ತಲೆಗೆ 20 ಲಕ್ಷ ರೂ.ಬಹುಮಾನವಿದ್ದ ಮಾವೋವಾದಿ ನಾಯಕ ದುಬಾಶಿ ಶಂಕರ್ ಬಂಧನ

ಭುವನೇಶ್ವರ: ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ ಒಡಿಶಾ ಪೊಲೀಸರು ಮಾವೋವಾದಿ ನಾಯಕ ದುಬಾಶಿ ಶಂಕರ್ ಅವರನ್ನು ಬಂಧಿಸಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಮಂಗಳವಾರ ಹೇಳಿದ್ದಾರೆ.
ಈತನ ತಲೆಗೆ 20 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು.ಶಂಕರ್ ಕಳೆದ 20 ವರ್ಷಗಳಲ್ಲಿ ಒಡಿಶಾ ಪೊಲೀಸರು ಬಂಧಿಸಿದ ಅತ್ಯುನ್ನತ ಶ್ರೇಣಿಯ ಮಾವೋವಾದಿ ಎಂದು ಅವರು ಹೇಳಿದರು.
ಕೋರಾಪುಟ್ ಜಿಲ್ಲೆಯ ಬೋಯಿಪರಿಗುಡ ಪೊಲೀಸ್ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಮಾವೋವಾದಿಗಳ ಗುಂಪಿನ ಚಲನವಲನಕ್ಕೆ ಸಂಬಂಧಿಸಿದಂತೆ ನಂಬಲರ್ಹ ಮಾಹಿತಿಯನ್ನು ಪಡೆದ ನಂತರ, ಸೆಪ್ಟೆಂಬರ್ 12 ರ ರಾತ್ರಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಎಂದು ಅಭಯ್ ಹೇಳಿದರು.
ಮರುದಿನ ಮುಂಜಾನೆ, ದುಬಾಶಿ ಶಂಕರ್, ಮಹೇಂದರ್, ಅರುಣ್, ರಮೇಶ್, ಆರ್‌ಎಂ ಮತ್ತು ಮಹೇಶ್, ಹೀಗೆ ಹಲವಾರು ಹೆಸರುಗಳನ್ನು ಹೊಂದಿರುವ ಹಾರ್ಡ್‌ಕೋರ್ ಮಾವೋವಾದಿಯನ್ನು ಪೊಲೀಸರು ಬಂಧಿಸಿದರು ಎಂದು ಅವರು ಹೇಳಿದರು.
ಶಂಕರ್ ಅವರ ಬಳಿಯಿಂದ ಒಂದು ಇನ್ಸಾಸ್ ರೈಫಲ್, 10 ಸುತ್ತು ಮದ್ದುಗುಂಡುಗಳು, ಒಂದು ಮೊಬೈಲ್ ಫೋನ್, ರೇಡಿಯೋ, ಅಮೆಜಾನ್ ಕಿಂಡಲ್, 35,500 ರೂಪಾಯಿ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋರಾಪುಟ್ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ರವಾನಿಸಿದರು ಎಂದು ಡಿಜಿಪಿ ಹೇಳಿದರು.
ಮಾವೋವಾದಿ ದಾಮಂಜೋಡಿಯಲ್ಲಿ ಹೊಂಚುದಾಳಿ ಸೇರಿದಂತೆ ಹಲವು ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ, ಇದರಲ್ಲಿ 10 ಸಿಐಎಸ್‌ಎಫ್ ಯೋಧರು ಹುತಾತ್ಮರಾಗಿದ್ದರು ಮತ್ತು 2010 ರಲ್ಲಿ ಗೋವಿಂದಪಲ್ಲಿ ನೆಲಬಾಂಬ್ ಸ್ಫೋಟದಲ್ಲಿ 11 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಅದಲ್ಲದೆ, 2012 ರಲ್ಲಿ ಜಾನಿಗೌಡ ಹೊಂಚುದಾಳಿ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ, ಇದರಲ್ಲಿ ನಾಲ್ವರು ಬಿಎಸ್‌ಎಫ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಕೋರಾಪುಟ್ ಜಿಲ್ಲೆಯಲ್ಲಿ ಎರಡು ಅಪರಾಧ ಪ್ರಕರಣಗಳಲ್ಲಿ, ಮಲ್ಕನಗಿರಿ ಜಿಲ್ಲೆಯ 18 ಪ್ರಕರಣಗಳಲ್ಲಿ, ವಿಶಾಖಪಟ್ಟಣಂ ಜಿಲ್ಲೆಯ 32 ಪ್ರಕರಣಗಳಲ್ಲಿ ಮತ್ತು ತೆಲಂಗಾಣದಲ್ಲಿ 24 ಅಪರಾಧ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ತಿಳಿಸಿದರು.
ಸಂಬಂಧಿತ ಬೆಳವಣಿಗೆಯಲ್ಲಿ, ಗುಮಾ ಪ್ರದೇಶ ಸಮಿತಿಯ ಸದಸ್ಯರಾದ ಸೋನಲ್ ಮಾದ್ವಿ ಕಿರಣ್ ಅವರು ಮಂಗಳವಾರ ಕೋರಾಪುಟ್ ನ ಎಸ್ಪಿ ಮತ್ತು ಡಿಐಜಿ ಮುಂದೆ ಶರಣಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement