ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ನೋಟುಗಳು ತುಂಬಿದ್ದ ಬ್ಯಾಗ್ ಕಳುಹಿಸಲಾಗಿತ್ತು ಎಂದು ಬಾಂಬ್‌ ಸಿಡಿಸಿದ ಸ್ವಪ್ನಾ ಸುರೇಶ್

ಸಂವೇದನಾಶೀಲ ಬಹಿರಂಗದಲ್ಲಿ, 2020ರ ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಇಂದು, ಮಂಗಳವಾರ (ಜೂನ್ 7) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಪ್ನಾ ಸುರೇಶ, 2016ರಲ್ಲಿ ದುಬೈನಲ್ಲಿದ್ದಾಗ ಮುಖ್ಯಮಂತ್ರಿ ವಿಜಯನ್ ಅವರಿಗೆ ನೋಟುಗಳು ಇರುವ ಬ್ಯಾಗೇಜ್ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ. … Continued