ವೀಡಿಯೊ | ಶ್ರೀನಗರ : ಜೋಜಿಲಾ ಪಾಸ್‌ನಲ್ಲಿ ಭೀಕರ ಹಿಮಪಾತ ; ಸಿಲುಕಿಕೊಂಡ ವಾಹನಗಳು, 7 ಮಂದಿ ಸಾವು, ಐವರಿಗೆ ಗಂಭೀರ ಗಾಯ

ಶ್ರೀನಗರ : ಶ್ರೀನಗರ-ಲೇಹ್ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತಕ್ಕೆ (Avalanche) ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  ಹಿಮದ ರಾಶಿಯ ಅಡಿಯಲ್ಲಿ ಹಲವು ಪ್ರಯಾಣಿಕ ವಾಹನಗಳು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಲಡಾಖ್ ಭಾಗದ ಜೋಜಿಲಾ ಪಾಸ್‌ನಲ್ಲಿ ಹಠಾತ್ ಹಿಮ ಕುಸಿತ … Continued

ಉತ್ತರಾಖಂಡ ಹಿಮಪಾತ: 4 ಕಾರ್ಮಿಕರು ಸಾವು, ಐವರು ನಾಪತ್ತೆ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾದ ಗಡಿ ರಸ್ತೆ ಸಂಸ್ಥೆ (BRO) ಶಿಬಿರ ಬಳಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ. 5 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಸೇನಾಪಡೆ ಸೇರಿದಂತೆ ರಕ್ಷಣಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ. ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ 55 ಗಡಿ ರಸ್ತೆ ಸಂಸ್ಥೆ … Continued

ಕಾಶ್ಮೀರದ ಗುಲ್ಮಾರ್ಗದಲ್ಲಿ ಹಿಮಪಾತ : ರಷ್ಯಾದ ಸ್ಕೈಯರ್ ಸಾವು, 6 ಜನರ ರಕ್ಷಣೆ

ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ಸ್ಕೀ ರೆಸಾರ್ಟ್ ಪಟ್ಟಣವಾದ ಗುಲ್ಮಾರ್ಗದಲ್ಲಿ ಭಾರಿ ಹಿಮಕುಸಿತ ಸಂಭವಿಸಿದ ನಂತರ ರಷ್ಯಾದ ಒಬ್ಬ ಸ್ಕೈಯರ್ ಸಾವಿಗೀಡಾಗಿದ್ದಾರೆ. ರಷ್ಯಾದ ಏಳು ಸ್ಕೈಯರ್‌ಗಳು ಹಿಮಪಾತಕ್ಕೆ ಸಿಲುಕಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಬೃಹತ್ ಹಿಮಕುಸಿತವು ಗುರುವಾರ ಗುಲ್ಮಾರ್ಗದ ಮೇಲ್ಭಾಗ ಕಾಂಗ್‌ದೂರಿ ಇಳಿಜಾರುಗಳ ಬಳಿ ಅಪ್ಪಳಿಸಿದೆ … Continued