ಕೊರೊನಾ ಹೆಚ್ಚಳ:ಕರ್ನಾಟಕದಲ್ಲಿ ಏಪ್ರಿಲ್​ 23ರಿಂದ ಚಿತ್ರಮಂದಿರ ಬಂದ್‌

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಸ್ವಯಂ ಪ್ರೇರಿತವಾಗಿ ಏಪ್ರಿಲ್​ 23ರಿಂದ ಮುಚ್ಚಲು ಥಿಯೇಟರ್​ ಮಾಲೀಕರು ನಿರ್ಧರಿಸಿದ್ದಾರೆ.
ಸೋಂಕು ಹೆಚ್ಚಳ ಜೊತೆಗೆ ಜನರು ಕೂಡ ಸಿನಿಮಾ ಮಂದಿರಗಳತ್ತ ಮುಖ ಮಾಡುತ್ತಿಲ್ಲ. ಜೊತೆಗೆ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಚಿತ್ರ ಮಂದಿರಗಳ ನಿರ್ವಹಣೆ ಕಷ್ಟವಾಗುತ್ತಿದೆಎಂದು ವೀರೇಶ್​ ಚಿತ್ರಮಂದಿರದ ಮಾಲೀಕ ಕೆ. ವಿ. ಚಂದ್ರಶೇಖರ್​ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 650ಕ್ಕೂ ಹೆಚ್ಚೂ ಚಿತ್ರಮಂದಿಗಳನ್ನು ಇದೇ ಏಪ್ರಿಲ್​ 23ರಿಂದ ಬಂದ್​ ಮಾಡಲಾಗುವುದು. ಸೋಂಕು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಲಾಕ್​ಡೌನ್​ನಿಂದಾಗಿ ಚಿತ್ರ ಮಂದಿರಗಳು ನಷ್ಟ ಅನುಭವಿಸಿದ್ದವು. ಕಳೆದ ಫೆಬ್ರವರಿಯಿಂದ ಶೇ 50ರಷ್ಟು ಆಸನ ಭರ್ತಿಗೆ ಸರ್ಕಾರಗಳು ಅನುಮತಿ ನೀಡಿದ್ದವು. ಇದಾದ ಬಳಿಕ ಒಂದೆರಡು ಬಿಗ್​ ಬಜೆಟ್​ ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನೇನು ತುಸು ಚೇತರಿಕೆ ಕಾಣಲಿದೆ ಎಂಬಷ್ಟರಲ್ಲಿಯೇ ಮತತೆ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಸೋಂಕು ಹೆಚ್ಚಳದ ಕಾರಣ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬರುತ್ತಿಲ್ಲ. ಚಿತ್ರ ಬಿಡುಗಡೆಯೇ ಆಗುತ್ತಿಲ್ಲ. ಈ ಸಮಯದಲ್ಲಿ ಚಿತ್ರ ಮಂದಿರ ನಿರ್ವಹಣಾಕಾರರ ಆರೋಗ್ಯ ಕಾಪಾಡುವುದು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement