ಎಸ್‌ಯುವಿ ಜಿಲೆಟಿನ್‌ ಪ್ರಕರಣವೂ… ವಾಝೆ ಬಂಧನವೂ…ಮುಂಬೈ ಪೊಲೀಸ್‌ ಆಯುಕ್ತರ ವರ್ಗಾವಣೆಯೂ….

ಮುಂಬೈ : ಮುಂಬೈ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ಮಹಾರಾಷ್ಟ್ರದ ಗೃಹರಕ್ಷಕ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಬುಧವಾರ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹೇಮಂತ್ ನಾಗರಲೆ ಅವರು ಮುಂಬೈನ ಹೊಸ ಪೊಲೀಸ್ ಆಯುಕ್ತರಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ.
ವಿವಾದಿತ ಮುಂಬೈ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ಏಕೆ ದೂರವಿಡಲಾಯಿತು ಎಂಬುದು ಎಲ್ಲರ ಪ್ರಶ್ನೆ.ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆಯಾದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಹಿನ್ನೆಲೆಯಲ್ಲಿ ಪರಮ್ ಬಿರ್ ಸಿಂಗ್ ಅವರ ವರ್ಗಾವಣೆಯಾಗಿದೆ.
ಎಸ್‌ಯುವಿಯಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವ ತನಿಖೆಗೆ ಸಂಬಂಧಿಸಿದಂತೆ ಮಾರ್ಚ್ 13 ರಂದು ವಾಝೆ ಅವರನ್ನು ಬಂಧಿಸಲಾಯಿತು. ಎಸ್‌ಯುವಿ ಮಾಲೀಕ ಮನ್ಸುಖ್ ಹಿರೆನ್ ನಿಗೂಢ ಸಾವಿನ ನಂತರ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಒಂದು ವಾರದ ಹಿಂದೆಯೇ ವಾಹನವನ್ನು ಕಳವು ಮಾಡಲಾಗಿದೆ ಎಂದು ಹಿರೆನ್‌ ಮೊಲೀಸ್‌ ದೂರು ದಾಖಲಿಸಿದ್ದರು. ಮಾರ್ಚ್ 5 ರಂದು ಮುಂಬ್ರಾದ ರೆಟಿ ಬಂಡರ್ ಕ್ರೀಕ್ನಲ್ಲಿ ಅವರ ಶವ ಪತ್ತೆಯಾಗಿತ್ತು.
ಹಿರೆನ್ ಅವರ ಪತ್ನಿ ವಿಮ್ಲಾ ನಂತರ ಸಚಿನ್ ವಾಝೆ ತನ್ನ ಗಂಡನನ್ನು ಕೊಂದಿದ್ದಾರೆ ಎಂದು ಆರೋಪಿಸಿದರು. ಮಹಾರಾಷ್ಟ್ರ ಎಟಿಎಸ್‌ಗೆ ನೀಡಿದ ದೂರು ಮತ್ತು ಹೇಳಿಕೆಯಲ್ಲಿ, “ನಿರ್ದಿಷ್ಟ ಸಂದರ್ಭಗಳ ಕಾರಣದಿಂದ ನನ್ನ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ನನಗೆ ಖಾತ್ರಿಯಿದೆ. ಪೊಲೀಸ್ ಅಧಿಕಾರಿ ಸಚಿನ್ ವಾಝೆ ನನ್ನ ಗಂಡನನ್ನು ಕೊಂದಿರಬಹುದೆಂದು ನಾನು ಬಲವಾಗಿ ಅನುಮಾನಿಸುತ್ತಿದ್ದೇನೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ನಾನು ಪೊಲೀಸರಿಗೆ ವಿನಂತಿಸುತ್ತೇನೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ಆಂಟಿಲಿಯಾದ ಹೊರಗೆ ಕಂಡುಬಂದ ಜೆಲೆಟಿನ್ ಸ್ಟಿಕ್ಸ್ ತುಂಬಿದ ಸ್ಕಾರ್ಪಿಯೋ ಕಳೆದ ಮೂರು ವರ್ಷಗಳಿಂದ ತನ್ನ ಪತಿಗೆ ಸೇರಿದೆ ಎಂದು ವಿಮ್ಲಾ ಹೇಳಿದ್ದಾರೆ. ಆದಾಗ್ಯೂ, ಈ ವಾಹನವನ್ನು 2020 ರ ನವೆಂಬರ್‌ನಲ್ಲಿ ಹಿರೆನ್‌ನ ನಿಯಮಿತ ಗ್ರಾಹಕ ವಾಝೆಗೆ ನೀಡಲಾಗಿತ್ತು. ಪೊಲೀಸ್ ಅಧಿಕಾರಿ ಫೆಬ್ರವರಿ 5 ರಂದು ಕಾರಿನ ಸರ್ವಿಸ್‌ಗಾಗಿ ತನ್ನ ಚಾಲಕನೊಂದಿಗೆ ಕಾರನ್ನು ಹಿರೆನ್‌ನ ಗ್ಯಾರೇಜ್‌ಗೆ ಕಳುಹಿಸಿದ್ದಾನೆ. ನಂತರ ಹಿರೆನ್‌ ಫೆ.೧೭ರಂದು ಕಾರನ್ನು ಡ್ರೈವ್‌ಗೆ ತೆಗೆದುಕೊಂಡಾಗ ಸ್ಟೀರಿಂಗ್ ಜಾಮ್ ಆಯಿತು. ಆಗ ಮನ್ಸುಖ್ ಅದನ್ನು ಐರೋಲಿ-ಮುಲುಂಡ್ ಲಿಂಕ್ ರಸ್ತೆಯಲ್ಲಿ ನಿಲ್ಲಿಸಿದ್ದರು. ಅಲ್ಲಿಂದ ಕಾರನ್ನು ಕಳುವು ಮಾಡಲಾಗಿತ್ತು. ಆ ನಂತರ ಅವರ ಪೊಲೀಸ್‌ ದೂರು ದಾಖಲಿಸಿದ್ದರು ಎಂದು ಹಿರೆನ್‌ ಪತ್ನಿ ವಿಮ್ಲಾ ಆರೋಪಿಸಿದ್ದಾರೆ. ಒಂದು ವಾರದ ನಂತರ ಕಾರು ಆಂಟಿಲಿಯಾದ ಹೊರಗೆ ಸ್ಫೋಟಕಗಳೊಂದಿಗೆ ಪತ್ತೆಯಾಗಿತ್ತು.
ಸ್ಫೋಟಕಗಳಿಂದ ತುಂಬಿದ ಎಸ್‌ಯುವಿ ಪತ್ತೆಯಾದ ದಿನದಂದು ಮುಖೇಶ್ ಅಂಬಾನಿಯ ನಿವಾಸದ ಹೊರಗೆ ಸಚಿನ್ ವಾಝೆ ಇರುವಿಕೆಯನ್ನು ಎನ್‌ಐಎ ಬುಧವಾರ ದೃಢಪಡಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ದೊಡ್ಡ ಕರವಸ್ತ್ರದಿಂದ ತಲೆ ಮುಚ್ಚಿದ ವ್ಯಕ್ತಿಯನ್ನು ಆಂಟಿಲಿಯಾದ ಹೊರಗೆ ಗುರುತಿಸಲಾಗಿದೆ. ಎನ್ಐಎ ಹೇಳಿದ್ದು ವಾಝೆ, ಜೋಲಾಡುವ ಬಟ್ಟೆ ಮತ್ತು ತಲೆ-ಸ್ಕಾರ್ಫ್ ಧರಿಸಿ ತನ್ನ ಗುರುತನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದ. ತನ್ನ ದೇಹ, ಭಾಷೆ ಮತ್ತು ಮುಖ ಮರೆಮಾಡಲು ವಾಝೆ ದೊಡ್ಡ ಗಾತ್ರದ ಕುರ್ತಾ-ಪೈಜಾಮವನ್ನು ಧರಿಸಿದ್ದ ಎಂದು ಎನ್ಐಎ ಹೇಳಿದೆ.
ಇಡೀ ಪ್ರಕರಣದ ಹಾಗೂ ನಂತರದ ತನಿಖೆ ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಜುಗರ ತಂದಿದೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಝೆ ಅವರನ್ನು ರಕ್ಷಿಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು ವಜಾ ಮಾಡಬೇಕೆಂದು ಅವರುಬಿಜೆಪಿ ಸದನದಲ್ಲಿ ಒತ್ತಾಯಿಸಿತ್ತು.
ಖವಾಜಾ ಯೂನಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ವಾಝೆ ವಿರುದ್ಧ ನ್ಯಾಯಾಲಯದ ಆದೇಶದ ಹೊರತಾಗಿಯೂ, ಪರಮ್ ಬಿರ್ ಸಿಂಗ್ ನೇತೃತ್ವದ ಪರಿಶೀಲನಾ ಸಮಿತಿಯು 16 ವರ್ಷಗಳ ನಂತರ ಸಚಿನ್ ವಾಝೆ ಅವರನ್ನು ಪುನಃ ನೇಮಕ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ, ಕಳೆದ ವರ್ಷ ಕೊವಿಡ್‌ -19 ಸಾಂಕ್ರಾಮಿಕ ರೋಗದ ಮಧ್ಯೆ ಅವರನ್ನು ಪುನಃ ನೇಮಿಸಿದ್ದು, ವಾಝೆ ನೇರವಾಗಿ ಪರಮ್ ಬಿರ್ ಸಿಂಗ್‌ಗೆ ವರದಿ ಮಾಡುತ್ತಿದ್ದರು.ಈಗ ಈ ಪ್ರಕರಣದಲ್ಲಿ ವಾಝೆ ಬಂಧಿಸಿದ ನಂತರ ಸರ್ಕಾರಕ್ಕೆ ಬೇರೆ ದಾರಿಯೇ ಇರದ ಕಾರಣ ಪರಮ್ ಬಿರ್ ಸಿಂಗ್ ಅವರನ್ನು ವರ್ಗಾವಣೆ ಮಾಡಬೇಕಾಯಿತು.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement