ಭಾರತೀಯ ಪಿಎಸ್‌ಯುಗಳ ರೂವಾರಿ, ದಂತಕಥೆ ವಿ. ಕೃಷ್ಣಮೂರ್ತಿ ನಿಧನ

ಚೆನ್ನೈ: ಬಿಎಚ್‌ಇಎಲ್, ಮಾರುತಿ ಉದ್ಯೋಗ್, ಎಸ್‌ಎಐಎಲ್ (SAIL) ಮತ್ತು ಗೇಲ್ (ಇಂಡಿಯಾ) ನಂತಹ ಹಲವಾರು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ಟರ್ನ್‌ರೌಂಡ್ ಮ್ಯಾನ್ ಎಂದು ಪರಿಗಣಿಸಲ್ಪಟ್ಟಿರುವ ವೆಂಕಟರಮಣ ಕೃಷ್ಣಮೂರ್ತಿ (97 ವರ್ಷ) ಭಾನುವಾರ ನಿಧನರಾದರು. ಕೃಷ್ಣಮೂರ್ತಿ ಅವರು ಚೆನ್ನೈನಲ್ಲಿರುವ ಅವರ ಮನೆಯಲ್ಲಿ ನಿಧನರಾದರು ಎಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರ ಅಂತಿಮ ಸಂಸ್ಕಾರ ಸೋಮವಾರ ನಡೆಯಲಿದೆ. … Continued