ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಮಗಳ ವಿರುದ್ಧ ₹ 100 ಕೋಟಿ ಕಿಕ್‌ಬ್ಯಾಕ್ ಆರೋಪ ಮಾಡಿದ ಇ.ಡಿ.

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ಇಬ್ಬರು ದೆಹಲಿಯ ಹೊಸ ಮದ್ಯ ನೀತಿಯಿಂದ ಲಾಭ ಪಡೆಯಲು ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ ₹ 100 ಕೋಟಿ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡರು ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಸುಳ್ಳು ಎಷ್ಟು ಬಾರಿ ಪುನರಾವರ್ತನೆಯಾಗಿದ್ದರೂ ಅದು ಇನ್ನೂ ಸತ್ಯವಾಗುವುದಿಲ್ಲ. ಕೊನೆಯಲ್ಲಿ “ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಕೆ ಕವಿತಾ ಅವರ ಹೆಸರನ್ನು ಕೇಂದ್ರ ಸಂಸ್ಥೆ ಹೆಸರಿಸಿದೆ. ಕೆ ಕವಿತಾ ಅವರು ಮದ್ಯ ನೀತಿ ಪ್ರಕರಣದಲ್ಲಿ ಕಿಕ್‌ಬ್ಯಾಕ್‌ನಿಂದ ಲಾಭ ಪಡೆದ “ಸೌತ್ ಕಾರ್ಟೆಲ್” ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.
ದೆಹಲಿಯ ಈಗ ರದ್ದಾದ ಮದ್ಯ ನೀತಿಯ ಅಡಿಯಲ್ಲಿ ಇಂಡೋ ಸ್ಪಿರಿಟ್ಸ್ ಲಿಮಿಟೆಡ್ ಹೆಸರಿನ ಕಂಪನಿಯು ಸಗಟು ಪರವಾನಗಿಯನ್ನು ಪಡೆದುಕೊಂಡಿದೆ ಎಂದು ಆರೋಪಪಟ್ಟಿ ಹೇಳುತ್ತದೆ. ಅರುಣ್ ಪಿಳ್ಳೈ ಎಂಬವರು ಕಂಪನಿಯಲ್ಲಿ ₹ 3.4 ಕೋಟಿ ಹೂಡಿಕೆ ಮಾಡಿ ₹ 32.36 ಕೋಟಿ ಲಾಭ ಗಳಿಸಿದ್ದಾರೆ ಎಂದು ಆರೋಪಿಸಿದೆ. ಕವಿತಾ ಅವರು ಇಂಡೋ ಸ್ಪಿರಿಟ್ಸ್ ಲಿಮಿಟೆಡ್‌ನಲ್ಲಿ ಶೇ 32.5 ರಷ್ಟು ಪಾಲನ್ನು ಅವರ ಸ್ನೇಹಿತ ಶ್ರೀ ಪಿಳ್ಳೈ ಮೂಲಕ ಪಡೆದರು ಎಂದು ಇ.ಡಿ. ಆರೋಪಿಸಿದೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

ಬಿಜೆಪಿ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಇ.ಡಿ. ಆರೋಪಗಳ ಕುರಿತು ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ ಮತ್ತು ಬಿಆರ್‌ಎಸ್ ನಾಯಕಿಯನ್ನು “ಲಿಕ್ಕರ್ ಕ್ವೀನ್” ಎಂದು ಉಲ್ಲೇಖಿಸಿದ್ದಾರೆ. ಕಟುವಾಗಿ ತಿರುಗೇಟು ನೀಡಿದ ಕೆ.ಕವಿತಾ, ಬಿಜೆಪಿ ನಾಯಕರ ಮಾತುಗಳನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದು, ತಮ್ಮ ಹೆಸರನ್ನು 28,000 ಬಾರಿ ಉಲ್ಲೇಖಿಸಿದರೂ ಆರೋಪಗಳು ನಿಜವಾಗುವುದಿಲ್ಲ ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಭ್ರಷ್ಟಾಚಾರದ ಆರೋಪ ಹೊರಿಸಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದ ನಂತರ ಜುಲೈನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಮದ್ಯ ನೀತಿಯನ್ನು ರದ್ದುಗೊಳಿಸಿತು. ಭ್ರಷ್ಟಾಚಾರದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದರೆ, ಇಡಿ ಈ ವಿಷಯದಲ್ಲಿ ಹಣದ ಜಾಡು ಹಿಡಿಯುತ್ತಿದೆ.
ಡಿಸೆಂಬರ್‌ 11ರಂದು ಹೈದರಾಬಾದ್‌ನ ಅವರ ಮನೆಯಲ್ಲಿ ಮಾಜಿ ಸಂಸದೆ ಹಾಗೂ ಈಗ ವಿಧಾನಪರಿಷತ್ ಸದಸ್ಯೆಯಾಗಿರುವ ಕವಿತಾ ಅವರನ್ನು ಸಿಬಿಐ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಕವಿತಾ, ಉದ್ಯಮಿ ಶರತ್ ರೆಡ್ಡಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಹೊಸ ಮದ್ಯ ನೀತಿಯಡಿಯಲ್ಲಿ ಅನುಕೂಲಕ್ಕಾಗಿ ₹ 100 ಕೋಟಿ ನೀಡಿದೆ ಎಂದು ಇಡಿ ಆರೋಪಿಸಿದೆ.
ಹಿಂಬಾಗಿಲಿನ ಮೂಲಕ ಮದ್ಯದ ವ್ಯಾಪಾರವನ್ನು ಉತ್ತೇಜಿಸಲು ಆರೋಪಿಗಳು ಲಂಚದ ಸಂಕೀರ್ಣ ನಾಟಕವನ್ನು ಚಲನೆಗೆ ತಂದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಒಬ್ಬರು. ಮದ್ಯ ನೀತಿಯನ್ನು ರದ್ದುಪಡಿಸಿದ ನಂತರ ದೆಹಲಿ ಸರ್ಕಾರವು ಯೋಜಿತ ಆದಾಯದಲ್ಲಿ ನೂರಾರು ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದ ಕಾರಣ, ಮದ್ಯ ನೀತಿಯ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರ ನಿರ್ಧಾರವು ತಪ್ಪು ಎಂದು ದೆಹಲಿ ಸರ್ಕಾರ ಹೇಳಿದೆ.
ಈ ಆರೋಪಗಳನ್ನು ನಿರಾಕರಿಸಿರುವ ಕವಿತಾ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ನಡೆಯುವ ಯಾವುದೇ ರಾಜ್ಯಕ್ಕೆ ಇ.ಡಿ. ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ತಮ್ಮ ಪಕ್ಷದ ನಾಯಕರ ವಿರುದ್ಧದ ಇ.ಡಿ. ಮತ್ತು ಸಿಬಿಐ ಪ್ರಕರಣಗಳು “ಕೀಳುಮಟ್ಟದ ರಾಜಕೀಯ” ಎಂದು ಅವರು ಹೇಳಿದರು. “ನಿಮ್ಮ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ನೀವು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ” ಎಂದು ಹೇಳಿದ ಅವರು “ಬಿಜೆಪಿ ಎಂಟು ವರ್ಷಗಳಲ್ಲಿ ಒಂಬತ್ತು ರಾಜ್ಯಗಳನ್ನು ಅಸ್ಥಿರಗೊಳಿಸಿದೆ” ಎಂದು ಆರೋಪಿಸಿದರು.
ಕೆಸಿಆರ್ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಮತ್ತು ಕೇಂದ್ರೀಯ ಸಂಸ್ಥೆಗಳನ್ನು “ಮಾನಹಾನಿ” ಮಾಡಲು ಬಳಸುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement