ಚಂಡೀಗಢ : ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್ಗಳು ಸೇರಿದಂತೆ ಮೂವರನ್ನು ಹರಿಯಾಣದಲ್ಲಿ ಶನಿವಾರ (ಡಿಸೆಂಬರ್ 9) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶೂಟರ್ಗಳಾದ ರೋಹಿತ ರಾಥೋಡ್ ಮತ್ತು ನಿತಿನ್ ಫೌಜಿಯನ್ನು ಶನಿವಾರ ಸಂಜೆ ಚಂಡೀಗಢದಲ್ಲಿ ಬಂಧಿಸಲಾಗಿದೆ. ಅವರ ಜೊತೆಗೆ ಮತ್ತೊಬ್ಬ ಸಹಚರ ಉಧಂ ಸಿಂಗ್ ಕೂಡ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ, ರೋಹಿತ್ ಮತ್ತು ನಿತಿನ್ ಎಂಬ ಶೂಟರ್ಗಳಿಗೆ ತನ್ನ ಬೈಕ್ನಲ್ಲಿ ಸ್ಥಳದಿಂದ ಓಡಿಹೋಗಲು ಸಹಾಯ ಮಾಡಿದ ಆರೋಪದ ಮೇಲೆ ರಾಮವೀರ ಜಾಟ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು ಮತ್ತು ಆತ ಅವರನ್ನು ಅಜ್ಮೀರ್ ರಸ್ತೆಯಲ್ಲಿ ಡ್ರಾಪ್ ಮಾಡಿದ್ದರು.
ಮಂಗಳವಾರ ಸುಖದೇವ್ ಸಿಂಗ್ ಗೊಗಮೇಡಿ ಅವರ ಜೈಪುರದ ಮನೆಯಲ್ಲಿ ಚಹಾ ಸೇವಿಸಿದ ನಂತರ ಮೂವರು ವ್ಯಕ್ತಿಗಳು ರಜಪೂತ ನಾಯಕನ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಅನೇಕ ಬಾರಿ ಗುಂಡು ಹಾರಿಸಿದ್ದಾರೆ. ಅವರಲ್ಲಿ ಒಬ್ಬ ಕ್ರಾಸ್ಫೈರ್ನಲ್ಲಿ ಮೃತಪಟ್ಟರೆ, ರೋಹಿತ್ ರಾಥೋಡ ಮತ್ತು ನಿತಿನ್ ಫೌಜಿ ಪರಾರಿಯಾಗಿದ್ದರು.
ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ. ರೋಹಿತ್ ಗೋಡಾರಾ ಈ ಹಿಂದೆ ಫೇಸ್ಬುಕ್ ಪೋಸ್ಟ್ನಲ್ಲಿ ಗೊಗಮೆಡಿ ತಮ್ಮ ಶತ್ರುಗಳಿಗೆ ಸಹಾಯ ಮಾಡುತ್ತಿದ್ದಾನೆ ಮತ್ತು ಅದು ಆತನ ಮೇಲೆ ದಾಳಿ ಮಾಡಲು ಪ್ರೇರೇಪಿಸಿತು ಎಂದು ಬರೆದುಕೊಂಡಿದ್ದ.
ಗೊಗಮೆಡಿಯನ್ನು ಕೊಂದ ನಂತರ ಶೂಟರ್ಗಳು ರೋಹಿತ್ ಗೋಡಾರ ಆಪ್ತ ಸಹಾಯಕ ಹಾಗೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಿಸಿದ್ದ ವೀರೇಂದ್ರ ಚೌಹಾಣ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟರ್ಗಳ ಇತ್ತೀಚಿನ ಸ್ಥಳವನ್ನು ಅವರ ಮೊಬೈಲ್ ಫೋನ್ಗಳ ಮೂಲಕ ಟ್ರೇಸ್ ಮಾಡಿ ಪತ್ತೆಹಚ್ಚಲಾಗಿದೆ. ಆರೋಪಿಗಳು ಪರಾರಿಯಾದ ನಂತರ ವೀರೇಂದ್ರ ಚೌಹಾಣಗೆ ಕರೆಗಳನ್ನು ಮಾಡುತ್ತಿದ್ದರು.
ಅವರು ಮೊದಲು ಹಿಸಾರ್ಗೆ ರೈಲಿನಲ್ಲಿ ಹೋಗಿ ನಂತರ ಉಧಮ್ ಸಿಂಗ್ ಜೊತೆ ಮನಾಲಿಗೆ ಹೋದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಂಡಿಯಲ್ಲಿ ಒಂದು ದಿನ ತಂಗಿದ್ದರು. ಮಂಡಿಯಿಂದ ಮೂವರು ಚಂಡೀಗಢಕ್ಕೆ ಬಂದು ಅಲ್ಲಿ ಸಿಕ್ಕಿಬಿದ್ದಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ರಜಪೂತ ನಾಯಕನ ಹತ್ಯೆಯು ರಾಜಸ್ಥಾನದಲ್ಲಿ ಭಾರಿ ಪ್ರತಿಭಟನೆಗಳಿಗೆ ಕಾರಣವಾಯಿತು. ಶೂಟರ್ಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದ್ದು, ಅವರ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದವರಿಗೆ ತಲಾ ₹ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ರಾಜಸ್ಥಾನದಲ್ಲಿ ರಜಪೂತ ನಾಯಕನನ್ನು ಕೊಲ್ಲಲು ಕೆನಡಾದ ಗ್ಯಾಂಗ್ಸ್ಟರ್ ಸಂಚು ರೂಪಿಸಿದ್ದು ಹೇಗೆ..?
ರಜಪೂತ ನಾಯಕ ಹಾಗೂ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯ ಸಂಚು ಹಂತ ಹಂತವಾಗಿ ಹೇಗೆ ಬಯಲಾಗಿದೆ ಎಂಬುದನ್ನು ಪ್ರಥಮ ಬಾರಿಗೆ ವಿವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿಟಿವಿಯಲ್ಲಿ, ಡಿಸೆಂಬರ್ 5 ರಂದು ಗೊಗಮೆಡಿ ತನ್ನ ಜೈಪುರದ ಮನೆಯಲ್ಲಿ ನಾಲ್ವರೊಂದಿಗೆ ಇದ್ದಾಗ, ಸಂಭಾಷಣೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ವ್ಯಕ್ತಿಗಳು ತಮ್ಮ ಕುರ್ಚಿಗಳಿಂದ ಎದ್ದು ಅವರ ಮೇಲೆ ಗುಂಡು ಹಾರಿಸಿದ್ದರು.
ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಲ್ಲುವ ಸಂಚಿನ ಮಾಸ್ಟರ್ ಮೈಂಡ್ ರಾಜಸ್ಥಾನದ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ, ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ ಮತ್ತು ಕಳೆದ ವರ್ಷ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗಳ ಜೊತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗೊಗಮೆಡಿಯನ್ನು ಕೊಲ್ಲುವ ಕಾರ್ಯವನ್ನು ಮತ್ತು ಶೂಟರ್ ಗಳನ್ನು ನೇಮಿಸುವ ಜವಾಬ್ದಾರಿಯನ್ನು ರೋಹಿತ್ ಗೋದಾರಾ ತನ್ನ ಆಪ್ತ ಸಹಾಯಕ ವೀರೇಂದ್ರ ಚರಣ ಎಂಆಬತನಿಗೆ ವಹಿಸಿದ್ದ ಎಂದು ಮೂಲಗಳು ತಿಳಿಸಿವೆ.
ಚರಣ ಮತ್ತು ಗೋದಾರ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ರಾಜಸ್ಥಾನದ ಅಜ್ಮೀರ್ನ ಜೈಲಿನಲ್ಲಿ ಭೇಟಿಯಾಗಿದ್ದರು.
ಗೊಗಮೆಡಿ ತನ್ನ ವಿರುದ್ಧದ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಇದಕ್ಕಾಗಿ ಅವರು ಸೇಡು ತೀರಿಸಿಕೊಳ್ಳಲು ಗೋದಾರಾ ಯೋಜಿಸಿದ್ದ ಎಂದು ಮೂಲಗಳು ತಿಳಿಸಿವೆ. ಗೋದಾರನ ಕೋಪದ ಲಾಭವನ್ನು ಚರಣ ಪಡೆದುಕೊಂಡ ಮತ್ತು ಗೋಗಮೇಡಿಯನ್ನು ಕೊಲ್ಲಲು ಆತನನ್ನು ಪುಸಲಾಯಿಸಿದ. ಎರಡನೇ ಶೂಟರ್ ನಿತಿನ್ ಫೌಜಿಯನ್ನು ಜೈಲಿನಲ್ಲಿದ್ದ. ಈ ಫೌಜಿ ವಿದೇಶದಲ್ಲಿ ನೆಲೆಸಲು ಬಯಸಿದ್ದ, ಹೀಗಾಗಿ ಆತ ಚರಣ್ ಈ ಬಗ್ಗೆ ಸಲಹೆ ಪಡೆದಿದ್ದ, ಆತ ಚರಣ್ ಗೊಗಮೆಡಿ ಹತ್ಯೆ ಮಾಡುವುದರ ಬಗ್ಗೆ ತಿಳಿಸಿ ಆ ‘ಕೆಲಸ’ ಮುಗಿದ ನಂತರ ಸಹಾಯ ಮಾಡುವ ಭರವಸೆ ನೀಡಿದ್ದ ಎಂದು ಮೂಲಗಳು ತಿಳಿಸಿವೆ.
ನಂತರ ಇಬ್ಬರೂ ಶೂಟರ್ಗಳು ಗೊಗಮೆಡಿಯನ್ನು ಕೊಲ್ಲುವ ಯೋಜನೆಯನ್ನು ಮಾಡಿದರು ಮತ್ತು ಕೊಲ್ಲುವ ಮೊದಲು ಮತ್ತು ನಂತರ ತಕ್ಷಣವೇ ಚರಣ ಜೊತೆ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಚರಣ ತನ್ನ ಜಾಲದ ಮೂಲಕ ಜೈಪುರದ ಶೂಟರ್ಗಳಿಬ್ಬರಿಗೂ ಬಂದೂಕುಗಳನ್ನು ಕಳುಹಿಸಿದ್ದ. ಹತ್ಯೆ ಮಾಡಿದ ನಂತರ ಇಬ್ಬರೂ ನಗರದ ಹೋಟೆಲ್ ಬಳಿ ಬಂದೂಕುಗಳನ್ನು ಹೂತಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಬಂದೂಕುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಗೋದಾರ ಮತ್ತು ಗೊಗಮೆಡಿ ನಡುವಿನ ಆಸ್ತಿ ವಿವಾದದ ಕೋನವೂ ಬೆಳಕಿಗೆ ಬಂದಿದೆ.
ಸಿ
ನಿಮ್ಮ ಕಾಮೆಂಟ್ ಬರೆಯಿರಿ