ಜೈಲಿನಲ್ಲಿ ರಾಜಾತಿಥ್ಯಕ್ಕೆ ಬಿತ್ತು ಬ್ರೇಕ್​; ಆರೋಪಿ ದರ್ಶನ್​ ಬಳ್ಳಾರಿಗೆ ಸ್ಥಳಾಂತರ, ಉಳಿದವರು ಬೇರೆ ಬೇರೆ ಜೈಲಿಗೆ ಶಿಫ್ಟ್..

ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ, ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜ್ಯದ ಇತರ ಜಿಲ್ಲಾ ನ್ಯಾಯಾಲಯಗಳಿಗೆ ಸ್ಥಳಾಂತರಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.
ಆರೋಪಿ ದರ್ಶನ್​ ಕೈಯಲ್ಲಿ ಸಿಗರೇಟ್​ ಇದ್ದ ಫೋಟೋ ಹಾಗೂ ವೀಡಿಯೋ ಕಾಲ್​ನಲ್ಲಿ ಬೇರೆಯವರ ಮಾತನಾಡಿರುವ ವಿಚಾರ ಬೆಳಕಿಗೆ ಬರುತ್ತದ್ದಂತೆಯೇ ಜೈಲಿನ 7 ಸಿಬ್ಬಂದಿಯನ್ನು ಸರ್ಕಾರ ಅಮಾನತು ಮಾಡಿದೆ. ಅಲ್ಲದೇ ದರ್ಶನ್​ ಸೇರಿದಂತೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಯಾರು ಯಾವ ಜೈಲಿಗೆ..?
ಬಳ್ಳಾರಿ ಜೈಲು
ದರ್ಶನ
ಬೆಳಗಾವಿ ಜೈಲು
ಪ್ರದೂಷ್‌
ಮೈಸೂರು ಜೈಲು
ಪವನ್, ರಾಘವೇಂದ್ರ,  ನಂದೀಶ
ಶಿವಮೊಗ್ಗ ಜೈಲು
ಲಕ್ಷ್ಮಣ, ಜಗದೀಶ
ಧಾರವಾಡ ಜೈಲು
ಧನರಾಜು
ವಿಜಯಪುರ ಜೈಲು
ವಿನಯ
ಕಲಬುರಗಿ ಜೈಲು
ನಾಗರಾಜ
ಪರಪ್ಪನ ಅಗ್ರಹಾರ
ಪವಿತ್ರಾಗೌಡ
ದೀಪಕ
ಅನುಕುಮಾರ
ಈಗಾಗಲೇ ತುಮಕೂರು ಜೈಲಲ್ಲಿ ಆರೋಪಿಗಳು
ರವಿ
ಕಾರ್ತಿಕ್
ನಿಖಿಲ್
ಕೇಶವಮೂರ್ತಿ

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement