ಆರ್ಯನ್‌ ಖಾನ್‌ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟನೆ ಜಾಹೀರಾತು ನಿಲ್ಲಿಸಿದ ಬೈಜುಸ್‌..!

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ನಡೆದ ಡ್ರಗ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್ ತನಿಖೆಯ ವೇಳೆ ಚರಸ್ ಸೇವನೆ ಮಾಡಿರುವುದಾಗಿ ಎನ್‌ಸಿಬಿ ಹೇಳಿದೆ. ಮಗನ ಡ್ರಗ್ಸ್‌ ಪ್ರಕರಣ ತಂದೆ ಶಾರುಖ್‌ಗೆ ನಷ್ಟಕ್ಕೆ ಕಾರಣವಾಗಿದೆ. ಎನ್‌ಸಿಬಿ ಆರ್ಯನ್‌ ಮಾದಕ ವಸ್ತು ಸೇವನೆಯ ಕುರಿತು ಮಾಹಿತಿ ನೀಡುತ್ತಲೇ ಇತ್ತ ಜಾಹೀರಾತು ಕಂಪೆನಿಗಳು ಬಾಲಿವುಡ್ … Continued

ಹೆಟೆರೊ ಫಾರ್ಮಾ ಗ್ರೂಪ್ಸ್‌ ಮೇಲೆ ಐಟಿ ಇಲಾಖೆ ದಾಳಿ: 550-ಕೋಟಿ ಗುಪ್ತ ಆದಾಯ ಪತ್ತೆ, 142 ಕೋಟಿ ನಗದು ವಶ

ನವದೆಹಲಿ: ಹೈದರಾಬಾದ್‌ ಮೂಲದ ಹೆಟಿರೊ ಫಾರ್ಮಸುಟಿಕಲ್ಸ್‌ ಸಮೂಹ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ₹550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು (ಲೆಕ್ಕವಿಲ್ಲದ) ಪತ್ತೆ ಮಾಡಿದ್ದು, ₹142 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ದಾಳಿಗೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಅಕ್ಟೋಬರ್ … Continued

ಮಗ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆದ ನಂತ್ರ ಜಗತ್ತಿನ ಕ್ಷಮೆ ಕೋರಿ, ಕೋಟ್ಯಂತರ ಆಸ್ತಿ ಚಾರಿಟಿಗೆ ದಾನ ಮಾಡಿದ್ದ ಹಾಲಿವುಡ್‌ ನಟನ ಸುದ್ದಿ ಆರ್ಯನ ಖಾನ್‌ ಬಂಧನದ ನಂತರ ಟ್ರೆಂಡಿಂಗ್‌ಗೆ

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದಾರೆ. ಸದ್ಯಕ್ಕೆ ಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿದೆ. ಆದರೂ ಆತನ ಪರವಾಗಿ ಹಲವಾರು ಮಂದಿ ಬಾಲಿವುಡ್‌ ನಟರು ನಿಂತಿದ್ದಾರೆ. ಆದರೆ ಈ ನಡುವೆಯೇ ಇದೇ ರೀತಿ ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿರುವ ಹಾಲಿವುಡ್‌ ನಟನ ಪುತ್ರನ ವಿಚಾರ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗುತ್ತಿದೆ. ಅದೇ … Continued

ಲಖೀಂಪುರ್ ಖೇರಿ ರೈತ ಹತ್ಯಾಕಾಂಡ; ಪೊಲೀಸ್ ವಿಚಾರಣೆಗೆ ಕೊನೆಗೂ ಹಾಜರಾದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ

ಲಕ್ನೋ : ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹಾಯಿಸಿರುವ ಆರೋಪಿಯಾಗಿವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಇಂದು (ಶನಿವಾರ) ಲಖಿಂಪುರ್ ಖೇರಿಗೆ ಹತ್ತಾರು ಪೊಲೀಸರ ಬೆಂಗಾವಲಿನಲ್ಲಿ ವಿಚಾರಣೆಗೆ ಆಗಮಿಸಿದ್ದಾರೆ. ಐದು ದಿನಗಳ ನಂತರವೂ ಆಶಿಶ್‌ನನ್ನು ಬಂಧಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದರಲ್ಲಿ ನಾಲ್ವರು … Continued

ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ..ಮತ್ತು ಬರುವ ಚಾಕಲೇಟ್‌ ನೀಡಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಅಪಹರಣ; ಐದು ಜನರಿಂದ ಸಾಮೂಹಿಕ ಅತ್ಯಾಚಾರ

ಬಂಟ್ವಾಳ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಅಂಥದ್ದೇ ಪ್ರಕರಣ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವರದಿಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಐದು ಮಂದಿ ಅಪಹರಿಸಿ ಆಕೆಗೆ ಮತ್ತು ಬರುವ ಚಾಕಲೇಟ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ … Continued

ನೆಹರು ಸರ್ಕಾರ ಏರ್ ಇಂಡಿಯಾ ವಹಿಸಿಕೊಂಡಾಗ ಟಾಟಾಗೆ ನೀಡಿದ್ದು 2.8 ಕೋಟಿ ರೂ… ಮರಳಿ ಖರೀದಿಸಲು ಈಗ ಟಾಟಾ ಸಮೂಹ ನೀಡಿದ್ದು 18,000 ಕೋಟಿ ರೂ

ನವದೆಹಲಿ:1932 ರಲ್ಲಿ ಜೆಆರ್‌ಡಿ ಟಾಟಾ ಸ್ಥಾಪಿಸಿದ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಗ್ರೂಪ್ ಬಿಡ್ ಗೆದ್ದಿದೆ ಎಂದು ಸರ್ಕಾರ ಶುಕ್ರವಾರ ಘೋಷಿಸಿತು. ಏರ್ ಇಂಡಿಯಾದ ಘರ್ ವಾಪಸಿ ಅದರ ಸ್ಥಾಪನೆಯ 89ನೇ ಜನ್ಮದಿನವಾದ ಅಕ್ಟೋಬರ್ 15.ರ ಒಂದು ವಾರದ ಮೊದಲು ಘೋಷಿಸಲಾಯಿತು. 68 ವರ್ಷಗಳ ಸರ್ಕಾರಿ ಸ್ವಾಮ್ಯದ ನಂತರ ಏರ್ ಇಂಡಿಯಾ ಮತ್ತೆ … Continued

ಕರ್ನಾಟಕದಲ್ಲಿ ಅ.13ರವರೆಗೂ ಭಾರಿ ಮಳೆ, 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 13ರ ವರೆಗೂ ಮಳೆ ಮುಂದುವರೆಯಲಿ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದ್ದು, 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ಉತ್ತರ … Continued

ಭಾರತದಲ್ಲಿ 19,740 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,740 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿಯು ಶನಿವಾರ ತೋರಿಸಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣಗಳು 3,39,35,309 ಕ್ಕೆ ಏರಿದೆ. ಕೊರೊನಾ ವೈರಸ್‌ನಿಂದ ದೇಶವು 248 ಸಾವುಗಳನ್ನು ವರದಿ ಮಾಡಿದೆ, ಇದು 4,50,375 ಕ್ಕೆ ತಲುಪಿದೆ. ಭಾರತದ ಸಕ್ರಿಯ ಪ್ರಕರಣಗಳು 24 … Continued

ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ರಾಷ್ಟ್ರಪತಿ ರಾಮನಾಥ ಕೋವಿಂದ್‌

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀಶಾರದಾಂಬೆಯ ದರ್ಶನಕ್ಕಾಗಿ ರಾಮನಾಥ ಕೋವಿಂದ್‌ ಆಗಮಿಸಿದ್ದರು. ಪತ್ನಿ ಸವಿತಾ ಕೋವಿಂದ್‌ ಹಾಗೂ ಪುತ್ರಿ ಸ್ವಾತಿ ಕೋವಿಂದ್‌ ಕೂಡ ಜೊತೆಯಲ್ಲಿದ್ದರು. ಮಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ರಾಷ್ಟ್ರಪತಿಗಳಿಗೆ ಶೃಂಗೇರಿಯಲ್ಲಿ ಆನೆ, ಆಶ್ವ, ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ನಂತರ ಕುಟುಂಬ ಸಮೇತರಾಗಿ ಶಾರದಾಂಬೆಯ ದರ್ಶನ ಪಡೆದು ನವರಾತ್ರಿ ಉತ್ಸವದಲ್ಲಿ ಭಾಗಿಯಾದರು. ನಂತರ ರಾಷ್ಟ್ರಪತಿ ರಾಮನಾಥ … Continued