ಮೈಸೂರು: ವಾಕಿಂಗ್‌ ವೇಳೆ ನಿವೃತ್ತ ಐಬಿ ಅಧಿಕಾರಿ ಮೇಲೆ ವಾಹನ ಹಾಯಿಸಿ ಪರಾರಿ, ಕೊಲೆ ಶಂಕೆ

ಮೈಸೂರು: ಮೈಸೂರಿನಲ್ಲಿ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿಯೋರ್ವರು ಹಿಟ್‌ & ರನ್‌ ಪ್ರಕರಣದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ಕುಲಕರ್ಣಿಯವರು ವಾಕಿಂಗ್ ಮಾಡುತ್ತಿದ್ದಾಗ ಇದು ಸಂಭವಿಸಿದ್ದು, 83 ವರ್ಷದ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ ಎಂಬವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. … Continued