ಭಾರೀ ಹಿಮಪಾತದ ನಡುವೆಯೇ ದೇಶದ ಹಿಮಚ್ಛಾದಿತ ದೇಶದ ಗಡಿ ಕಾಯ್ತಾರೆ ನಮ್ಮ ಸೈನಿಕರು: ಹೇಗೆ ಬಂಡೆಯಂತೆ ನಿಲ್ತಾರೆ, ಗಸ್ತು ತಿರುಗ್ತಾರೆ…! ವೀಕ್ಷಿಸಿ

ನವದೆಹಲಿ: ಇಡೀ ಉತ್ತರ ಭಾರತ ತೀವ್ರ ಚಳಿಯಿಂದ ತತ್ತರಿಸಿದೆ. ಎತ್ತರದ ಪ್ರದೇಶಗಳಲ್ಲಿನ ಪರಿಸ್ಥಿತಿಯಂತೂ ಇನ್ನಷ್ಟು ಕಠಿಣವಾಗಿದೆ, ತಾಪಮಾನವು  ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಅಂತಹ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ; ಚಳಿಗೆ ಹೆಪ್ಪುಗಟ್ಟಿ ಸಾಯುವ ಭಯ ಸಹ ಎದುರಾಗುತ್ತದೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಮಚ್ಛಧಿತ ಗಡಿಪ್ರದೇಶಗಳಲ್ಲಿ ಭಾರತೀಯ ಸೇನೆಯ ಸೈನಿಕರು ದೇಶವನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ, ಭಾರತದ ಗಡಿಗಳನ್ನು ರಕ್ಷಿಸಲು ಅಚಲ ಸಂಕಲ್ಪದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಧಂಪುರ, ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ,   ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊಗಳು, ಈ ಸೈನಿಕರು ಇಂಥ ಮೈನಸ್‌ ಡಿಗ್ರಿ ಇರುವ ಪ್ರದೇಶದಲ್ಲಿ ದಟ್ಟವಾದ ಮಂಜುಗಡ್ಡೆ ಹೆಪ್ಪುಗಟ್ಟಿದ ಪ್ರದೇಶ ಹಾಗೂ ತೀವ್ರ ಚಳಿಗಾಳಿಯಲ್ಲಿ ಸವಾಲನ್ನು ಎದುರಿಸಿ  ತಮ್ಮ ಕರ್ತವ್ಯ ನಿರ್ವಹಿಸುವ ಕಠಿಣ ಕೆಲಸವನ್ನು ತೋರಿಸುತ್ತವೆ.
ಒಂದು ವಿಡಿಯೊದಲ್ಲಿ, ಜಾಗರೂಕ ಸೈನಿಕನು ಚಳಿಗಾಲದ ಕೊರೆಯುವ ಚಳಿಯಲ್ಲಿ ಗಡಿಯ ಮೇಲೆ ಗಿಡುಗನಂತೆ ನೋಡುತ್ತ ಬಂಡೆಯಂತೆ ನಿಂತಿರುವುದನ್ನು ಕಾಣಬಹುದು.ಸೈನಿಕನ ಕಡೆ ಬೀಸುವ ತಂಪಾದ ಗಾಳಿಯು  ಕಡೆಗೆ ಬೀಸುವ ತಂಪಾದ ಗಾಳಿ ಹಾಗೂ ಗಾಳಿಯೊಟ್ಟಿಗೆ ಶರೀರಕ್ಕೆ ಬಡಿಯುವ ಮಂಜಿನ ಹನಿಗಳು ಆ ಸೈನಿಕನ ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೂ ಆತ ಗನ್‌ ಹಿಡಿದು ಬಂಡೆಯಂತೆ ಅಚಲವಾಗಿ ನಿಂತು ಗಡಿ ಕಾಯುತ್ತಿದ್ದಾನೆ.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

“ಯಾವುದೇ ಸುಲಭವಾದ ಭರವಸೆ ಅಥವಾ ಸುಳ್ಳುಗಳು ನಮ್ಮನ್ನು ನಮ್ಮ ಗುರಿಯತ್ತ ತರುವುದಿಲ್ಲ, ಆದರೆ ದೇಹ, ಇಚ್ಛೆ ಮತ್ತು ಆತ್ಮದ ಕಬ್ಬಿಣದ ತ್ಯಾಗ. ಅಲ್ಲಿ ಎಲ್ಲರಿಗೂ ಒಂದೇ ಸವಾಲಿದೆ, ಹೊಣೆಯಿದೆ. ಕೊಡಲು ಪ್ರತಿಯೊಬ್ಬರಿಗೂ ಒಂದು ಜೀವನ. ಸ್ವಾತಂತ್ರ್ಯ ಪತನವಾದರೆ ಯಾರು ನಿಲ್ಲುತ್ತಾರೆ?  ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
ಗಡಿ ಪ್ರದೇಶಗಳಲ್ಲಿ ಗಸ್ತು ತಿರುಗಲು ಸೈನಿಕರ ಗುಂಪು ಹಿಮದಿಂದ ಆವೃತವಾದ ಪರ್ವತದ ಮೂಲಕ ನಡೆಯುವುದನ್ನು ಮತ್ತೊಂದು ವಿಡಿಯೊ ತೋರಿಸುತ್ತದೆ. “ಉದ್ಯಾನದಲ್ಲಿ ನಿಮ್ಮ ಮುಂಜಾನೆಯ ನಡಿಗೆಯೊಂದಿಗೆ ಇದನ್ನು ಹೋಲಿಕೆ ಮಾಡಿ!” ಎಂದು ಉಧಂಪುರದ ಸಾರ್ವಜನಿಕ ಸಂಪರ್ಕಾಧಿಕಾರಿ ಪೋಸ್ಟ್ ಮಾಡಿದ ಟ್ವೀಟ್ನಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಈ ಪೋಸ್ಟ್‌ಗಳನ್ನು ಟ್ವಿಟರ್ ಬಳಕೆದಾರರು ವ್ಯಾಪಕವಾಗಿ ಪ್ರಶಂಸಿಸಿದರು, ಅವರು ಸೈನಿಕರನ್ನು ತಮ್ಮ ಹೀರೋಗಳು ಎಂದು ಕರೆದರು.
ಸಮವಸ್ತ್ರದಲ್ಲಿರುವ ಈ ಸೈನಿಕರು  ಹಿಮ, ಮಳೆ, ಚಂಡಮಾರುತ ಮತ್ತು ರಕ್ತಸ್ರಾವಗಳನ್ನು ಇನ್ನೂ ಯಾರು ಸಹಿಸಿಕೊಳ್ಳುತ್ತಾರೆ, ದುಷ್ಟರನ್ನು ಕೊಲ್ಲುತ್ತಾರೆ. ಇವರು ಶತ್ರುಗಳೊಂದಿಗೆ ಹೋರಾಡಿ ದೇಶ ರಕ್ಷಿಸಿದಾಗಲೇ ನಾವು ನಿದ್ರಿಸುತ್ತೇವೆ.
ಮೇ 2020ರಿಂದ ಚೀನಾದೊಂದಿಗೆ ನಡೆಯುತ್ತಿರುವ ಮಿಲಿಟರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತವು ಹಿಮಾಲಯದ ಮೇಲ್ಭಾಗದಲ್ಲಿ, ವಿಶೇಷವಾಗಿ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) – ಚೀನಾದೊಂದಿಗಿನ  ಗಡಿಯಲ್ಲಿ – ತನ್ನ ಸೈನ್ಯದ ಉಪಸ್ಥಿತಿಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ಈ ಸಮಸ್ಯೆಗಳನ್ನು ಬಗೆಹರಿಸಲು ಉಭಯ ಪಕ್ಷಗಳ ನಡುವಿನ ಹನ್ನೆರಡನೇ ಸುತ್ತಿನ ಮಾತುಕತೆ ಜನವರಿ 12 ರಂದು ನಡೆಯುವ ನಿರೀಕ್ಷೆಯಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement