ಮನೆ ಕಟ್ಟಲು ಕೂಡಿಟ್ಟಿದ್ದ ೫ ಲಕ್ಷ ರೂ. ಗೆದ್ದಲು ಪಾಲು

ಹೈದರಾಬಾದ್‌: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿನ ಉದ್ಯಮಿಯೊಬ್ಬರು ಮನೆಕಟ್ಟಲು ಟ್ರಂಕ್‌ನಲ್ಲಿ ಕೂಡಿಟ್ಟಿದ್ದ ಸುಮಾರು ಐದು ಲಕ್ಷ ನಗದು ಹಣ ಗೆದ್ದಲು ತಿಂದು ಹರಿದು ಚಿಂದಿಯಾಗಿ ಬಳಕೆಗೆ ಬಾರದಂತಾಗಿದೆ.
ಹಂದಿ ವ್ಯಾಪಾರಿಯಾಗಿರುವ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಮ್‌ ಗ್ರಾಮದ ನಿವಾಸಿಯಾಗಿರುವ ಬಿಜಿಲ್‌ ಜಮಾಲಯ್ಯ ಎಂಬಾತ ತಾನು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಬದಲು, ಕಬ್ಬಿಣದ ಟ್ರಂಕ್‌ನಲ್ಲಿ ಕೂಡಿಟ್ಟಿದ್ದಾರೆ. ದುರದೃಷ್ಟವಶಾತ್‌ ಎಲ್ಲಾ ನೋಟುಗಳನ್ನು ಗೆದ್ದಲು ತಿಂದಿರುವುದರಿಂದ ಉಪಯೋಗಿಸಲಾಗದ ಸ್ಥಿತಿಗೆ ತಲುಪಿದೆ.
ಹಂದಿಗಳ ವ್ಯಾಪಾರವಾಗಿರುವುದರಿಂದ ಹೆಚ್ಚಾಗಿ ನಗದು ವಹಿವಾಟೇ ನಡೆಯುತ್ತಿದ್ದು. ಹೀಗಾಗಿ ವ್ಯಾಪಾರದದಿಂದ ಗಳಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲು ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಿದ್ದರು.
ಸ್ವಂತದ್ದೊಂದು ಮನೆ ನಿರ್ಮಾಣ ಮಾಡಲು ಈ ಹಣ ಕೂಡಿಟಿದ್ದ ಜಮಾಲಯ್ಯ ಈಗ ಹಣ ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಐದು ಲಕ್ಷ ಮೌಲ್ಯದ ₹200 ಹಾಗೂ ₹2000ರ ನೋಟು ಸೇರಿ ವಿವಿಧ ಮುಖಬೆಲೆಯ ನೋಟುಗಳಿದ್ದವು.
ಚಿಂದಿಯಾದ ಉಪಯೋಗಕ್ಕೆ ಬಾರದ ನೋಟುಗಳನ್ನು ರಸ್ತೆಯಲ್ಲಿ ಆಡವಾಡುತ್ತಿರುವ ಮಕ್ಕಳಿಗೆ ಹಂಚಿದ್ದು, ಸುತ್ತಮುತ್ತಲಿನ ಮಕ್ಕಳು ಹರಿದ ಹಣದೊಂದಿಗೆ ಆಟವಾಡುತ್ತಿರುವುದರ ಬಗ್ಗೆ ಸ್ಥಳೀಯರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ವೇಳೆ ವಿಷಯ ಬಹಿರಂಗವಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement