ನಿರ್ಲಕ್ಷ್ಯವೋ..ಅಚ್ಚರಿಯೋ…: ಶವಾಗಾರದ ಫ್ರೀಜರ್‌ನಲ್ಲಿ 7 ತಾಸುಗಳ ಕಾಲ ಇರಿಸಿದ್ದ ‘ಸತ್ತ’ ವ್ಯಕ್ತಿ ಬದುಕಿ ಬಂದ..!

ಲಕ್ನೋ: ಒಂದು ಅಪರೂಪದ ಘಟನೆಯಲ್ಲಿ, ಮೃತಪಟ್ಟಿದ್ದಾನೆಂದು ವೈದ್ಯರು ಅಧಿಕೃತವಾಗಿ ಘೋಷಿಸಿ ಶವಗಾರದಲ್ಲಿ ಇರಿಸಿದ್ದ ವ್ಯಕ್ತಿ ಏಳು ತಾಸುಗಳ ನಂತರ ಜೀವಂತವಾಗಿ ಹೊರಬಂದ ಅಪರೂದ ವಿದ್ಯಮಾನ ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ…!  40 ವರ್ಷದ ವ್ಯಕ್ತಿಯನ್ನು ಜೀವಂತವಾಗಿ ಹೊರಬರುವ ಮೊದಲು ಆ ವ್ಯಕ್ತಿ ಸತ್ತಿದ್ದಾನೆಂದು ಸುಮಾರು ಏಳು ಗಂಟೆಗಳ ಕಾಲ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು.
ಎಲೆಕ್ಟ್ರಿಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಕೇಶ್ ಕುಮಾರ್ (40) ಎಂಬಾತನಿಗೆ ವೇಗವಾಗಿ ಬಂದ ಮೋಟಾರು ಬೈಕ್‌ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.
ಮರುದಿನ ಮರಣೋತ್ತರ ಪರೀಕ್ಷೆ ನಡೆಸುವುದೆಂದು ನಿರ್ಧರಿಸಿ ವ್ಯಕ್ತಿಯ ದೇಹವನ್ನು ಪ್ಯಾಕ್‌ ಮಾಡಿ ಶವಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಇದಾದ ಏಳು ತಾಸಿನ ನಂತರ ವ್ಯಕ್ತಿಯ ದೇಹವನ್ನು ಗುರುತಿಸಿದ ಕುಟುಂಬಸ್ಥರು ಶವಪರೀಕ್ಷೆಗೆ ಒಪ್ಪಿಗೆ ಸೂಚಿಸಿ ಕುಟುಂಬ ಸದಸ್ಯರು ಸಹಿ ಮಾಡಿದ ‘ಪಂಚನಾಮ’ ಅಥವಾ ದಾಖಲೆಯನ್ನು ಪೊಲೀಸರು ಸಲ್ಲಿಸಲು ಮುಂದಾದಾಗ ಮುಂದಾಗಿದ್ದರು. ಈ ವೇಳೆ ಆತನ ಕೈ-ಕಾಲುಗಳು ಅಲುಗಾಡುತ್ತಿರುವುದನ್ನು ಆತನ ಅತ್ತಿಗೆ ಗುರುತಿಸಿದರು. “ಅವನು ಸತ್ತಿಲ್ಲ. ನೋಡಿ, ಅವನು ಏನನ್ನೋ ಹೇಳಲು ಬಯಸುತ್ತಾನೆ, ಅವನು ಉಸಿರಾಡುತ್ತಿದ್ದಾನೆ ಎಂದು ತಿಳಿದರು.
ಕುಟುಂಬಸ್ಥರು ವೈದ್ಯರಿಗೆ ತಿಳಿಸಿದರು. ನಂತರ ವೈದ್ಯರು ಆತ ಬದುಕಿದ್ದಾನೆ ಎಂಬುದನ್ನು ಖಾತ್ರಿ ಪಡಿಸಿಕೊಂಡರು. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಆತನನ್ನು ಮೀರತ್‌ನ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಕೊನೆಗೆ ಕುಮಾರ್‌ನ ಪರೀಕ್ಷೆ ನಡೆಸಿದ ವೈದ್ಯರು, ಕುಮಾರ್‌ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್ ಮಾತನಾಡಿ, ತುರ್ತು ವೈದ್ಯಕೀಯ ಅಧಿಕಾರಿಯು ರೋಗಿಯನ್ನು ಮುಂಜಾನೆ 3 ಗಂಟೆಗೆ ನೋಡಿದ್ದಾರೆ ಮತ್ತು ಹೃದಯ ಬಡಿತ ಇರಲಿಲ್ಲ. ಅವರು ವ್ಯಕ್ತಿಯನ್ನು ಹಲವು ಬಾರಿ ಪರೀಕ್ಷಿಸಿದ್ದಾರೆ. ನಂತರ, ಅವರು ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಆದರೆ, ಬೆಳಿಗ್ಗೆ, ಪೊಲೀಸ್. ತಂಡ ಮತ್ತು ಅವನ ಕುಟುಂಬವು ಅವನನ್ನು ಜೀವಂತವಾಗಿ ಕಂಡುಕೊಂಡಿದೆ. ತನಿಖೆಗೆ ಆದೇಶಿಸಲಾಗಿದೆ. ಈಗ ಅವನ ಜೀವವನ್ನು ಉಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಇದು “ಅಪರೂಪದ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ… ನಾವು ಅದನ್ನು ನಿರ್ಲಕ್ಷ್ಯ ಎಂದು ಕರೆಯಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿದರು. ಕುಮಾರ್ ಈಗ ಮೀರತ್‌ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದರು.
ಅವನ ಅತ್ತಿಗೆಯ ಪ್ರಕಾರ, “ಅವನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಶ್ರೀಕೇಶ್ ಅವರನ್ನು ಫ್ರೀಜರ್‌ನಲ್ಲಿ ಇರಿಸಿ ಬಹುತೇಕ ಕೊಂದ ವೈದ್ಯರ ನಿರ್ಲಕ್ಷ್ಯಕ್ಕಾಗಿ ನಾವು ಅವರ ವಿರುದ್ಧ ದೂರು ನೀಡುತ್ತೇವೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement