ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ

ನವದೆಹಲಿ: ಡಿಐಪಿಎಂ (DIPAM) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್​ಎಲ್​ ಎನ್‌ಎಸ್‌ಇ ( NSE) 4.17 % ಮತ್ತು ಮತ್ತು ಬಿಎಸ್​ಎನ್​ಎಲ್​ನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸುಮಾರು 1,100 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ದಾಖಲೆಗಳನ್ನು ಅಪ್​ಲೋಡ್​ ಮಾಡಿದೆ. ಹೈದರಾಬಾದ್, ಚಂಡೀಗಢ, ಭಾವನಗರ … Continued

ನೀವು ಪಂಜಾಬ್‌ ಜೀವನ ಬದಲಾಯಿಸಲು ಬಯಸಿದರೆ, ಪಾಕಿಸ್ತಾನದ ಗಡಿ ಮೊದಲು ತೆರೆಯಬೇಕು: ನವಜೋತ್ ಸಿಧು ಹೊಸ ವಿವಾದ

ಗುರುದಾಸ್‌ಪುರ: ಭಾರತವು ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ರಾಷ್ಟ್ರೀಯ ಭದ್ರತೆಗೆ ನಿರಂತರ ಬೆದರಿಕೆ ಎದುರಿಸುತ್ತಿರುವ ಸಮಯದಲ್ಲಿ ಭಾರತವು ಪಾಕಿಸ್ತಾನದೊಂದಿಗಿನ ತನ್ನ ಗಡಿಯನ್ನು ವ್ಯಾಪಾರಕ್ಕಾಗಿ ತೆರೆಯಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಶನಿವಾರ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಪಂಜಾಬ್‌ನ ಜೀವನವನ್ನು ಬದಲಾಯಿಸಲು ಬಯಸಿದರೆ, ನಾವು ಗಡಿಗಳನ್ನು … Continued

ಕೇಂದ್ರದಿಂದ ಕೃಷಿ ಕಾನೂನು ರದ್ದುಗೊಳಿಸುವ ಭರವಸೆ: ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆ ಕುರಿತು ನಾಳೆ ನಿರ್ಧಾರ

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರವೂ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿಗೆ ಟ್ರ್ಯಾಕ್ಟರ್ ರ್ಯಾಲಿಯನ್ನು ಕೊಂಡೊಯ್ಯುವ ಪ್ರಸ್ತಾಪವನ್ನು ಪ್ರತಿಭಟನಾನಿರತ ರೈತರು ಮುಂದುವರಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಂದು ಪ್ರಾರಂಭವಾಗಿ ಡಿಸೆಂಬರ್ 23 ರಂದು ಕೊನೆಗೊಳ್ಳಲಿದೆ. ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನವೆಂಬರ್‌ನಲ್ಲಿ ಕೃಷಿ … Continued

ಸತತ 5ನೇ ಬಾರಿಗೆ ಭಾರತದ ಸ್ವಚ್ಛ ನಗರ ಪಟ್ಟ ಅಲಂಕರಿಸಿದ ಇಂದೋರ್..!

ನವದೆಹಲಿ: ಕೇಂದ್ರ ಸರ್ಕಾರ ದೇಶದ ಸ್ವಚ್ಚ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದೆ. ಆದರೆ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ನಿರಾಸೆಯಾಗಿದೆ. ಮೈಸೂರು ನಗರ 5 ನೇ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು … Continued

ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಬೃಹತ್‌ ಕಲ್ಲು ತುಂಬುತ್ತಿದ್ದ ಭಾರೀ ಉದ್ದದ ಟ್ರಕ್..! ವೀಕ್ಷಿಸಿ

ಕ್ಷಣಾರ್ಧದಲ್ಲಿ ಅನಾಹುತವೇ ನಡೆದು ಹೋಗಿದೆ. ಸಣ್ಣ ಅಜಾಗರೂಕತೆಯಿಂದಾಗಿ ಬೃಹತ್‌ ಟ್ರಕ್‌ ಪ್ರಪಾತಕ್ಕೆ ಬಿದ್ದಿದೆ. ಭಾಋಈ ಉದ್ದನೆಯ ಟ್ರಕ್‌ ಬೀಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಅದನ್ನು ಐಎಎಸ್‌ ಅಧಿಕಾರಿ ರುಪಿನ್‌ ಶರ್ಮಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಭಾರೀ ಉದ್ದದ ಟ್ರಕ್‌ಗೆ ಬೃಹತ್ ಬಂಡೆಯನ್ನು ತುಂಬುವಾಗ ಈ ಅನಾಹುತ ಸಂಭವಿಸಿದೆ. ಬಂಡೆಯನ್ನು ತುಂಬುತ್ತಿದ್ದಂತೆಯೇ ಒಂದು … Continued

‘ಮಹಾಂತ ನರೇಂದ್ರ ಗಿರಿ’ ಸಾವಿನ ಪ್ರಕರಣ :ಮೂವರು ಆರೋಪಿಗಳ ವಿರುದ್ಧ ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ : ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಇಂದು ಅವರ ಶಿಷ್ಯಂದಿರರಾದ ಆನಂದ್ ಗಿರಿi, ಸಂದೀಪ್ ತಿವಾರಿ ಮತ್ತು ಆತನ ಪುತ್ರ ಆದ್ಯ ತಿವಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಯಾಗ್ … Continued

ಕುಲಗಾಂವ್: ಹಿಜ್ಬುಲ್​ ಮುಜಾಹಿದ್ದೀನ್ ಕಮಾಂಡರ್‌ ಸೇರಿ ಇಬ್ಬರು ಭಯೋತ್ಪಾದಕ ಹತ್ಯೆ; ಶಾಲಾ ಮಕ್ಕಳು ಸೇರಿ 60 ಮಂದಿ ರಕ್ಷಣೆ

ಶ್ರೀನಗರ: ಜಮ್ಮು-ಕಾಶ್ಮೀರದ ಕುಲಗಾಂವ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯುತ್ತಿದೆ. ಇಲ್ಲಿಯವರೆಗೆ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಎನ್​ಕೌಂಟರ್​ನಲ್ಲಿ ಹತ್ಯೆಯಾದ ಇಬ್ಬರು ಉಗ್ರರಲ್ಲಿ ಒಬ್ಬಾತ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಕಮಾಂಡರ್​​ ಎಂದು ಗುರುತಿಸಲಾಗಿದೆ ಎನ್​ಕೌಂಟರ್​ ನಡೆಯುತ್ತಿರುವ ಸ್ಥಳದಿಂದ ಶಾಲಾ ಮಕ್ಕಳು ಸೇರಿ ಸುಮಾರು 60 ಜನರನ್ನು ಭದ್ರತಾ ಪಡೆ ಸಿಬ್ಬಂದಿ … Continued

ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ ದೆಹಲಿ ಹೈಕೋರ್ಟಿನಿಂದ 10 ಸಾವಿರ ರೂ. ದಂಡ

ನವದೆಹಲಿ: ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ 10 ಸಾವಿರ ರೂ.ಗಳ ದಂಡ ವಿಧಿಸಿರುವ ದೆಹಲಿ ಹೈಕೋರ್ಟ್‌, ಇಂತಹ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದ್ದರೂ ಅವರು ಸೂಕ್ತ ಧಿರಿಸಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಹೀಗಾಗಿ ಐದನೇ ಅರ್ಜಿದಾರರಿಗೆ 10,000 ರೂ.ಗಳ ದಂಡ ವಿಧಿಸಲಾಗಿದ್ದು ಒಂದು ವಾರದೊಳಗೆ ದೆಹಲಿ … Continued

ಪಿತೂರಿ ಕುರಿತು ಆರ್ಯನ್ ಖಾನ್ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಮುಂಬೈ ಕ್ರೂಸ್‌ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರಿಗೆ ಜಾಮೀನು ನೀಡಿದ ಸಕಾರಣ ಆದೇಶವನ್ನು ಬಾಂಬೆ ಹೈಕೋರ್ಟ್‌ ಬಿಡುಗಡೆ ಮಾಡಿದ್ದು ಎನ್‌ಡಿಪಿಎಸ್‌ ಕಾಯಿದೆ ಅಡಿ ಪಿತೂರಿ ಮಾಡಿದ ಕುರಿತು ಆರ್ಯನ್‌ ಖಾನ್‌ ಹಾಗೂ ಸಹ ಆರೋಪಿಗಳಾದ ಅರ್ಬಾಜ್‌ ಮರ್ಚೆಂಟ್‌ ಮತ್ತು ಮೂನ್‌ಮೂನ್‌ ಧಮೇಚಾ ವಿರುದ್ಧ ಮೇಲ್ನೋಟದ … Continued

ಅಕಾಲಿಕ ಮಳೆಗೆ ಬೆಳೆ ನಾಶ; ಮನನೊಂದು ರೈತ ಆತ್ಮಹತ್ಯೆ

ಶಿರಸಿ:ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದ್ದಕ್ಕೆ ಮನನೊಂದು ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನರೂರು ಗ್ರಾಮದಲ್ಲಿ ನಡೆದ ವರದಿಯಾಗಿದೆ. ಗಂಗಾಧರ ಫಕೀರಣ್ಣ ಶೇಷಣ್ಣನವರ (58) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದ್ದು, ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತ, ಶುಂಠಿ ಹಾಗೂ ಇತರ ಬೆಳೆ ಹಾನಿಯಾಗಿದ್ದಕ್ಕೆ ತೀವ್ರವಾಗಿ … Continued