ಹಿರೇಬೆಣಕಲ್‌ ಯುನೆಸ್ಕೋ ಪಾರಂಪರಿಕ ತಾಣಕ್ಕೆ ಅರ್ಹ ಯಾಕೆಂದರೆ ಇಲ್ಲಿನ ರಚನೆಗಳೆಲ್ಲ ಸುಮಾರು 3000 ವರ್ಷಗಳಷ್ಟು ಹಿಂದಿನದ್ದು..! ..!

ಕೊಪ್ಪಳ: ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಸಂಭನೀಯ ಪಟ್ಟಿಯಲ್ಲಿ ದೇಶದ ಆರು ತಾಣಗಳನ್ನು ಸೇರ್ಪಡೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕ್ರಿಸ್ತಪೂರ್ವದ ಇತಿಹಾಸ ಹೊಂದಿರುವ ಹಿರೇಬೆಣಕಲ್‌ ಶಿಲಾ ಸ್ಮಾರಕಗಳು ಸಹ ಸೇರ್ಪಡೆಯಾಗಿದೆ.
ವಾರಾಣಸಿಯ ಗಂಗಾ ಘಾಟ್, ತಮಿಳುನಾಡಿನ ಕಾಂಚಿಪುರಂ ದೇವಾಲಯ, ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಣಾ ಪ್ರದೇಶ, ಮಹಾರಾಷ್ಟ್ರದ ಮರಾಠಾ ಸೈನ್ಯದ ವಾಸ್ತುಶಿಲ್ಪ, ಕರ್ನಾಟಕದ ಹಿರೆಬೆಣಕಲ್ ಬಳಿಯ ಶಿಲಾ ಸ್ಮಾರಕಗಳು (ಮೆಗಾಲಿಥಿಕ್ ಸೈಟ್) ಹಾಗೂ ಮಧ್ಯಪ್ರದೇಶದ ನರ್ಮದಾ ಕಣಿವೆ ಭಾಗದಲ್ಲಿನ ಭೇಡಾಘಾಟ್- ಲಮೇಟಘಾಟ್ ಗಳು ಈ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾದವುಗಳು.
ಅಂತಿಮ ಪಟ್ಟಿಗೆ ಸೇರ್ಪಡೆಯಾದರೆ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆಯಾಗಲಿದೆ ಜೊತೆಗೆ ಜಾಗತಿಕವಾಗಿ ಇದು ಬಹಳ ಮಹತ್ವ ಪಡೆಯಲಿದೆ.
2008ರಿಂದಲೂ ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಘೋಷಿಸುವಂತೆ ಯುನೆಸ್ಕೊಗೆ ಶಿಫಾರಸು ಮಾಡುವಂತೆ ಮನವಿಗಳು ಕೇಂದ್ರ ಸರ್ಕಾರಕ್ಕೆ ಹೋಗಿದ್ದವು. ಯಾಕೆಂದರೆ ಇದು ಅಷ್ಟೂಂದು ಪುತಾನವಾದದ್ದು ಹಾಗೂ ವಿಶಿಷ್ಟವಾದದ್ದು.
2010ರಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದ ರಜನೀಶ ಗೋಯಲ್ ಈ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸ ತಜ್ಞರಿಂದ ಮನವಿ ಸ್ವೀಕರಿಸಿ ವೀಕ್ಷಿಸಿದ್ದರು. ಆ ಬಳಿಕ ಪುರಾತತ್ವ ಇಲಾಖೆ ಶಿಫಾರಸು ಮಾಡಿತ್ತು. ಆದರೆ ಆಗ ಶಿಫಾರಸನ್ನು ಯುನೆಸ್ಕೊ ತಿರಸ್ಕರಿಸಿತ್ತು. ಇದೀಗ ಯುನೆಸ್ಕೊ ಸಂಭನೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿದ್ದು ಸಂತಸ ತಂದಿದೆ ಎನ್ನುತ್ತಾರೆ ಇತಿಹಾಸ ತಜ್ಞ ಶರಣಬಸಪ್ಪ ಕೋಲ್ಕಾರ.
ಈಗಾಗಲೆ ಇದೇ ಹಿರೇಬೆಣಕಲ್ ಗ್ರಾಮದ ಪಕ್ಕದ ಪ್ರದೇಶ ಐತಿಹಾಸಿಕ ಪ್ರಸಿದ್ಧ ಹಂಪಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಹಿರೇಬೆಣಕಲ್ ಗುಡ್ಡದ ಶಿಲಾ ಸ್ಮಾರಕಗಳು ಈ ಪಟ್ಟಿಗೆ ಸೇರಿದರೆ ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ. ಜೊತೆಗೆ ಇದು ವಿಶ್ವದ ಅಧ್ಯಯನ ವಿಷಯವಾಗಲಿದೆ ಎಂದು ಕೋಲ್ಕಾರ ಹೇಳುತ್ತಾರೆ.

ಇದು ಯಾಕೆ ಪರಂಪರೆ ಪಟ್ಟಿಗೆ ಅರ್ಹ..?
ಮೌರ್ಯರ ಗುಡ್ಡ ಅಥವಾ ಮೊರೇರ ಗುಡ್ಡ ಎಂದು ಕರೆಯಲ್ಪಡುವ ಹಿರೇಬೆಣಕಲ್ ಗುಡ್ಡದಲ್ಲಿನ ಆದಿವಾಸಿಗಳ ಸಮಾಧಿಗಳು ಇಲ್ಲಿವೆ. ಇವುಗಳನ್ನು ಕ್ರಿ.ಪೂ. 1200ದಿಂದ 200ರ ಮಧ್ಯದ ಅವಧಿಯಲ್ಲಿ ಅಂದರೆ ಪ್ರಾಗೈತಿಹಾಸಿಕ ಕಾಲದಲ್ಲಿ ಅಂದಿನ ಆದಿವಾಸಿಗಳು ತಮ್ಮ ಹಿರಿಯರ ಸಮಾಧಿಗಳನ್ನು ಬೃಹತ್ ಶಿಲೆಗಳಿಂದ ನಿರ್ಮಿಸಿದ್ದಾರೆ. ಇಲ್ಲಿ ಸುಮಾರು 500ಕ್ಕು ಹೆಚ್ಚು ಸಮಾಧಿಗಳಿವೆ. ಇನ್ನೂ ವಿಶೇಷ ಎಂದರೆ ಇಲ್ಲಿ 8 ವಿಧದ ಸಮಾಧಿಗಳಿವೆ. ಭಾರತದಲ್ಲಿ ಒಟ್ಟು 12 ತರದ ಸಮಾಧಿಗಳನ್ನು ನಿರ್ಮಿಸಲಾಗುತ್ತಿದೆ. ಆ ಪೈಕಿ ಈ ಸ್ಥಳವೊಂದರಲ್ಲೇ 8 ರೀತಿಯ ಸಮಾಧಿಗಳು ಕಂಡುಬರುತ್ತವೆ. ಪ್ರಾಗೈತಿಹಾಸಿಕ ಕಾಲದ ಶಿಲಾ ಸ್ಮಾರಕಗಳು ಪ್ರಪರಂಚದಲ್ಲಿಯೇ ಸಿಗುವುದು ತೀರ ವಿರಳ. ಅಂಥವುಗ ಸಾಲಿಗೆ ಹಿರೇಬೆಣಕಲ್ ಗ್ರಾಮದ ಪಕ್ಕದಲ್ಲಿನ ಗುಡ್ಡದಲ್ಲಿ ಇಂತಹ ಶಿಲಾ ಸ್ಮಾರಕಗಳು (ಮೆಗಾಲಿಥಿಕ್ ಸೈಟ್) ಸೇರುತ್ತವೆ.
ಒಂದೇ ಭಾಗದ ಎರಡು ಪ್ರದೇಶ…ಯುನೆಸ್ಕೊದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡ ಹಿರೆಬೆಣಕಲ್ ಗುಡ್ಡದ ಶಿಲಾ ಸ್ಮಾರಕಗಳನ್ನು ಒಂದುವೇಳೆ ಯುನೆಸ್ಕೊ ತನ್ನ ಅಂತಿಮ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಇದನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದರೆ ಒಂದೇ ಭಾಗದ ಎರೆಡು ಪ್ರದೇಶಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದಂತಾಗುತ್ತದೆ. ಗಂಗಾವತಿ ಪಕ್ಕದ ಹಂಪಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ಹಿರೇ ಬೆಣಕಲ್ ಶಿಲಾ ಸ್ಮಾರಕಗಳು ಅಂತಿಮ ಪಟ್ಟಿಗೆ ಸೇರಿದರೆ ಒಂದೇ ಭಾಗದ ಎರಡು ಸ್ಥಳಗಳು ಪಟ್ಟಿಗೆ ಸೇರಿದಂತಾಗುತ್ತದೆ.
ಕೋಟ್..
ಪ್ರಾಗೈತಿಹಾಸಿಕ ಕಾಲದ ಬೃಹತ್ ಶಿಲಾ ಸ್ಮಾರಕಗಳು ಈ ಆಧುನಿಕ ಕಾಲದಲ್ಲಿ ನೋಡಲು ಸಿಗುವುದೇ ಅಪರೂಪ. ಆ ಪೈಕಿ ಭಾರತದ ಮಧ್ಯಪ್ರದೇಶದ ಭೀಂಬೆಟ್ಕಾ ಗುಹಾ ಶಿಲೆ, ಚಿತ್ರಕಲೆ ಇವೆ. ಅಲ್ಲಿ ಬಿಟ್ಟರೆ ದಕ್ಷಿಣ ಭಾರತದ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಬಳಿಯ ಗುಡ್ಡದಲ್ಲಿರುವ ಆದಿವಾಸಿಗಳು ನಿರ್ಮಿಸಿರುವ ಬೃಹತ್ ಶಿಲಾ ಸ್ಮಾರಕಗಳು ನೋಡಲು ಸಿಗುತ್ತವೆ. ಕ್ರಿ.ಪೂ. 1200ರಿಂದ 200ನೇ ಇಸ್ವಿ ಅವಧಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಸಮಾಧಿಗಳನ್ನು ನಿರ್ಮಿಸಲಾಗಿದೆ. ಆ ಸ್ಮಾರಕಗಳನ್ನು ರಕ್ಷಿಸಿ, ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸುವಂತೆ ನಮ್ಮ ತಂಡ 2010ರಿಂದ ಪ್ರಯತ್ನ ಮಾಡುತ್ತಿದೆ.‌ ಈ ಹಿಂದೆ ಪುರಾತತ್ವ ಇಲಾಖೆಯ ಧಾರವಾಡ ವೃತ್ತದಿಂದ ಶಿಫಾರಸು ಮಾಡಲಾಗಿತ್ತು. ಆಗ ಆಗಿರಲಿಲ್ಲ. ಯುನೆಸ್ಕೋದಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿರುವುದು ಸಂತಸದ ವಿಷಯ.
-ಡಾ.ಶರಣಬಸಪ್ಪ ಕೋಲ್ಕಾರ, ಇತಿಹಾಸ ತಜ್ಞರು, ಗಂಗಾವತಿ

ಪ್ರಮುಖ ಸುದ್ದಿ :-   ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಹಿರೇಬೆಣಕಲ್ ಗ್ರಾಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ಗಂಗಾವತಿ ನಗರದಿಂದ 10 ಕಿಮೀ ಹಾಗೂ ಹೊಸಪೇಟೆಯಿಂದ 35 ಕಿಮೀ ದೂರದಲ್ಲಿದೆ. ಈ ಗ್ರಾಮದ ಪಕ್ಕದ ಗುಡ್ಡದಲ್ಲಿ ಈ ಶಿಲಾ ಸ್ಮಾರಕಗಳು ಇವೆ. ಇಲ್ಲಿಗೆ ಈಗಾಗಲೆ ಸಾವಿರಾರು ವಿದೇಶಿಗರು ಪ್ರವಾಸಕ್ಕೆಂದು ಬಂದು ಹೋಗಿದ್ದಾರೆ. ಸ್ಥಳೀಯರು ಚಾರಣಕ್ಕೆಂದು, ಅಧ್ಯಯನಕ್ಕೆಂದು ಸಾಕಷ್ಟು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಸ್ಮಾರಗಳನ್ನು ಸಂರಕ್ಷಣೆಯನ್ನೂ ಮಾಡಲಾಗಿದೆ.

ಹಿರೇ ಬೆಣಕಲ್  ಕರ್ನಾಟಕ ರಾಜ್ಯದ ಮೆಗಾಲಿಥಿಕ್ ತಾಣವಾಗಿದೆ. ಇದು ಕ್ರಿ.ಪೂ 800 ರಿಂದ ಕ್ರಿ.ಪೂ 200 ರ ವರೆಗಿನ ಕೆಲವು ಭಾರತೀಯ ಮೆಗಾಲಿಥಿಕ್ ತಾಣಗಳಲ್ಲಿ  ಇದು ಕೂಡ ಒಂದು.  ಈ ಸ್ಥಳಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ. ಅನೇಕ ಮೆಗಾಲಿಥಿಕ್ ರಚನೆಗಳು ಕ್ರಿ.ಪೂ 800 ರಿಂದ ಕ್ರಿ.ಪೂ 200 ರವರೆಗೆ ಇವೆ. ಕಬ್ಬಿಣಯುಗದ ಅವಧಿಯು ಭಾರತದ ಈ ಭಾಗದಲ್ಲಿ ಕ್ರಿ.ಪೂ 1200 ರಿಂದ ಕ್ರಿ.ಶ 200 ರ ವರೆಗೆ  ಸಾವಿರ  ವರ್ಷಗಳಿಗಿಂತ ಹೆಚ್ಚು ವ್ಯಾಪಿಸಿದೆ. ಹಿರೇ ಬೆಣಕಲ್‌ ಕುರಿತು ಮೊದಲು ವರದಿ ಪ್ರಕಟವಾದ್ದು 1835 ರಲ್ಲಿ.  ಜರ್ನಲ್ ಆಫ್ ದಿ ರಾಯಲ್ ಏಷಿಯಾಟಿಕ್ ಸೊಸೈಟಿಯಲ್ಲಿ, ಫಿಲಿಪ್ ಮೆಡೋಸ್ ಟೇಲರ್, ಹೈದರಾಬಾದ್ ನಿಜಾಮನ ಸೇವೆಯಲ್ಲಿದ್ದವು.

ಅದರ ನಂತರ ಒಂದು ಶತಮಾನಕ್ಕೂ ಹೆಚ್ಚು ಕಾಲ, ಈ ಸ್ಥಳದ ಬಗ್ಗೆ ಹೆಚ್ಚಿನ ವ್ಯವಸ್ಥಿತ ಅಧ್ಯಯನವನ್ನು ನಡೆಸಲಾಗಿಲ್ಲ. 1944-48ರ ನಡುವೆ, ಸರ್ ಮಾರ್ಟಿಮರ್ ವೀಲರ್ ಪುರಾತತ್ವ ಉತ್ಖನನ ಕೈಗೊಂಡರು; ಇವುಗಳನ್ನು ಸುಂದರ ಅಡಿಗ  1975 ರಲ್ಲಿ ಪ್ರಕಟಿಸಿದರು. “ದಕ್ಷಿಣ ಭಾರತದ ಅರ್ಲಿ ಚೇಂಬರ್ ಗೋರಿಗಳು: ಉತ್ತರ ಕರ್ನಾಟಕದ ಕಬ್ಬಿಣಯುಗದ ಮೆಗಾಲಿಥಿಕ್ ಸ್ಮಾರಕಗಳ ಅಧ್ಯಯನ” ಎಂಬ ಪ್ರಕಟಣೆಯಲ್ಲಿ, ಸುಂದರಾʼಸ್ ಕ್ಯಾಟಲಾಗ್ ಒಂದು ಸೈಟಿಲ್ಲಿ 300 ಮೆಗಾಲಿಥಿಕ್ ಸಮಾಧಿ ಕೋಣೆಗಳ ವಿವರಗಳನ್ನು ವಿವರಿಸುತ್ತದೆ. ಇದು ದಟ್ಟ ಕಾಡಿನಲ್ಲಿ ಸುತ್ತುವರೆದಿದೆ. ಇಲಿನಾಯ್ಸ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಆಂಡ್ರ್ಯೂ ಬಾಯರ್ ಇತ್ತೀಚಿನ ವರ್ಷಗಳಲ್ಲಿ ತನಿಖೆ ನಡೆಸಿದ್ದಾರೆ ಮತ್ತು ಸುಮಾರು 49 ಎಕರೆ ಪ್ರದೇಶದಿಂದ ಸುಮಾರು 1000 ವಿವಿಧ ರೀತಿಯ ಪ್ರಾಚೀನ ವಸ್ತುಗಳನ್ನು ಗುರುತಿಸಿದ್ದಾರೆ. ಅವರ ಆವಿಷ್ಕಾರಗಳು ಮಾನವರೂಪದ ಅಂತ್ಯಕ್ರಿಯೆಯ ರಚನೆಗಳು, ಮೆನ್‌ಹಿರ್‌ಗಳು ಮತ್ತು ಕಲ್ಲಿನ ಬೇಲಿಗಳನ್ನು ವೃತ್ತಾಕಾರದ ಆಕಾರಗಳಲ್ಲಿ ವಿವರಿಸುತ್ತದೆ. ಕಲ್ಲು ಚಪ್ಪಡಿಗಳಿಂದ ಬೆಂಬಲಿತವಾದ ಡಾಲ್ಮೆನ್‌ಗಳನ್ನು ಯಾವುದೇ ಗಾರೆ ಸೇರದಂತೆ ಸಂಪೂರ್ಣವಾಗಿ ನಿರ್ಮಿಸಲಾಗಿದೆ ಎಂದು ಅವರ ಅಧ್ಯಯನ ಹೇಳುತ್ತದೆ.
ಸರಿಸುಮಾರು 400ಕ್ಕೂ ಹೆಚ್ಚು ಮೆಗಾಲಿಥಿಕ್ ಸ್ಮಾರಕಗಳಿವೆ ಅವುಗಳ ರಚನೆಗಳು ಆಕಾರ ಮತ್ತು ಗಾತ್ರದಲ್ಲಿ ವೈವಿಧ್ಯಮಯವಾಗಿವೆ. ಸಮಾಧಿಗಳ ಸಮೂಹಗಳಿವೆ, ಕ್ಯಾಪ್‌ಸ್ಟೋನ್ ಹೊಂದಿರುವ ಮೂರು ಬದಿಯ ಕೋಣೆಗಳು ಮೇಲ್ಛಾವಣಿಯನ್ನು ರೂಪಿಸುತ್ತವೆ. ಸಣ್ಣ ಡಾಲ್ಮೆನ್ಗಳು 50–100 ಸೆಂಟಿಮೀಟರ್ 20-39 ಇಂಚುಗಳು, ದೊಡ್ಡದಾದವುಗಳು 3 ಮೀಟರ್ 9.8 ಅಡಿ ಎತ್ತರವನ್ನು ಅಳೆಯುತ್ತವೆ. ಸಮಾಧಿ ಮತ್ತು ಅರೆ-ಸಮಾಧಿ ಡಾಲ್ಮೆನ್‌ಗಳನ್ನು ಸಿಸ್ಟ್‌ಗಳು ಮತ್ತು ಡಾಲ್ಮೆನಾಯ್ಡ್ ಸಿಸ್ಟ್‌ಗಳು ಎಂದು ವರ್ಗೀಕರಿಸಲಾಗಿದೆ ಮತ್ತು ಅವುಗಳನ್ನು ವೃತ್ತಾಕಾರದ ವಿನ್ಯಾಸಗಳಲ್ಲಿ ಜೋಡಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಕುಸಿದಿವೆ. ಅವು ಅಂತ್ಯಕ್ರಿಯೆಯ ರಚನೆಗಳಾಗಿವೆ. ಈ ಸಮಾಧೀಗಳು ಮುಖ್ಯ ಬೀದಿಯ ಎರಡೂ ಬದಿಗಳಲ್ಲಿವೆ. ಡಾಲ್ಮೆನಾಯ್ಡ್ ಸಿಸ್ಟ್‌ಗಳು ಹಲವಾರು ಆಕಾರ ಮತ್ತು ಗಾತ್ರಗಳಲ್ಲಿವೆ. ಉದ್ದವಾದ ಆಕಾರದಲ್ಲಿರುವವರು ನೆಲದ ಮಟ್ಟದಲ್ಲಿ ಕಲ್ಲುಮಣ್ಣು ಕಲ್ಲುಗಳನ್ನು ಪ್ಯಾಕ್ ಮಾಡುವುದರೊಂದಿಗೆ ನಿರ್ಮಿಸಲಾಗಿದೆ. ವೃತ್ತಾಕಾರದ ಆವರಣವನ್ನು ಗುರುತಿಸಲಾಗಿದೆ. ಈ ರಚನೆಗಳ ಸುತ್ತಲೂ ಭೂಮಿಯ ಪದರಗಳಿಂದ ತುಂಬಿದ ಹಳ್ಳವಿದೆ.

ಪ್ರಮುಖ ಸುದ್ದಿ :-   ಸ್ವತಂತ್ರ ಭಾರತದಲ್ಲಿ ರಾಜೀನಾಮೆ ನೀಡಿದ ಕೇಂದ್ರ ಸಚಿವರು ; ರಾಜೀನಾಮೆ ನೀಡಿದ್ದು ಯಾವ ಕಾರಣಕ್ಕೆ...?

ಬಂಡೆಗಳಲ್ಲಿ ಜನರು ನೃತ್ಯ ಮಾಡುವುದು, ಬೇಟೆಯಾಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದಿಟ್ಟುಕೊಳ್ಳುವ ವರ್ಣಚಿತ್ರಗಳಿವೆ. ಜಿಂಕೆ, ನವಿಲು, ಹುಲ್ಲೆ, ಹಂಪ್ಡ್ ಎತ್ತುಗಳು, ಕುದುರೆಗಳು ಮತ್ತು ಹಸುಗಳ ಜ್ಯಾಮಿತೀಯ ಮತ್ತು ಅತೀಂದ್ರಿಯ ವಿನ್ಯಾಸಗಳಿವೆ. 10 ಮೀಟರ್ 33 ಅಡಿ ಎತ್ತರದ ಬಂಡೆಯ ಮೇಲೆ ಕಲ್ಲಿನ ಕೆಟ್ಲೆಡ್ರಮ್ ಅಸಾಮಾನ್ಯವಾಗಿದೆ. ಬಂಡೆಯು ಅರ್ಧಗೋಳದ ಆಕಾರದಲ್ಲಿ 2 ಮೀಟರ್ 6 ಅಡಿ 7 ವ್ಯಾಸ ಮತ್ತು 1.5 ಮೀಟರ್ 4 ಅಡಿ 11 ಎತ್ತರವನ್ನು ಹೊಂದಿದೆ. ಮರದ ಸುತ್ತಿಗೆಯಿಂದ ಹೊಡೆದಾಗ ಬಂಡೆಯು 1 ಕಿಲೋಮೀಟರ್ 0.62 ಮೈಲಿ ದೂರದಲ್ಲಿ ಕೇಳುವ ಶಬ್ದಗಳನ್ನು ಉತ್ಪಾದಿಸುತ್ತದೆ. ಈ ಪ್ರದೇಶದಲ್ಲಿ, ಗುಹೆಗಳು ನಿವಾಸಗಳು ಅಥವಾ ಪೂಜಾ ಸ್ಥಳಗಳಾಗಿವೆ; ಇದು ಹತ್ತಿರದ ಅಂತ್ಯಕ್ರಿಯೆಯ ರಚನೆಗಳ ಅಸ್ತಿತ್ವವನ್ನು ದೃಢಪಡಿಸುತ್ತದೆ. ಇನ್ನೂ ಸಂಶೋಧನೆಗಳು ನಡೆಯುತ್ತಿವೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement