ಆಗ್ರಾದಲ್ಲಿ, ತಾಜ್ಮಹಲ್ಗೆ ಭೇಟಿ ನೀಡಲು ನವದೆಹಲಿಯಿಂದ ಬಂದ ಪ್ರವಾಸಿಗನ ಮೇಲೆ ಲಾಠಿ ಮತ್ತು ರಾಡ್ಗಳಿಂದ ಹಲ್ಲೆ ನಡೆಸಲಾಗಿದೆ.
ಆತನ ಕಾರು ಹಲ್ಲೆ ಮಾಡಿದವರೊಬ್ಬರ ಕಾರನ್ನು ಟಚ್ ಮಾಡಿದ ನಂತರ ಆತನ ಬೆನ್ನಟ್ಟಿ ಲಾಠಿ ಮತ್ತು ರಾಡ್ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಟ್ವಿಟ್ಟರ್ ನಲ್ಲಿ ವೀಡಿಯೊ ವೈರಲ್ ಆಗಿದೆ. ಹಲವಾರು ಟ್ವಿಟರ್ ಬಳಕೆದಾರರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ತಾಜ್ಗಂಜ್ ಪೊಲೀಸ್ ಠಾಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಮತ್ತು ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜ್ ಮಹಲ್ ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಮತ್ತು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು 17 ನೇ ಶತಮಾನದ ಕಟ್ಟಡಕ್ಕೆ ಭೇಟಿ ನೀಡುತ್ತಾರೆ. ಟ್ವಿಟರ್ ಬಳಕೆದಾರರ ಪ್ರಕಾರ, ಆಗ್ರಾದ ತಾಜ್ಗಂಜ್ ಪ್ರದೇಶದ ಬಸಾಯಿ ಚೌಕಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಅಲ್ಲಿನ ಸ್ವೀಟ್ ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರವಾಸಿಗ ಕ್ಷಮೆ ಕೇಳುತ್ತಲೇ ಇದ್ದನು, ಆದರೆ ಹಲ್ಲೆಕೋರರು ಆತನ ಮನವಿ ನಿರ್ಲಕ್ಷಿಸಿ ಆತನಿಗೆ ಹೊಡೆದಿದ್ದಾರೆ. ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿಹಿತಿಂಡಿ ಅಂಗಡಿಯನ್ನು ಪ್ರವೇಶಿಸಿದನು ಆದರೆ ದಾಳಿಕೋರರು ಲಾಟಿ ಹಿಡಿದು ಅಂಗಡಿಯೊಳಗೆ ಅತನನ್ನು ಹಿಂಬಾಲಿಸಿ ಅಲ್ಲಿಯೂ ಆತನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಆತನನ್ನು ಕ್ರೂರವಾಗಿ ಥಳಿಸಲಾಯಿತು ಮತ್ತು ಹಲ್ಲೆ ಹಲವಾರು ನಿಮಿಷಗಳ ಕಾಲ ಮುಂದುವರೆಯಿತು.
ವೀಡಿಯೋಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ಬಗ್ಗೆ ತಿಳಿದುಕೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಐವರನ್ನು ಬಂಧಿಸಲಾಗಿದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಐವರನ್ನು ಬಂಧಿಸಲಾಗಿದೆ ಮತ್ತು ಇತರ ಹಲ್ಲೆಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಘಟನೆಯಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಆಘಾತಕ್ಕೊಳಗಾಗಿದ್ದು, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
“ಈ ಜನರು ಪ್ರವಾಸಿಗರನ್ನು ಕ್ರೂರವಾಗಿ ಥಳಿಸಿದ್ದಾರೆ. ಅವರನ್ನೂ ಅದೇ ರೀತಿಯಲ್ಲಿ ಥಳಿಸಬೇಕು” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. “ಆಗ್ರಾ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸ… ಇದಕ್ಕಾಗಿಯೇ ನಾವು ಯಾವಾಗಲೂ ನಮ್ಮ ವ್ಯವಸ್ಥೆಯನ್ನು ನಂಬುತ್ತೇವೆ… ಆಗ್ರಾ ಪೊಲೀಸರು ನಮ್ಮ ವ್ಯವಸ್ಥೆಯನ್ನು ನಂಬಲು ನಮಗೆ ಇನ್ನೊಂದು ಕಾರಣವನ್ನು ನೀಡುತ್ತಾರೆ” ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ