಸದರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ವ್ಯವಸ್ಥೆಗಳ ಕೊರತೆಯಿಂದಾಗಿ ನೂಕುನುಗ್ಗಲು ಉಂಟಾಗಿದೆ ಎಂದು ದೇವಾಲಯದಲ್ಲಿ ಹಾಜರಿದ್ದವರು ಹೇಳಿದರು
ಆದರೆ “ಅಂತಹದ್ದೇನೂ ಸಂಭವಿಸಿಲ್ಲ. ಇದು ದುರದೃಷ್ಟಕರ ಘಟನೆಯಾಗಿದೆ. ಕಟ್ಟುನಿಟ್ಟಿನ ಜಾಗರೂಕತೆ ಇತ್ತು. ಫೋರ್ಸ್ (ಎನ್ಸಿಸಿ), ಸಿವಿಲ್ ಡೆಪ್ಯುಟೇಶನ್ಗಳು ಮತ್ತು ವೈದ್ಯಕೀಯ ತಂಡಗಳು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ನಾವು ಹೆಚ್ಚಿನ ವಿವರಗಳನ್ನು ನೀಡುತ್ತೇವೆ ಎಂದು ಜೆಹನಾಬಾದ್ನ ಉಪವಿಭಾಗಾಧಿಕಾರಿ (ಎಸ್ಡಿಒ) ವಿಕಾಸಕುಮಾರ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ