ಧಾರವಾಡ:  ಜೆಎಸ್ಎಸ್ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕೀರ್ತಿ ಲೋಕುರ, ವರ್ಷಾ ಹುದ್ದಾರಗೆ ಸುವರ್ಣ ಪದಕಗಳ ಗರಿಮೆ

ಧಾರವಾಡ: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಂಗ್ಲಭಾಷಾ ಸ್ನಾತಕೋತ್ತರ ವಿಭಾಗದಲ್ಲಿ ೨೦೧೮-೧೯ ನೇ ಸಾಲಿನಲ್ಲಿ ಅಧ್ಯಯನ ಮಾಡುತ್ತಿದ್ದ ಕೀರ್ತಿ ಲೋಕುರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಅಂತಿಮ ವರ್ಷದಲ್ಲಿ ಆರು (೬) ಸುವರ್ಣ ಪದಕಗಳನ್ನು ಗಳಿಸಿದ್ದಾರೆ ಮತ್ತು ೨೦೧೯-೨೦ ನೇ ಸಾಲಿನಲ್ಲಿ ವರ್ಷಾ ಹುದ್ದಾರ ಐದು (೫) ಸುವರ್ಣ ಪದಕ ಗಳಿಸಿ ಸಂಸ್ಥೆಗೆ ಹಾಗೂ ಆಂಗ್ಲಭಾಷಾ ವಿಭಾಗಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಈ ಸಾಧನೆಗಳು ಆಂಗ್ಲಭಾಷಾ ವಿಭಾಗಕ್ಕೆ ಸರ್ವಕಾಲೀನ ದಾಖಲೆಯಾಗಿದೆ. ಈ ಇಬ್ಬರು ಸಾಧಕಿಯರು ಭವಿಷ್ಯದಲ್ಲಿ ಪ್ರಾಧ್ಯಾಪಕರಾಗುವ ಕನಸನ್ನು ಹೊಂದಿದ್ದಾರೆ.
ಇವರ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳು ಮತ್ತು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ, ಹಾಗೂ ಆಂಗ್ಲ ಸ್ನಾತಕೋತ್ತರ ಭಾಷಾವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಜೆ. ಕುಂಬಾರ ಮತ್ತು ಪ್ರಾಧ್ಯಾಪಕ ವೃಂದ – ಪ್ರೊ. ಪ್ರವೀಣ ಕೊರ್ಲಹಳ್ಳಿ, ಶ್ರೀಮತಿ. ಸ್ಮಿತಾ ಪಾಟೀಲ, ಡಾ. ಆರ್. ವಿ. ಚಿಟಗುಪ್ಪಿ, ಡಾ. ಪ್ರಶಾಂತ ಮಾಂಡ್ರೆ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement