ತಮಿಳುನಾಡಿನಲ್ಲಿ ಒಂದು ಸಾವಿರ ಕೋಟಿ ರೂ.ಕಪ್ಪು ಹಣ ಪತ್ತೆ

ನವ ದೆಹಲಿ: ತಮಿಳುನಾಡಿನ ಚಿನ್ನದ ವ್ಯಾಪಾರಿಗಳು 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಮಾ.4ರಂದು ಐಟಿ ಅಧಿಕಾರಿಗಳು ಚೆನ್ನೈ , ಮುಂಬೈ, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ತ್ರಿಶೂರ್, ನೆಲ್ಲೂರು ಸೇರಿದಂತೆ 27ಕ್ಕೂ ಹೆಚ್ಚು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ 1.2 ಕೋಟಿ ರೂ. ನಗದು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಚಿನ್ನದ ವ್ಯಾಪಾರಿಗಳು ಲೆಕ್ಕಕ್ಕೆ ಸಿಗದ ಹಣ , ಬೋಗಸ್ ಕ್ಯಾಶ್ ಬಿಲ್‍ಗಳು, ಸುಳ್ಳು ಲೆಕ್ಕ ಬರೆದಿಟ್ಟಿರುವುದು ಪತ್ತೆಯಾಗಿದೆ.
ನೋಟು ಬ್ಯಾನ್‌ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು ಬೋಗಸ್ ಬಿಲ್‍ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಹಣ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿನ್ನದ ವ್ಯಾಪಾರಿಗಳು ಅಕ್ರಮವಾಗಿ ಸ್ಥಳೀಯ ಫೈನಾನ್ಷಿಯರ್‍ಗಳಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಲೆಕ್ಕಕ್ಕೆ ಸಿಗದಷ್ಟು ಚಿನ್ನದ ವ್ಯಾಪಾರ ಮಾಡಿ ತಪ್ಪು ಲೆಕ್ಕ ನಮೂದಿಸಿದ್ದಾರೆ. ಇದುವರೆಗೂ ತಮಿಳುನಾಡಿನ ಚಿನ್ನದ ವ್ಯಾಪಾರಿಗಳು ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಒಂದು ಸಾವಿರ ಕೋಟಿಗೂ ಹೆಚ್ಚು ಕಳ್ಳ ವ್ಯವಹಾರ ನಡೆಸಿರುವುದನ್ನು ಆದಾಯ ಇಲಾಖೆ ಅಕಾರಿಗಳು ಬಹಿರಂಗ ಪಡಿಸಿದ್ದಾರೆ.
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಏ.6ರಂದು ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿ ಒಂದು ಸಾವಿರ ಕೋಟಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಪತ್ತೆ ಹಚ್ಚಿರುವುದು ಸಂಚಲನ ಸೃಷ್ಟಿಸಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 3

ಶೇರ್ ಮಾಡಿ :

  1. Geek

    ಇದು ಕಪ್ಪುಹಣ ಹಿಡಿಯಲು ಮಾಡಿದ ದಾಳಿಯೋ ಅಥವಾ ಚುನಾವಣಾ ಸಂದರ್ಭದಲ್ಲಿ ಬ್ಲಾಕ್ ಮೇಲ್ ತಂತ್ರವೋ?

ನಿಮ್ಮ ಕಾಮೆಂಟ್ ಬರೆಯಿರಿ

advertisement