ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ ಗಲ್ಲು ಶಿಕ್ಷೆಗೆ ಒಳಗಾದ ಮಹಿಳೆ

ಲಕ್ನೋ: ರಾಜ್ಯಪಾಲರಿಗೆ ಮತ್ತೊಂದು ಕರುಣೆ ಮನವಿ ಸಲ್ಲಿಸಿದ ನಂತರ, ಮರಣದಂಡನೆ ಶಿಕ್ಷೆಗೆ ಒಳಗಾದ ಶಬ್ನಮ್ ತನ್ನ ಗಲ್ಲಿಗೇರಿಸುವಿಕೆ ವಿಳಂಬಗೊಳಿಸಲು ಮತ್ತೊಂದು ದಾಳ ಎಸೆದಿದ್ದಾಳೆ.
ತಾನು ಮುಗ್ದೆ ಎಂದು ಹೇಳಿಕೊಂಡ ಅವಳು, 2008ರ ಅಮ್ರೋಹಾ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾಳೆ. ಭಾನುವಾರ ರಾಂಪುರ್ ಜೈಲಿನಲ್ಲಿ ತನ್ನ 12 ವರ್ಷದ ಮಗ ತಾಜ್ ಮೊಹಮ್ಮದ್‌ನನ್ನು ಭೇಟಿಯಾದಳು.
ತಾಜ್ ಸಾಕು ತಂದೆ ಉಸ್ಮಾನ್, ತನ್ನ ಮಗನನ್ನು ತಾಯಿ-ಮಗನ ನಡುವಿನ ಭೇಟಿಗಾಗಿ ಮತ್ತೆ ರಾಂಪುರ್ ಜೈಲಿಗೆ ಕರೆದೊಯ್ದರು. ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ತನ್ನ ಶಿಕ್ಷೆಗೊಳಗಾದ ತಾಯಿಯನ್ನು ಭೇಟಿಯಾದ ನಂತರ, ತಾಜ್ ತಾನು ತನ್ನ ತಾಯಿಯನ್ನು ಗಲ್ಲಿಗೇರಿಸುವುದನ್ನು ಬಯಸುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ.
ನಾನು ಈಗಾಗಲೇ ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿ ಕಳುಹಿಸಿದ್ದೇನೆ, ತನ್ನ ತಾಯಿಯನ್ನು ಕ್ಷಮಿಸಿ ಅವಳನ್ನು ಮರಣ ದಂಡನೆಯಿಂದ ಮುಕ್ತಗೊಳಿಸಬೇಕೆಂದು ವಿನಂತಿಸಿದ್ದೇನೆ” ಎಂದು ತಾಜ್ ಹೇಳಿದ. ದೊಡ್ಡ ಮತ್ತು ಒಳ್ಳೆಯ ಮನುಷ್ಯನಾಗಲು ಕಷ್ಟಪಟ್ಟು ಅಧ್ಯಯನ ಮಾಡಲು ತನ್ನ ತಾಯಿ ತನ್ನ ಬಳಿ ಕೇಳಿಕೊಂಡಿದ್ದಾಳೆ ಎಂದು ಹೇಳಿದ.
ಇದಕ್ಕೂ ಮೊದಲು ತಾಜ್ ಜನವರಿ 21 ರಂದು ತಾಯಿಯನ್ನು ಭೇಟಿಯಾಗಿದ್ದ. ಶಬ್ನಮ್ ಸಹಪಾಠಿಯಾಗಿದ್ದ ಉಸ್ಮಾನ್, ತಮ್ಮ ಭೇಟಿ ವೇಳೆ ತಾನು ನಿರಪರಾಧಿ ಎಂದು ಶಬ್ನಮ್ ಹೇಳಿದಳು ಮತ್ತು ಏಪ್ರಿಲ್ 2008 ರ ಬವಾಂಖೇರಿ ಗ್ರಾಮ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದಳು, ಅವಳಿಗೆ ಶಿಕ್ಷೆಯಾದ ಪ್ರಕರಣದಲ್ಲಿ ಪೋಷಕರು ಸೇರಿದಂತೆ ಏಳು ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದಳು.
ಅಮ್ರೋಹಾ ಕೊಲೆ ಪ್ರಕರಣದ ಅಪರಾಧಿ ಶಬ್ನಮ್ ಈಗ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಕ್ಷಮಾದಾನಕ್ಕಾಗಿ ಸಂಪರ್ಕಿಸಿದ್ದಾಳೆ.
ಅವಳು ಏಕೆ ನಿರಪರಾಧಿ ಎಂದು ಹೇಳಿಕೊಳ್ಳುತ್ತಿದ್ದಾಳೆ ಮತ್ತು ಈಗ ಸಿಬಿಐ ವಿಚಾರಣೆಗೆ ಯಾಕೆ ಒತ್ತಾಯಿಸುತ್ತಿದ್ದಾಳೆ ಎಂದು ಕೇಳಿದಾಗ, ಉತ್ತರಿಸಿದ ಉಸ್ಮಾನ್, ಅವಳು ತಾನು ನಿರಪರಾಧಿ ಎಂದು ಯಾವಾಗಲೂ ಹೇಳಿಕೊಂಡಿದ್ದಾಳೆ. ಆದರೆ ಆಕೆಯ ಮನವಿಗಳು ಕೇಳಿಸಲಿಲ್ಲ
ಶಬ್ನಮ್ ಸ್ವಾತಂತ್ರ್ಯ ಹೋರಾಟಗಾರಳಲ್ಲ. ಅವಳನ್ನು ಗಲ್ಲಿಗೇರಿಸುವ ಕುರಿತು ಮಾಧ್ಯಮ ವರದಿಗಳ ನಂತರ ಅವಳು ಭಯಭೀತರಾಗಿದ್ದಾಳೆ. ತನಗೆ ನ್ಯಾಯ ಬೇಕು ಎಂದು ಶಬ್ನಮ್ ಹೇಳಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement