ಶಿವಮೊಗ್ಗ: ನಾಲ್ವರು ಸಿಎಂ ಆಗಿದ್ದರೂ ಒಬ್ಬರಿಗೂ ಸಿಕ್ಕಿಲ್ಲ ಪೂರ್ಣಾವಧಿ ಭಾಗ್ಯ..!

ಶಿವಮೊಗ್ಗ : ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ. ಆದರೆಈ ಜಿಲ್ಲೆಯಿಂದ ಮುಖ್ಯಮಂತ್ರಿಗಳಾದ ಯಾರೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಈ ನಾಲ್ವರಲ್ಲಿ ದೀರ್ಘ ಕಾಲದ ವರೆಗೆ ಮುಖ್ಯಮಂತ್ರಿಆಯದವರೇ ಬಿ.ಎಸ್‌.ಯಡಿಯೂರಪ್ಪ. ಆದರೆ ಅವರು ರಾಜ್ಯದ ಮುಖ್ಯಮಂತ್ರಿಯಾಘಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದರೂ ಅವರಿಗೆ ಅವಧಿ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ.
ಶಿವಿಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಯಾದವರಲ್ಲಿ ಮೊದಲಿಗರೇ ಕಡಿದಾಳ ಮಂಜಪ್ಪ. ಅವರು 1956ರಲ್ಲಿಯೇ ಮುಖ್ಯಮಂತ್ರಿಯಾದವರು. ಅವರಿಂದ ಹಿಡಿದು ಇಂದಿನ ಬಿ.ಎಸ್.ಯಡಿಯೂರಪ್ಪ ಅವರ ವರೆಗೂಈ ಜಿಲ್ಲೆಯಿಂದ ಆಯ್ಕೆಯಾದ ನಾಲ್ವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಬೇರೆಬೇರೆ ಕಾರಣಗಳಿಂದ ಅರ್ಧದಲ್ಲಿಯೇ ತಮ್ಮ ಅಧಿಕಾರ ಬಿಡಬೇಕಾಯಿತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಕಡಿದಾಳ ಮಂಜಪ್ಪ ಅವರು ರಾಜ್ಯ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ ಮೊದಲ ಮುಖ್ಯಮಂತ್ರಿ ಅವರು. 1956 ಅಗಸ್ಟ್ 19ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಮಂಜಪ್ಪ ಅದೇ ವರ್ಷ (1956 ) ಅಕ್ಟೋಬರ್‌ 31ರಂದು ರಾಜಕೀಯದಲ್ಲಾದ ಬದಲಾವಣೆಯ ಕಾರಣದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು ಕೇವಲ 75 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
ಅವರ ನಂತರದಲ್ಲಿ ಶಿವಮೊಗ್ಗ ಜಿಲ್ಲೆಯಿಂದಮುಖ್ಯಮಂತ್ರಿಯಾದವರು ಎಸ್.ಬಂಗಾರಪ್ಪನವರು. 1990 ಅಕ್ಟೋಬರ್ 17ರಂದು ರಾಜ್ಯದ ಮುಖ್ಯಮಂತ್ರಿಯಾದ ಅವರು 1992ರ ನವೆಂಬರ್ 19ರ ವರೆ ಮಾತ್ರವೇ ಅಧಿಕಾರದಲ್ಲಿದ್ದರು. ರಾಜೀವ ಗಾಂಧಿ ಅವರ ನಂಬುಗೆ ಗಳಿಸಿದ್ದ ಬಂಗಾರಪ್ಪ, ವೀರೇಂದ್ರ ಪಾಟೀಲ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ರಾಜೀವ ಗಾಂಧಿ ನಿಧನದ ನಂತರ ಸೀತಾರಾಮ್‌ ಕೇಸರಿ ಅವರು ಬಂಗಾರಪ್ಪ ಅವರನ್ನು ಹುದ್ದೆಯಿಂದ ಕೆಳಗಿಸಿದ್ದರು. ಬಂಗಾರಪ್ಪ ಅವಧಿ ಕೇವಲ 2 ವರ್ಷ 33 ದಿನಗಳಿಗೆ ಮಾತ್ರ ಆಗಿತ್ತು.
ಶಿವಮೊಗ್ಗ ಜಿಲ್ಲೆಯಿಂದ ಮೂರನೆಯವರಾಗಿ ಮುಖ್ಯಮಂತ್ರಿಯಾದವರು ಜನತಾ ಪರಿವಾರದ ನಾಯಕರಾಗಿ ಗುರುತಿಸಿಕೊಂಡಿದ್ದ ಜೆ.ಎಚ್.ಪಟೇಲ್‌ ಅವರು. ಮಾಜಿ ಪ್ರಧಾನಿ ದೇವೇಗೌಡರ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು 1996ರ ಮೇ 31ರ ವರೆಗೆ ಮುಖ್ಯಮಂತ್ರಿ ಆಗಿದ್ದ ಅವರು ಅಧಿಕಾರದಲ್ಲಿದ್ದಿದ್ದು ಕೇವಲ 3 ವರ್ಷ 129 ದಿನಗಳು ಮಾತ್ರ.
ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವನ್ನು ತಂದುಕೊಟ್ಟ ಬಿ.ಎಸ್.ಯಡಿಯೂರಪ್ಪ ಅವರಿಗೂ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿದ್ದ ಯಡಿಯೂರಪ್ಪ ರಾಜಕೀಯದ ಅಸ್ತಿತ್ವ ಕಂಡುಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ರಾಜ್ಯದಲ್ಲಿ ನಾಲ್ಲಕು ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು, ಅಧಿಕಾರ ನಡೆಸಿದ್ದು ಕೇವಲ 5 ವರ್ಷ 70 ದಿನಗಳು.
ಜೆಡಿಎಸ್‌ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲು ಬಾರಿ ಮುಖ್ಯಮಂತ್ರಿಯಾಗಿ ಇದ್ದಿದ್ದು ಕೇವಲ 7 ದಿನಗಳು ಮಾತ್ರ. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಅದಿಕಾರಕ್ಕೆ ಬಂತು. ಯಡಿಯೂರಪ್ಪ 2008ರ ಮೇ 30ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯಡಿಯೂರಪ್ಪ ಪೂರ್ಣ ಅವಧಿಯ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಲೋಕಾಯುಕ್ತ ಪ್ರಕರಣದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜೈಲು ಸೇರುವ ಸ್ಥಿತಿ ಎದುರಾಗುತ್ತಲೇ ನವೆಂಬರ್ 19, 2011ರಂದು ರಾಜೀನಾಮೆ ನೀಡಬೇಕಾಯಿತು.
ನಂತರ 2018ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ 2018ರ ಮೇ ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರೂ ಕೂಡ ಕೇವಲ ಬಹುಮತದ ಕೊರತೆಯಿಂದಾಗಿ ಎರಡು ದಿನಗಳ ಕಾಲ ಮಾತ್ರವೇ ಅಧಿಕಾರದಲ್ಲಿದ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಅನೇಕ ಶಾಸಕರು ಬಿಜೆಪಿಗೆ ವಲಸೆ ಬಂದ ಪರಿಣಾಮ 2019ರ ಜುಲೈ 26 ರಂದು ಮುಖ್ಯಮಂತ್ರಿಯಾದ ಯಡಿಯೂರಪ್ಪ 2021ರ ಜುಲೈ 26ರಂದೇ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದಾರೆ. ಕಡಿದಾಳ್‌ ಮಂಜಪ್ಪ, ಬಂಗಾರಪ್ಪ, ಜೆ.ಎಚ್. ಪಟೇಲ್‌ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರೂ ಕೂಡ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುವುದಕ್ಕೆ ಮಾತ್ರ ಸಾಧ್ಯವಾಗಿಲ್ಲ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement