ಕೊವ್ಯಾಕ್ಸಿನ್‌ ಪಡೆದವರಿಗೆ 2 ತಿಂಗಳು,ಕೋವಿಶೀಲ್ಡ್‌ ಪಡೆದವರಲ್ಲಿ 3 ತಿಂಗಳ ನಂತರ ಕಡಿಮೆಯಾಗುವ ಪ್ರತಿಕಾಯಗಳು:ಐಸಿಎಂಆರ್-ಆರ್‌ಎಂಆರ್‌ಸಿ ಅಧ್ಯಯನ

ನವದೆಹಲಿ: ಭುವನೇಶ್ವರದ ಐಸಿಎಂಆರ್-ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ನೇತೃತ್ವದ ಅರೆಸೆಂಟ್ ಅಧ್ಯಯನವು ಕೋವಾಕ್ಸಿನ್ ಸ್ವೀಕರಿಸುವವರಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳ ಮಟ್ಟವು ಎರಡು ತಿಂಗಳ ನಂತರ ಕಡಿಮೆಯಾಗುವುದನ್ನು ಕಂಡುಕೊಂಡಿದೆ, ಆದರೆ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಮೂರು ತಿಂಗಳ ನಂತರ ಪ್ರಾರಂಭವಾಗುತ್ತದೆ . ICMR-RMRC ಅಧ್ಯಯನವನ್ನು ಯೋಜಿಸಿತು ಮತ್ತು ವಿಧಾನವನ್ನು ರೂಪಿಸಿತು ಮತ್ತು ಅಧ್ಯಯನವನ್ನು ಮುನ್ನಡೆಸುತ್ತಿದೆ. ಐಸಿಎಂಆರ್-ಆರ್‌ ಎಂಆರ್‌ … Continued

ಕೊರೊನಾ ಸೋಂಕು ತಗುಲಿ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ ನೀಡುವುದನ್ನು ಪರಿಗಣಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ರೂಪಿಸಿರುವ ನಿಯಮಾವಳಿಗಳ ಅಡಿ ಕೊರೊನಾ ಸೋಂಕು ತಗುಲಿದ ಕಾರಣ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ ನೀಡುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ಪರಿಹಾರ ನೀಡುವುದರಿಂದ ಕೊರೊನಾ ಸೋಂಕು ತಗುಲಿ ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಹೊರಗಿಡುವುದಕ್ಕೆ ನಮ್ಮ ಒಮ್ಮತವಿಲ್ಲ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎಂ. … Continued

ದೆಹಲಿಯಲ್ಲಿ 75 ವರ್ಷ ಹಳೆಯ ಕಟ್ಟಡ ಕುಸಿತ; ಇಬ್ಬರು ಮಕ್ಕಳು ಸಾವು

ನವದೆಹಲಿ: ಉತ್ತರ ದೆಹಲಿಯ ಜನದಟ್ಟಣೆಯಿಂದ ಕೂಡಿರುವ ಸಬ್ಜಿ ಮಂಡಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಸೋಮವಾರ ಕುಸಿದಿದ್ದು, ತಮ್ಮ ತಾಯಿಯೊಂದಿಗೆ ಅಲ್ಲೇ ಹಾದುಹೋಗುತ್ತಿದ್ದ ಅಣ್ಣ-ತಮ್ಮ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟಿರುವ ಇಬ್ಬರು ಮಕ್ಕಳು 7 ಮತ್ತು 12 ವರ್ಷ ವಯಸ್ಸಿನವರಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಮೂರರಿಂದ ನಾಲ್ಕು ಜನರು ಸಿಲುಕಿರುವ … Continued

ಶಿರೂರು ಮಠ ಪ್ರಕರಣ: 16 ವರ್ಷದ ಅಪ್ರಾಪ್ತ ಸ್ವಾಮಿ ಆಗುವುದನ್ನು ಕಾನೂನು ನಿರ್ಬಂಧಿಸುವುದೇ? ಕರ್ನಾಟಕ ಹೈಕೋರ್ಟ್‌ ಪರಿಶೀಲನೆ

ಬೆಂಗಳೂರು: ಅಪ್ರಾಪ್ತರು ಸನ್ಯಾಸ ದೀಕ್ಷೆ ಪಡೆದುಕೊಳ್ಳಬಾರದು ಎಂಬುದಕ್ಕೆ ಕಾನೂನಿನ ತೊಡಕೇನಾದರು ಇದೆಯೇ ಎಂಬುದನ್ನು ಕರ್ನಾಟಕ ಹೈಕೋರ್ಟ್‌ ಪರಿಶೀಲಿಸಲಿದೆ. ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತನನ್ನು ಮುಖ್ಯ ಮಠಾಧಿಪತಿಯನ್ನಾಗಿ ನೇಮಿಸಿರುವುದರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸೋಮವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು … Continued

ನೀಟ್ ರದ್ದತಿ ಮಸೂದೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ

ಚೆನ್ನೈ: ತಮಿಳುನಾಡು ವಿಧಾನಸಭೆಯು ಸೋಮವಾರ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಯನ್ನು (NEET) ತಿರಸ್ಕರಿಸುವ ಮತ್ತು ಸಾಮಾಜಿಕ ನ್ಯಾಯ ಖಚಿತಪಡಿಸಿಕೊಳ್ಳಲು 12ನೇ ತರಗತಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಮಸೂದೆಯನ್ನು ಅಂಗೀಕರಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಸೂದೆಯನ್ನು ಮಂಡಿಸಿದರು ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಅದರ ಮಿತ್ರ ಪಕ್ಷ … Continued

ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕರಾಗಿ ಶಾಸಕ ಸತೀಶ್ ರೆಡ್ಡಿ ನೇಮಕ

ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಅವರನ್ನು ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಅವರಿಗಿದ್ದ ವಿಧಾನಸಭೆ ಮುಖ್ಯ ಸಚೇತಕ ಸ್ಥಾನ ತೆರವಾಗಿತ್ತು. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ವಹಿಸಿಕೊಂಡು ಮೊದಲ ಬಾರಿಗೆ ಪಾಲಿಕೆ ಕಮಲ ಪಾಲಾಗುವಂತೆ ಮಾಡಿದ್ದ … Continued

ಓಲಾ ಇ-ಸ್ಕೂಟರ್ ಕಾರ್ಖಾನೆ ಮಹಿಳೆಯರು ಮಾತ್ರವೇ ಕೆಲಸ ಮಾಡುವ ವಿಶ್ವದ ಅತಿ ದೊಡ್ಡ ಕಾರ್ಖಾನೆ..! ವರ್ಷಕ್ಕೆ 1 ಕೋಟಿ ಸ್ಕೂಟರ್‌ ಉತ್ಪಾದನೆ

ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯ ಹೊಸ ಎಲೆಕ್ಟ್ರಿಕ್-ಸ್ಕೂಟರ್ ಕಾರ್ಖಾನೆಯು ವಾರ್ಷಿಕವಾಗಿ ಒಂದು ಕೋಟಿ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಗುರಿ ಹೊಂದಿದೆ ಅಥವಾ 2022ರ ವೇಳೆಗೆ ವಿಶ್ವದ ಇ-ಸ್ಕೂಟರ್‌ಗಳ 15% ಉತ್ಪಾದಿಸಲಿದ್ದು, ಈ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ…! ಭವಿಶ್ ಅಗರ್‌ವಾಲ್ ನೇತೃತ್ವದಲ್ಲಿ, ಇ-ಮೊಬಿಲಿಟಿ ವ್ಯವಹಾರವು ರೈಡ್-ಹೇಲಿಂಗ್ ಸ್ಟಾರ್ಟ್ಅಪ್ ಓಲಾ ಅನುಸರಿಸುತ್ತದೆ, ಇದು ಮುಂದಿನ ವರ್ಷ ಸಾರ್ವಜನಿಕ … Continued

ಧಾರವಾಡ: 11 ದಿನಗಳ ವರೆಗೆ ಗಣೇಶೋತ್ಸವ ಆಚರಣೆಗೆ ಅವಕಾಶ

ಧಾರವಾಡ: ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವವನ್ನು ಗರಿಷ್ಠ 11 ದಿನಗಳ ವರೆಗೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಸೆ.5 ರಂದು ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಗರಿಷ್ಠ 5 ದಿನ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗಿತ್ತು. ಈಗ ಪರಿಷ್ಕೃತ ಆದೇಶದಲ್ಲಿ ಈ ನಿಯಮ‌ ಸಡಿಲಿಸಿ ಜಿಲ್ಲೆಯಲ್ಲಿ ಈ ಹಿಂದೆ ಸಾಂಪ್ರದಾಯಿಕವಾಗಿ 11 … Continued

ಕರ್ನಾಟಕದಲ್ಲಿ ಸೋಮವಾರ ಹೊಸದಾಗಿ 673 ಜನರಿಗೆ ಕೊರೊನಾ ಸೋಂಕು 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ..!

ಬೆಂಗಳೂರು: ರಾಜ್ಯದಲ್ಲಿ ಇಂದು (ಸೋಮವಾರ) ಹೊಸದಾಗಿ 673 ಜನರಿಗೆ ಸೋಂಕು ದೃಢಪಟ್ಟಿದೆ.ಇದೇ ಸಮಯದಲ್ಲಿ 13 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,62,408 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೇ ಸಮಯದಲ್ಲಿ 1074 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 29,08,622 ಜನ ಗುಣಮುಖರಾಗಿದ್ದಾರೆ.ಒಟ್ಟು 37,517 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 16,241 ಸಕ್ರಿಯ … Continued

75 ಕೋಟಿ ದಾಟಿದ ಭಾರತದ ಕೋವಿಡ್‌-19 ಲಸಿಕೆ ನಿರ್ವಹಣೆ..! :ಅಭೂತಪೂರ್ವ ವೇಗ ಎಂದ ಡಬ್ಲ್ಯೂಎಚ್‌ಒ

ನವದೆಹಲಿ: ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ಮಹತ್ವದ ಸಾಧನೆಯಲ್ಲಿ, ದೇಶದ ಕೋವಿಡ್ -19 ಲಸಿಕೆ ಡೋಸ್‌ ನೀಡಿಕೆಯು ಸೋಮವಾರ 75 ಕೋಟಿ ಗಡಿ ದಾಟುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಅವರು ಭಾರತದ 75 ನೇ ಸ್ವಾತಂತ್ರ್ಯದ … Continued