ಗುರು-ಶಿಷ್ಯರ ಕದನ:ದೇಶದ ಕುತೂಹಲದ ಕೇಂದ್ರವಾದ ನಂದಿಗ್ರಾಮ

ಪಶ್ಚಿಮ ಬಂಗಾಳದ ನಂದಿಗ್ರಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.
ಈ ಬಿಜೆಪಿ ಇದನ್ನು ಪ್ರಕಟಿಸಿದ್ದು ಇದು ಪಶ್ಚಿಮ ಬಂಗಾಳದಲ್ಲಿಯೇ ಅತ್ಯಂತ ತುರುಸಿನ ಸ್ಪರ್ಧಾ ಕಣವಾಗಿ ಮಾರ್ಪಡಲಿದೆ.
ಬಿಜೆಪಿ ಔಪಚಾರಿಕವಾಗಿ ಈ ಘೋಷಣೆ ಮಾಡಿದ್ದು, ಇದು ನಂದಿಗ್ರಾಮದಲ್ಲಿ ಗುರು (ಮಮತಾ ಬ್ಯಾನರ್ಜಿ) ಶಿಷ್ಯನ (ಸುವೇಂದು ಅಧಿಕಾರಿ) ನಡುವಿನ ಕದನವಾಗಲಿದೆ.ನಂದಿಗ್ರಾಮ ಪಶ್ಚಿಇಮ ಬಂಗಾಳದ ರಾಜಕೀಯದ ಚಂಡಮಾರುತದ ಕೇಂದ್ರ ಬಿಂದುವಾಗಲಿದ್ದು, ಗೆದ್ದರೆ ಮಮತಾಗೆ ಮುಖ್ಯಮಂತ್ರಿ ಪಟ್ಟ,  ಸೋತರೆ ಏನು ಎಂಬುದು ಗೊತ್ತಿಲ್ಲ.
ನಂದಿಗ್ರಾಮವು ತೃಣಮೂಲ ಕಾಂಗ್ರೆಸ್‌ ಎಡಪಂಥೀಯ ಕೋಟೆಯನ್ನು ಛಿದ್ರಗಿಳಿಸಿ ಮಮತಾ ಬಾನರ್ಜಿ ಅಧಿಕಾರಕ್ಕೆ ಬರಲು ಕಾರಣವಾದ ಗ್ರಾಮ, ಆ ದಿನಗಳಲ್ಲಿ, ಸುವೇಂದು ಅಧಿಕಾರಿ ತೃಣಮೂಲಕಾಂಗ್ರೆಸ್‌ನ ವಾಸ್ತುಶಿಲ್ಪಿ ಮತ್ತು ಮಮತಾ ಅವರ ಬಲಗೈ ಮನುಷ್ಯ ಆಗಿದ್ದರು ಎಂಬುದು ಗಮನಾರ್ಹ. ಈಗ ಅವರಿಬ್ಬರ ಮಧ್ಯವೇ ಕದನ ಏರ್ಪಡಲಿದೆ.
ಇದುವರೆಗೂ ನಂದಿಗ್ರಾಮ ಪ್ರತಿನಿಧಿಸುತ್ತಿದ್ದ ಹಾಗೂ ಬಂಗಾಳದ ಪ್ರಬಾವಸಾಲಿ ರಾಜಕಾರಣಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್‌ನಲ್ಲಿ ಮಮತಾ ಅಳಿಯನ ವಿರುದ್ಧ ಧ್ವನಿ ಎತ್ತಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ ಮೇಲೆ ಮಮತಾ ನಂದಿಗ್ರಾಮದಲ್ಲಿ ಬೃಹತ್‌ ಸಮಾವೇಶ ಮಾಡಿದ್ದರು ಹಾಗೂ ನಂದಿಗ್ರಾಮದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಇದಕ್ಕೆ ಪ್ರತಿಯಾಗಿ ಎರಡೇ ದಿನಗಳಲ್ಲಿ ಅದಕ್ಕಿಂತ ದೊಡ್ಡ ಸಮಾವೇಶ ಮಾಡಿದ ಸವೇಂದು ಅಧಿಕಾರಿ ಮಮತಾ ಅವರಿಗೆ ಪಂಥಾಹ್ವಾನ ನೀಡಿ ೫೦ ಸಾವಿರ ಮತಗಳಿಂದ ಮಮತಾ ಅವರನ್ನು ಸೋಲಿಸದಿದ್ದರೆ ರಾಜಕೀಯ ತೊರೆಯವುದಾಗಿ ಘೋಷಿಸಿದ್ದರು. ಈಗ ಒಂದು ದಶಕದ ನಂತರ ನಮದಿಗ್ರಾಮ ಚುನಾವನಾ ಕಾರಣಕ್ಕಾಗಿ ರಾಷ್ಟ್ರಾದ್ಯಂತ ಗಮನ ಸೆಳೆದಿದೆ. ಎರಡು ಪ್ರಬಲ ನಾಯಕರ ಸ್ಪರ್ಧೆಯಾಗಿ ಮಾರ್ಪಟ್ಟಿದೆ.ಇದು ರಾಜಕೀಯ ಕದನಕ್ಕಿಂತ ಹೆಚ್ಚು ವೈಯಕ್ತಿಕ ಕದನವಾಗಿ ಪರಿಣಮಿಸಿದ್ದರಿಂದ ಗುರು-ಶಿಷ್ಯರ ಕದನದಲ್ಲಿ ಗೆಲ್ಲುವವರು ಯಾರು ಎಂಬುದು ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement