ಅಕೋಲಾ: ಕಾಮದಹನ ಬೆಂಕಿಗೆ ನೀರು ಸುರಿದ ಅಲ್ಪಸಂಖ್ಯಾತ ಯುವಕರು..!

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ರಂಗಪಂಚಮಿ ಮುನ್ನಾದಿನ ಬುಧವಾರ 200-300 ಅಲ್ಪಸಂಖ್ಯಾತಯುವಕರ ಗುಂಪು ಹಿಂದೂಗಳು ಕಾಮದಹನ ಧಾರ್ಮಿಕ ವಿಧಿವಿಧಾನ ಮಾಡುವುದನ್ನು ತಡೆದಿದ್ದು, ಕಾಮದಹನ ಮಾಡುವಾಗ ನೀರು ಸುರಿದಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಕೋಲಾದ ಪೋಲಾ ಚೌಕ್‌ನಲ್ಲಿರುವ ಹನುಮಾನ್ ದೇವಸ್ಥಾನದ ಸಮೀಪ ನಡೆದಿದೆ. ಈ ದೇವಾಲಯವು ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿದೆ ಎಂದು ವರದಿಯಾಗಿದೆ. ಹಿಂದೂಗಳು ಮೆರವಣಿಗೆ ಮೂಲಕ ಬಂದು ಕಾಮದಹನ ಮಾಡುವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಯುವಕರ  ಗುಂಪು ಇದನ್ನು ವಿರೋಧಿಸಿತು. ನಂತರ ಎರಡೂ ಸಮುದಾಯದವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಮುಸ್ಲಿಂ ಯುವಕರು ಕಾಮದಹನ ಮಾಡುವಾಗ ನೀರು ಸುರಿದು ಬೆಂಕಿ ನಂದಿಸಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ದೇವಸ್ಥಾನದಲ್ಲಿ ಆರತಿ ಬೆಳಗುವುದನ್ನು ತಡೆದ ಅಲ್ಪಸಂಖ್ಯಾತ ಯುವಕರ  ಗುಂಪು ” ಘೋಷಣೆ ಕೂಗಿತು..
ಹನುಮಾನ ದೇವಾಲಯವನ್ನು ಕಳೆದ ಹಲವಾರು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಪ್ರದೇಶದ ಹಿಂದೂ ಯುವಕರು ಪ್ರತಿ ಶನಿವಾರ ಹನುಮಾನ್ ಚಾಲಿಸಾ ಮತ್ತು ಆರತಿ ಪ್ರದರ್ಶನ ನೀಡಲು ಪ್ರಾರಂಭಿಸಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಸೋಷಿಯಲ್ ಮೀಡಿಯಾ ಸದಸ್ಯ ಸ್ವಾಂದ್ ಕೊಂಡೋಲಿಕರ್ ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ
[

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement