ಸರ್ಕಾರಕ್ಕೆ ಜನರ ಜೀವ ಲೆಕ್ಕಕ್ಕಿಲ್ಲವೇ: ಆಮ್ಲಜನಕ ಕೊರತೆ ಬಗ್ಗೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ತರಾಟೆ

ನವ ದೆಹಲಿ: ರಾಜಧಾನಿ ದೆಹಲಿ ಹಾಗೂ ದೇಶಾದ್ಯಂತ ಕೊರೊನಾ ಎರಡನೇ ಅಲೆಯಿಂದಾಗಿ ಉಲ್ಬಣಿಸಿರುವ ವೈದ್ಯಕೀಯ ಆಮ್ಲಜನಕ ಬಿಕ್ಕಟ್ಟು ನಿಭಾಯಿಸಲು ವಿಫಲವಾದ ಕೇಂದ್ರ ಸರ್ಕಾರವನ್ನು ಬುಧವಾರ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ವಾಸ್ತವ ಸ್ಥಿತಿ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದೆ. ಆಮ್ಲಜನಕ ಬಿಕ್ಕಟ್ಟಿನಿಂದಾಗಿ ಕೋವಿಡ್-19 ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಹಲವು ಆಸ್ಪತ್ರೆಗಳು ಪರದಾಡುತ್ತಿವೆ. … Continued