ಜೈಲು ವಾರ್ಡನ್‌ಗೆ ಮೂವರು ಸಹೋದ್ಯೋಗಿಗಳಿಂದ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ : ದೃಶ್ಯ ಸಿಸಿಟಿಯಲ್ಲಿ ಸೆರೆ…ಕಾರಣ ಇಲ್ಲಿದೆ

ರಾಯಬರೇಲಿ: ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಆತನ ಸಹೋದ್ಯೋಗಿಗಳು ಅಮಾನುಷವಾಗಿ ಥಳಿಸಿದ್ದಾರೆ. ಈಗ
ಇವರೆಲ್ಲರನ್ನು ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
ಆಹಾರದ ಅವ್ಯವಸ್ಥೆ ಬಗ್ಗೆ ಉಂಟಾದ ವಾದ ವಿವಾದವು ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಅವರ ಸಹೋದ್ಯೋಗಿಗಳು ತೀವ್ರವಾಗಿ ಥಳಿಸಲು ಕಾರಣವಾಯಿತು. ಜೈಲ್‌ ವಾರ್ಡನ್‌ ಅವರು ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಥಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರೆಲ್ಲರನ್ನೂ ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲಾ ಕಾರಾಗೃಹಕ್ಕೆ ನಿಯೋಜಿಸಲಾಗಿತ್ತು.
ಜೈಲಿನ ಮೆಸ್ ಉಸ್ತುವಾರಿ ಮುಖೇಶ ದುಬೆ ಅವರನ್ನು ಅವರ ಮೂವರು ಸಹೋದ್ಯೋಗಿಗಳು ಲಾಠಿಯಿಂದ ಥಳಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದ್ದು, ಇತರ ಇಬ್ಬರು ನಿಂತು ನೋಡುತ್ತಿದ್ದಾರೆ.

ಮೂವರು ವ್ಯಕ್ತಿಗಳು ಅವರನ್ನು ಸುತ್ತುವರೆದು ದೊಣ್ಣೆಗಳಿಂದ ಹೊಡೆದಾಗ, ದುಬೆ “ಔರ್ ಮಾರೋ” ಎಂದು ಹೇಳುವುದು ಕೇಳಿಸುತ್ತದೆ. ಅವರು ಒಂದು ಹಂತದಲ್ಲಿ ತನ್ನ ಸಹೋದ್ಯೋಗಿಯಿಂದ ಕೋಲನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಮೂವರು ವ್ಯಕ್ತಿಗಳು ಅವರನ್ನು ಬಿಗಿಯಾಗಿ ಹಿಡಿದು ಹೊಡೆಯಲು ಪ್ರಾರಂಭಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಯ್‌ಬರೇಲಿ ಪೊಲೀಸರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಧಕ್ಕೆಯಾಗುವುದರಿಂದ ಮೆಸ್‌ನ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡಬೇಕೆಂಬ ಈ ಪೊಲೀಸ್‌ ಸಿಬ್ಬಂದಿ ಒತ್ತಡ ಹಾಕಿದ ನಂತರ ತಮ್ಮ ಮತ್ತು ಅವರ ಸಹೋದ್ಯೋಗಿಗಳ ನಡುವೆ ಜಗಳ ಸಂಭವಿಸಿದೆ ಎಂದು ಮುಖೇಶ್ ದುಬೆ ಹೇಳಿದರು. ಮುಖೇಶ ದುಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement