ವೀಡಿಯೊ…| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ನವದೆಹಲಿ: ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನ ಸೀಟನ್ನು ಬಿಜೆಪಿ ಶಾಸಕನಿಗೆ ಬದಲಾಯಿಸಿಕೊಳ್ಳಲು ಒಪ್ಪದ ಕಾರಣಕ್ಕೆ ಆತನನ್ನು ಥಳಿಸಿದ ಘಟನೆ ಗುರುವಾರ (ಜೂನ್‌ 19) ನಡೆದಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಝಾನ್ಸಿಯ ಶಾಸಕ ರಾಜೀವ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ತಮ್ಮ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಶಾಸಕರು ಕೆಲವು ಸಾಲುಗಳ ಹಿಂದೆ ಕುಳಿತಿದ್ದರೆ, ಅವರ ಪತ್ನಿ ಮತ್ತು ಮಕ್ಕಳು ಮುಂದೆ ಕುಳಿತಿದ್ದರು. ಮತ್ತೊಬ್ಬ ಪ್ರಯಾಣಿಕ ಶಾಸಕರ ಕುಟುಂಬದ ಪಕ್ಕದ ಆಸನವನ್ನು ಕಾಯ್ದಿರಿಸಿದ್ದರು. ಪ್ರಯಾಣಿಕ ಬಂದು ಅವರು ಕಾಯ್ದಿರಿಸಿದ ಆಸನದಲ್ಲಿ ಕುಳಿತುಕೊಂಡಾಗ, ಶಾಸಕರು ಅದನ್ನು ಬಿಟ್ಟುಕೊಂಡುವಂತೆ ಸೂಚಿಸಿದರು, ಆದರೆ ಪ್ರಯಾಣಿಕ ಸೀಟು ಬದಲಾಯಿಸಲು ನಿರಾಕರಿಸಿದ ನಂತರ ಆತನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅವರು ಶಾಸಕರ ಕಡೆಯವರು ಎಂದು ನಂಬಲಾಗಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ರೈಲ್ವೆ ಪೊಲೀಸರು (GRP), ರೈಲಿನೊಳಗೆ ಆಸನಗಳನ್ನು ಬದಲಾಯಿಸುವುದು ಮತ್ತು ಆಕ್ಷೇಪಾರ್ಹವಾಗಿ ಕುಳಿತುಕೊಳ್ಳುವ ಭಂಗಿಯ ಕುರಿತು ವಾಗ್ವಾದ ನಡೆಯಿತು ಎಂದು ಹೇಳಿದರು. ಝಾನ್ಸಿ ನಿಲ್ದಾಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಬಿಜೆಪಿ ಶಾಸಕ ರಾಜೀವ ಸಿಂಗ್ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಕೆಲವರು ಝಾನ್ಸಿ ನಿಲ್ದಾಣದಲ್ಲಿ ರೈಲು ಹತ್ತಿ ಭೋಪಾಲಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಸುಮಾರು ಕೆಲವರು ಪ್ರಯಾಣಿಕ ತನ್ನ ಸೀಟಿನಲ್ಲಿದ್ದಾಗ ಆತನ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಹಲ್ಲೆಯ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಆದರೆ, ಪ್ರಯಾಣಿಕನು ತನ್ನ ಕುಟುಂಬದೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಶಾಸಕ ರಾಜೀವ ಸಿಂಗ್ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ದೂರು ಸ್ವೀಕರಿಸಿದ ನಂತರ ಝಾನ್ಸಿಯ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಾನ್-ಕಾಗ್ನಿಜೇಬಲ್ ರಿಪೋರ್ಟ್ (ಎನ್‌ಸಿಆರ್) ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ರೈಲಿನಲ್ಲಿರುವ ಇತರ ಪ್ರಯಾಣಿಕರು ಸೀಟು ವಿವಾದದಿಂದ ಹಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ.
(ಝಾನ್ಸಿ) ವಿಪುಲಕುಮಾರ ಶ್ರೀವಾಸ್ತವ ಅವರು, ಸೀಟು ಬದಲಾಯಿಸುವ ವಿಚಾರದಲ್ಲಿ ಈ ವಾಗ್ವಾದ ನಡೆದಿದೆ ಎಂದು ದೃಢಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement