ಊಟ ಮಾಡಿ ಮಲಗಿದ ಕುಟುಂಬದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಸಮೀಪದ ಇಸಾಮುದ್ರ ಲಂಬಾಣಿಹಟ್ಟಿಯ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇದು ಸೋಮವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ. ತಿಪ್ಪನಾಯ್ಕ (45), ಗುಂಡಿಬಾಯಿ (80), ಸುಧಾಬಾಯಿ (40) ಎಂಬವರು ಮೃತಪಟ್ಟವರು. ರಾಹುಲ್ (19) ಮತ್ತು ರಮ್ಯಾ (16) ಗಂಭೀರವಾಗಿದ್ದಾರೆ. ವಿಷಾಹಾರ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. … Continued

ಇದು ಕೋವಿಡ್‌-19 ಮತ್ತೆ ಉಲ್ಬಣದ ಸೂಚನೆಯೇ? ಜುಲೈ ಮೊದಲ ವಾರದಲ್ಲಿ ಕೊರೊನಾ ಹರಡುವ ವೇಗ ಆರ್-ಫ್ಯಾಕ್ಟರ್ ಭಾರತದಲ್ಲಿ ಮತ್ತೆ ಏರಿಕೆ

ಪರಿಣಾಮಕಾರಿ ಪ್ರಸರಣ ದರ ಅಥವಾ ಸಂತಾನೋತ್ಪತ್ತಿ ಸಂಖ್ಯೆ ಎಂದೂ ಕರೆಯಲ್ಪಡುವ ಆರ್-ಮೌಲ್ಯವು ಜುಲೈ ಮೊದಲ ವಾರದಲ್ಲಿ ಜೂನ್ 30 ರಂದು 0.78 ರಿಂದ 0.88 ಕ್ಕೆ ಏರಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ನವದೆಹಲಿ:ಭಾರತದಲ್ಲಿ ಕೋವಿಡ್‌-19 ಗಾಗಿ ಒಂದು ದೇಶದಲ್ಲಿ ಸೋಂಕು ಹರಡುವ ವೇಗದ ಸೂಚಕವಾದ ಆರ್‌- ಮೌಲ್ಯ( R-value) ಜುಲೈ ಮೊದಲ ವಾರದಲ್ಲಿ ಹೆಚ್ಚಾಗಿದೆ. ಕೊರೊನಾ … Continued

ಭಾರತದ 1983ರ ವಿಶ್ವಕಪ್ ವಿಜೇತ ಕ್ರಿಕೆಟ್‌ ತಂಡದ ಆಟಗಾರ ಯಶ್ಪಾಲ್ ಶರ್ಮಾ ನಿಧನ

ಕಪಿಲ್ ದೇವ್ ನೇತೃತ್ವದ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯಶ್ಪಾಲ್ ಶರ್ಮಾ ಅವರು ಹೃದಯಾಘಾತದಿಂದ ನಿಧನರಾದರು.ಅವರಿಗೆ ಅವರಿಗೆ 66 ವರ್ಷ ವಯಸ್ಸಾಗಿತ್ತು. ಯಶ್ಪಾಲ್‌ ಶರ್ಮಾ ಅವರು 37 ಏಕದಿನ ಮತ್ತು 42 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು 1979-83ರವರೆಗೆ ಭಾರತದ ಮಧ್ಯಮ ಕ್ರಮಾಂಕದ … Continued

ಭಾರತದಲ್ಲಿ 4 ತಿಂಗಳಲ್ಲಿ ಕಡಿಮೆ ದೈನಂದಿನ ಕೋವಿಡ್ -19 ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) 31,443 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು 118 ದಿನಗಳಲ್ಲಿ ದೇಶ ಕಂಡ ಪ್ರಕರಣಗಳಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಸೋಂಕು ಆಗಿದೆ. ಭಾರತದಲ್ಲಿ ಸಕ್ರಿಯ ಪ್ರಕರಣ 4,31,315 ಕ್ಕೆ ಇಳಿದಿದೆ, ಇದು 109 ದಿನಗಳಲ್ಲಿ ಇದು ಅತ್ಯಂತ ಕಡಿಮೆ. ದೇಶದ ಕೋವಿಡ್ … Continued

ಕೊಯಮತ್ತೂರು ಅರಣ್ಯ ಪ್ರದೇಶದಲ್ಲಿ ಆಂಥ್ರಾಕ್ಸ್‌ನಿಂದ ಕಾಡಾನೆ ಸಾವು

ತಮಿಳುನಾಡಿನ ಅನೈಕಟ್ಟಿ ಕಾಡಿನಲ್ಲಿ ಕಾಡು ಆನೆ ಆಂಥ್ರಾಕ್ಸ್‌ನಿಂದ ಮೃತಪಟ್ಟ ನಂತರ ಕೊಯಮತ್ತೂರು ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕೊಯಮತ್ತೂರು ಅರಣ್ಯ ವ್ಯಾಪ್ತಿಯ ಕಾಡಿನಲ್ಲಿರುವ ಆನೆಯ ಮೃತದೇಹವನ್ನು ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ. ಸತ್ತ ಆನೆ ಬಾಯಿ ಮತ್ತು ಗುದದ್ವಾರದಿಂದ ರಕ್ತಸ್ರಾವವಾಗುತ್ತಿರುವುದು ಆಂಥ್ರಾಕ್ಸ್‌ನ ಅನುಮಾನಗಳಿಗೆ ಕಾರಣವಾಯಿತು. ಮೃತ ಆನೆಯಿಂದ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಾಣಿ ರೋಗ ಗುಪ್ತಚರ ಘಟಕಕ್ಕೆ … Continued

ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಸಂಸದೆ ಸುಮಲತಾ ಭೇಟಿ ನಂತರ ಸಚಿವ ನಿರಾಣಿ ಹೇಳಿಕೆ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ ಅಂತಹವರನ್ನು ಅಮಾನತುಗೊಳಿಸಲಾಗುವುದು. ಗಣಿ ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಅವರ ಭೇಟಿಯ ಬಳಿಕ ಮಾತನಾಡಿದ ಅವರು, ಇದೇ ವಾರ ಮಂಡ್ಯ ಜಿಲ್ಲೆಯ … Continued

ಬೆವಫಾ ಸನಮ್..!: ಪ್ರೇಮಿಕಾ ಮದುವೆ ಮಂಟಪದ ಹೊರಗೆ ಕೂಗುತ್ತಲೇ ಇದ್ದಳು, ಪ್ರೇಮಿ ಮತ್ತೊಬ್ಬಳನ್ನು ಮದುವೆಯಾದ.. ವೀಕ್ಷಿಸಿ

ಭಾರತೀಯ ವಿವಾಹಗಳು ಇತ್ತೀಚಿಗೆ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ, ಏಕೆಂದರೆ ಇದು ಅನೇಕ ಅತಿಥಿಗಳು, ಕುಟುಂಬ ಸದಸ್ಯರು ಮತ್ತು ಕೆಲವು ಬಾರಿ ಮಾಜಿ ಪ್ರೇಮಿಯನ್ನು ಒಳಗೊಂಡಿರುತ್ತದೆ. ಇಂಥದ್ದೇ ಘಟನೆಯೊಂದರಲ್ಲಿ ಮದುವೆ ಮಂಟಪದ ಹೊರಗೆ ಹುಡುಗಿಯೊಬ್ಬಳು ಬಾಬು-ಬಾಬು ಎಂದು ಕೂಗಲು ಪ್ರಾರಂಭಿಸಿದಾಗ ಒಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಈ ಹೃದಯ ಕದಡುವ ವಿಡಿಯೊದಲ್ಲಿ, ಹುಡುಗಿ ಕಿರುಚುತ್ತಿರುವುದನ್ನು ಕಾಣಬಹುದು, … Continued

ದಲೈ ಲಾಮಾ ಜನ್ಮದಿನಾಚರಣೆಗೆ ಆಕ್ಷೇಪಿಸಲು ಲಡಾಕ್‌ ಡೆಮ್‌ಚಾಕ್ ಗಡಿಯೊಳಗೆ ಪ್ರವೇಶಿಸಿದ ಚೀನಾದ ಪಿಎಲ್‌ಎ ಸೈನಿಕರು

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಉಳಿದಿರುವ ಘರ್ಷಣೆ ಕೇಂದ್ರಗಳಲ್ಲಿ ಸಂಪೂರ್ಣ ನಿಷ್ಕ್ರಿಯಗೊಳಿಸುವ ಉದ್ದೇಶವನ್ನು ಸಾಧಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳಲ್ಲಿ ತೊಡಗಿದ್ದರೂ, ಜುಲೈ 6 ರಂದು ಭಾರತೀಯ ಗ್ರಾಮಸ್ಥರಿಂದ ಟಿಬೆಟಿಯನ್ ಬೌದ್ಧ ಧಾರ್ಮಿಕ ಮುಖಂಡರ ದಲೈ ಲಾಮಾ ಜನ್ಮದಿನಾಚರಣೆಗೆ ಆಕ್ಷೇಪಿಸಲು ಚೀನಾದ ಸೈನಿಕರು ಡೆಮ್‌ಚಾಕ್‌ನಲ್ಲಿರುವ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದರು ಎಂದು ವರದಿಯಾಗಿದೆ. … Continued