ವಾಝೆ ಎನ್ಐಎ ಕೋರ್ಟಿಗೆ ಕೊಡಲು ಮುಂದಾಗಿದ್ದ ಪತ್ರದಲ್ಲಿ ಸ್ಫೋಟಕ ಆರೋಪ.. ಕೋಟ್ಯಂತರ ರೂ. ವಸೂಲಿ ಮಾಡಲು ಸಚಿವರುಗಳಿಂದ ಆದೇಶದ ಬಗ್ಗೆ ಪ್ರಸ್ತಾಪ..!!

ಮುಂಬೈ: ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣದ ಮತ್ತೊಂದು ಸ್ಫೋಟಕ ಬೆಳವಣಿಗೆಯಲ್ಲಿ, ಪ್ರಧಾನ ಆರೋಪಿ ಸಚಿನ್ ವಾಝೆ ಈಗ ಅನಿಲ್ ದೇಶ್ಮುಖ್ ಮತ್ತು ಅನಿಲ್ ಪರಬ್ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಎನ್ಐಎ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ.
ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲು ಯತ್ನಿಸಿದ ಪತ್ರದಲ್ಲಿ ಅವರು ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್, ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಫ್ರೀ ಪ್ರೆಸ್‌ ಜರ್ನಲ್‌ ಹಾಗೂ ಒಪಿಂಡಿಯಾ ಸೇದರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ,  ಆಂಟಿಲಿಯಾ ಬಾಂಬ್ ಬೆದರಿಕೆ ಹಾಗೂ ಮನ್ಸುಖ್‌ ಹಿರೆನ್‌ ಪ್ರಕರಣದಲ್ಲಿ ಎನ್ಐಎಬಂಧಿಸಿರುವ ಸಚಿನ್‌ ವಾಝೆ ಈ ಪತ್ರವನ್ನು ಸಲ್ಲಿಸಲು ಪ್ರಯತ್ನಿಸಿದಾಗ ನ್ಯಾಯಾಲಯವು ಸರಿಯಾದ ಪ್ರಕ್ರಿಯೆ ಅನುಸರಿಸಲು ಹೇಳಿದೆ ಮತ್ತು ಅದನ್ನು ಸ್ವೀಕರಿಸಲಿಲ್ಲ.
ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆರೋಪಗಳನ್ನು ಈ ಪತ್ರದಲ್ಲಿ ಸಮರ್ಥಿಸುತ್ತಾ, ನಗರದ ಬಾರ್‌ಗಳಿಂದ ಹಣ ಸಂಗ್ರಹಿಸಲು ಮಾಜಿ ಗೃಹ ಸಚಿವ ದೇಶ್ಮುಖ್‌ ತಮ್ಮನ್ನು ಕೇಳಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿದ್ದಾರೆ. ತಮ್ಮನ್ನು 2021ರ ಜನವರಿಯಲ್ಲಿ ಮಂತ್ರಿಗಳ ನಿವಾಸ ಜ್ಞಾನೇಶ್ವರಿಗೆ ಕರೆಸಲಾಯಿತು.”ಮುಂಬೈಯಲ್ಲಿ ಸುಮಾರು 1650 ಬಾರ್ ಮತ್ತು ರೆಸ್ಟೋರೆಂಟ್‌ಗಳಿವೆ ಎಂದು ಸಚಿವ ಸರ್ ಹೇಳಿದ್ದರು ಮತ್ತು ಅವರಿಂದ ತಲಾ 3 ರಿಂದ 3.5 ಲಕ್ಷ ರೂ.ಗಳನ್ನು ಸಂಗ್ರಹಿಸಲು ಹೇಳಿದ್ದರು” ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆಗ ಸಚಿವರಾದ ಪಿ.ಎ.ಕುಂದನ್ ಉಪಸ್ಥಿತರಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಾವು ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಮತ್ತು ಅದು ತಮ್ಮ ಸಾಮರ್ಥ್ಯಗಳಿಗೆ ಮೀರಿದೆ ಎಂದು ಸಚಿವರಿಗೆ ತಿಳಿಸಿದ್ದೇನೆ ಎಂದು ತಮ್ಮ ಪತ್ರದಲ್ಲಿ ವಾಝೆ ಆರೋಪಿಸಿದ್ದಾರೆ.
ಕ್ಯಾಬಿನ್‌ನಿಂದ ಹೊರಬಂದ ಕೂಡಲೇ, ಪಿ.ಎ. ಕುಂದನ್ ಅವರು ತನ್ನ ಕೆಲಸವನ್ನು ಉಳಿಸಿಕೊಳ್ಳಲು ಮತ್ತು ಪೋಸ್ಟ್ ಅನ್ನು ಹಾಗೇ ಉಳಿಸಿಕೊಳ್ಳಲು ಬಯಸಿದರೆ ಸಚಿವರ ಸೂಚನೆಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಿದ್ದೇನೆ ಎಂದು ವಾಝೆ ಹೇಳಿದ್ದಾರೆ ಮತ್ತು ಭವಿಷ್ಯದಲ್ಲಿ ತಾವು ಸುಳ್ಳು ವಿವಾದದಲ್ಲಿ ಸಿಲುಕಿಕೊಳ್ಳಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ
ಗೌರವಾನ್ವಿತ ಪೊಲೀಸ್‌ ಆಯುಕ್ತರು ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಯಾರಿಂದ ಮತ್ತು ಯಾರಿಗಾದರೂ ಅಂತಹ ಯಾವುದೇ ಅಕ್ರಮ ಹಣ ಸಂಗ್ರಹಣೆಯಲ್ಲಿ ಭಾಗಿಯಾಗದಂತೆ ನನಗೆ ಸ್ಪಷ್ಟವಾಗಿ ಸೂಚನೆ ನೀಡಿದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆಲಸ ಉಳಿಸಿಕೊಳ್ಳಲು 2 ಕೋಟಿ ರೂ:
ದೇಶ್ಮುಖ್ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾದ ಮತ್ತೊಂದು ಉದಾಹರಣೆಯೆಂದರೆ, ಕಳೆದ ವರ್ಷ ವಾಝೆ ಅವರನ್ನು ಮತ್ತೆ ಸೇವೆಯಲ್ಲಿ ಸೇರಿಸಿದಾಗ ವಾಝೆ ಅಮಾನತುಗೊಳಿಸುವಂತೆ ಶರದ್ ಪವಾರ್ ಆದೇಶಿಸಿದ್ದರು ಮತ್ತು ದೇಶಮುಖ್ ಅವರಿಗೆ ನಾಗ್ಪುರದಿಂದ ದೂರವಾಣಿಯಲ್ಲಿ ಮಾಹಿತಿ ನೀಡಿದ್ದರು.ಆದರೆ 2 ಕೋಟಿ ರೂ. ನೀಡಿದರೆ ಪವಾರ್ ಅವರಿಗೆ ಮನವರಿಕೆ ಮಾಡುವುದಾಗಿ ದೇಶ್ಮುಖ್‌ ಭರವಸೆ ನೀಡಿದರು. ಇಷ್ಟು ದೊಡ್ಡ ಮೊತ್ತ ಪಾವತಿಸಲು ಅಸಮರ್ಥತೆ ವ್ಯಕ್ತಪಡಿಸಿದಾಗ ನಂತರ ಪಾವತಿಸಬಹುದೆಂದು ದೇಶಮುಖ್ ಹೇಳಿದ್ದಾರೆ ಎಂದು ಅವರು       ಪತ್ರದಲ್ಲಿ  ಹೇಳಿದ್ದಾರೆ.
ಗುಟ್ಕಾ ಮಾರಾಟಗಾರರಿಂದ 100 ಕೋಟಿ ರೂ: ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವ ಈ ಪತ್ರದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಅಜಿತ್‌ ಪವಾರ್‌ಗೆ ಬಹಳ ಆಪ್ತರಾಗಿದ್ದ ದರ್ಶನ್ ಘೋಡಾವತ್ ತನ್ನನ್ನು ಸಂಪರ್ಕಿಸಿದರು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪತ್ರದಲ್ಲಿ, ದರ್ಶನ್ ಘೋಡಾವತ್ ಅವರು, ಮಹಾರಾಷ್ಟ್ರದಲ್ಲಿ ಅಕ್ರಮ ಗುಟ್ಕಾ ಮತ್ತು ತಂಬಾಕು ವ್ಯಾಪಾರದ ಬಗ್ಗೆ ವಿವರಿಸಿದರು ಮತ್ತು ನನಗೆ ಫೋನ್ ಸಂಖ್ಯೆಗಳನ್ನು ನೀಡಿದರು. ಈ ಅಕ್ರಮ ಗುಟ್ಕಾ ಮಾರಾಟಗಾರರಿಂದ ನಾನು ಮಾಸಿಕ 100 ಕೋಟಿ ರೂ. ಸಂಗ್ರಹಿಸಲು ಹೇಳಿದಾಗ ಅಂತಹ ಕಾನೂನುಬಾಹಿರ ಕೃತ್ಯ ಮಾಡಲು ನಾನು ನಿರಾಕರಿಸಿದ್ದೇನೆ. ಆಗ ಆ ವ್ಯಕ್ತಿ ಮತ್ತೆ ನನ್ನ ಹುದ್ದೆಯನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
2021 ರ ಮೊದಲ ದಿನದಿಂದ ಅಕ್ರಮ ಗುಟ್ಕಾ ಮಾರಾಟಗಾರರ ವಿರುದ್ಧ ಸಮರ ಸಾರಿದರು ಮತ್ತು ಕೋಟಿ ಮೌಲ್ಯದ ಅಕ್ರಮ ಗುಟ್ಕಾವನ್ನು ವಶಪಡಿಸಿಕೊಂಡರು ಮತ್ತು ಕಾರ್ಖಾನೆಗಳ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಂತಹ ಕ್ರಮ ಕೈಗೊಂಡಾಗ ಶ್ರೀ ಘೋಡಾವತ್ ನನ್ನ ಕಚೇರಿಗೆ ಬಂದು ಈ ತಯಾರಕರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಗೌರವಾನ್ವಿತ ಡೆಪ್ಯುಟಿ ಸಿಎಂ ಸರ್ ಅವರಿಗೆ ವ್ಯಕ್ತಪಡಿಸಿದ ಅಸಮಾಧಾನದ ಬಗ್ಗೆ ತಿಳಿಸಿದರು ಮತ್ತು ಈ ತಯಾರಕರನ್ನು ಘೋಡಾವತ್‌ ಅವರನ್ನು ಭೇಟಿ ಮಾಡಲು ಅಥವಾ ನೇರವಾಗಿ ಗೌರವಾನ್ವಿತ ಡೆಪ್ಯುಟಿ ಸಿಎಂ ಸರ್ ಅವರನ್ನುಭೇಟಿ ಮಾಡುವಂತೆ ಕೇಳಬೇಕೆಂದು ನನ್ನನ್ನು ಒತ್ತಾಯಿಸಿದರು.ಆದರೆ ತಾನು ಅವರ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.
ಫೈಲ್ ಮುಚ್ಚಲು 50 ಕೋಟಿ ರೂ: ಪತ್ರದಲ್ಲಿ ಸಚಿವ ಅನಿಲ್ ಪರಬ್ ವಿರುದ್ಧವೂ ಆರೋಪಗಳಿವೆ. ಜುಲೈ ಅಥವಾ ಆಗಸ್ಟ್ 2020ರಲ್ಲಿ ಪರಬ್ ಅವರು ತಮ್ಮ ಅಧಿಕೃತ ಬಂಗಲೆಗೆ ಕರೆದರು ಎಂದು ಪತ್ರದಲ್ಲಿ ವಾಝೆ ಆರೋಪಿಸಿದ್ದಾರೆ.
“ಸಭೆಯಲ್ಲಿ ಸಚಿವರು ಸರ್ ಅವರು ಪ್ರಾಥಮಿಕ ವಿಚಾರಣೆಯಲ್ಲಿದ್ದ ಎಸ್‌ಬಿಯುಟಿ ದೂರನ್ನು ಪರಿಶೀಲಿಸಲು ನನ್ನನ್ನು ಕೇಳಿದರು ಮತ್ತು ಎಸ್‌ಬಿಯುಟಿಯ ಟ್ರಸ್ಟಿಗಳನ್ನು ಅವರ ಬಳಿಗೆ ಕರೆತರಲು ನನ್ನನ್ನು ಕೇಳಿದರು. ಈ ವಿಚಾರಣೆಯನ್ನು ಮುಚ್ಚುವ ಸಲುವಾಗಿ ಎಸ್‌ಬಿಯುಟಿಯಿಂದ 50 ಕೋಟಿ ರೂ.ಗಳನ್ನು ಪಡೆಯಲು ಪ್ರಾಥಮಿಕ ಮಾತುಕತೆಗಳನ್ನು ಪ್ರಾರಂಭಿಸಲು ಅವರು ಒತ್ತಾಯಿಸಿದರು. ಇದನ್ನು ಮಾಡಲು ತನ್ನ ಅಸಾಮರ್ಥ್ಯವನ್ನು ಮತ್ತೆ ವ್ಯಕ್ತಪಡಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗುತ್ತಿಗೆದಾರರಿಂದ 100 ಕೋಟಿ ರೂ: ಈ ವರ್ಷದ ಜನವರಿಯಲ್ಲಿ, ಪರಬ್ ಮತ್ತೆ ತನ್ನ ಅಧಿಕೃತ ಬಂಗಲೆಗೆ ಕರೆ ಮಾಡಿ, ಬಿಎಂಸಿಯಲ್ಲಿ ಪಟ್ಟಿ ಮಾಡಲಾಗಿರುವ ಮೋಸದ ಗುತ್ತಿಗೆದಾರರ ಬಗ್ಗೆ ಗಮನಹರಿಸಲು ಕೇಳಿಕೊಂಡರು ಮತ್ತು ಅಂತಹ 50 ಗುತ್ತಿಗೆದಾರರಿಂದ ಕನಿಷ್ಠ ರೂ. 2 ಕೋಟಿ ರೂ. ಸಂಗ್ರಹಿಸುವಂತೆ ಕೇಳಿಕೊಂಡರು.ಗುತ್ತಿಗೆದಾರರ ಮೇಲೆ ಅನಾಮಧೇಯ ದೂರಿನ ಮೇರೆಗೆ ವಿಚಾರಣೆ ನಡೆಯುತ್ತಿದೆ ಮತ್ತು ಕ್ರಿಮಿನಲ್ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಯಿಂದ ತಾನು ವರ್ಗಾವಣೆಯಾಗುವವರೆಗೂ ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.
ಏಪ್ರಿಲ್ 3 ರ ಪತ್ರದ ಕೊನೆಯಲ್ಲಿ “ಯುವರ್‌ ಆನರ್‌ , ನನಗೆ ನ್ಯಾಯ ದೊರಕಿಸಿಕೊಡಲು ನಾನು ಈ ಸಂಗತಿಗಳನ್ನು ಯುವರ್‌ ಆನರ್‌ ನಿಮ್ಮ ಮುಂದೆ ಇಡುತ್ತಿದ್ದೇನೆ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement