ಕೈವ್: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಅವರು ತಮ್ಮ ದೇಶವಾದ ಉಕ್ರೇನ್ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ “ರಕ್ತಸಿಕ್ತ ಯುದ್ಧ”ದಲ್ಲಿ ಉಕ್ರೇನ್ ರಕ್ಷಣೆಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಕೊಳ್ಳುವುದಾಗಿ ಘೋಷಿಸಿದ್ದಾರೆ.
ತಮ್ಮ ಜೊತೆ ಸಹೋದರ ಮತ್ತು ಹಾಲ್ ಆಫ್ ಫೇಮರ್ ವ್ಲಾಡಿಮಿರ್ ಕ್ಲಿಟ್ಸ್ಕೊ ಸಹ ಶಸ್ತ್ರಾಸ್ತ್ರ ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಘೋಷಣೆಯ ನಂತರ ರಷ್ಯಾ ಗುರುವಾರ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ತನ್ನ ಆಕ್ರಮಣವನ್ನು ಪ್ರಾರಂಭಿಸಿತು. ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಿಂದಾಗಿ ಅಂದಾಜು 1,00,000 ಜನರು ಪಲಾಯನ ಮಾಡಿದ್ದಾರೆ. ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
2014 ರಿಂದ ಉಕ್ರೇನ್ನ ರಾಜಧಾನಿ ಕೈವ್ನ ಮೇಯರ್ ಆಗಿರುವ ವಿಟಾಲಿ ಕ್ಲಿಟ್ಸ್ಕೊ ಅವರು ಹೋರಾಡಲು ಸಿದ್ಧ ಎಂದು ಹೇಳಿದರು.
ನನಗೆ ಬೇರೆ ಆಯ್ಕೆ ಇಲ್ಲ, ನಾನು ಅದನ್ನು ಮಾಡಬೇಕಾಗಿದೆ. ನಾನು ಹೋರಾಡುತ್ತೇನೆ,” ತನ್ನ ಬಾಕ್ಸಿಂಗ್ ಹೋರಾಟದ ದಿನಗಳಲ್ಲಿ “ಡಾ ಐರನ್ಫಿಸ್ಟ್” ಎಂದು ಕರೆಸಿಕೊಳ್ಳುತ್ತಿದ್ದ 50 ವರ್ಷ ವಯಸ್ಸಿನ ಬಾಕ್ಸರ್ ಬ್ರಾಡ್ಕಾಸ್ಟರ್ ITV ಯ ಗುಡ್ ಮಾರ್ನಿಂಗ್ ಬ್ರಿಟನ್ಗೆ ತಿಳಿಸಿದರು.
ಕೈವ್ ಅಪಾಯದಲ್ಲಿದೆ ಮತ್ತು ಅದರ ನಾಗರಿಕರಿಗೆ ವಿದ್ಯುತ್, ಅನಿಲ ಮತ್ತು ನೀರಿನ ವಿತರಣೆ ಸೇರಿದಂತೆ ನಿರ್ಣಾಯಕ ಮೂಲಸೌಕರ್ಯವನ್ನು ಬೆಂಬಲಿಸಲು ಪೋಲೀಸ್ ಮತ್ತು ಮಿಲಿಟರಿ ಪಡೆಗಳೊಂದಿಗೆ ಕೆಲಸ ಮಾಡುವುದು ಮುಖ್ಯ ಆದ್ಯತೆಯಾಗಿದೆ ಎಂದು ವಿಟಾಲಿ ಕ್ಲಿಟ್ಸ್ಕೊ ಹೇಳಿದರು.
ಕೈವ್ ಅನ್ನು ಸೈನಿಕರಂತೆ ರಕ್ಷಿಸಲು ನಾಗರಿಕರು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
ನಾನು ಉಕ್ರೇನ್ ಅನ್ನು ನಂಬುತ್ತೇನೆ, ನನ್ನ ದೇಶವನ್ನು ನಾನು ನಂಬುತ್ತೇನೆ ಮತ್ತು ನನ್ನ ಜನರನ್ನು ನಾನು ನಂಬುತ್ತೇನೆ” ಎಂದು ವಿಟಾಲಿ ಕ್ಲಿಟ್ಸ್ಕೊ ಭಾವನಾತ್ಮಕವಾಗಿ ಹೇಳಿದ್ದಾರೆ.
ಮಾಜಿ ಹೆವಿವೇಯ್ಟ್ ಚಾಂಪಿಯನ್ ವ್ಲಾಡಿಮಿರ್ ಕ್ಲಿಟ್ಸ್ಕೊ ಈ ತಿಂಗಳ ಆರಂಭದಲ್ಲಿ ಉಕ್ರೇನ್ನ ಮೀಸಲು ಸೈನ್ಯಕ್ಕೆ ಸೇರ್ಪಡೆಗೊಂಡರು, ತನ್ನ ದೇಶದ ಮೇಲಿನ ಪ್ರೀತಿಯು ಅದನ್ನು ಮಾಡಲು ಅವರಿಗೆ ಒತ್ತಾಯಿಸಿತು ಎಂದು ಹೇಳಿದರು.
ಉಕ್ರೇನಿಯನ್ ಜನರು ಪ್ರಬಲರಾಗಿದ್ದಾರೆ. ಅವರು ಸಾರ್ವಭೌಮತ್ವ ಮತ್ತು ಶಾಂತಿಗಾಗಿ ಹಂಬಲಿಸುವ ಜನರು. ರಷ್ಯಾದ ಜನರನ್ನು ತಮ್ಮ ಸಹೋದರರು ಎಂದು ಪರಿಗಣಿಸುವ ಜನರು, ಅವರು ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುತ್ತರೆ ಎಂದು ಅವರು ಗುರುವಾರ ಲಿಂಕ್ಡ್ಇನ್ನಲ್ಲಿ ಪೋಸ್ಟ್ನಲ್ಲಿ ಬರೆದಿದ್ದಾರೆ.
ಉಕ್ರೇನಿಯನ್ನರು ಮೂಲತಃ ಈ ಯುದ್ಧವನ್ನು ಬಯಸುವುದಿಲ್ಲ ಎಂದು ತಿಳಿದಿದೆ. ಉಕ್ರೇನಿಯನ್ ಜನರು ಪ್ರಜಾಪ್ರಭುತ್ವವನ್ನು ಆರಿಸಿಕೊಂಡಿದ್ದಾರೆ.
ಆದರೆ: ಪ್ರಜಾಪ್ರಭುತ್ವವು ದುರ್ಬಲವಾದ ಆಡಳಿತವಾಗಿದೆ. ಪ್ರಜಾಪ್ರಭುತ್ವವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ; ಅದಕ್ಕೆ ನಾಗರಿಕರ ಇಚ್ಛೆ, ಪ್ರತಿಯೊಬ್ಬರ ಬದ್ಧತೆ ಬೇಕು. ಮೂಲಭೂತವಾಗಿ, ಪ್ರಜಾಪ್ರಭುತ್ವವಾದಿಗಳಿಲ್ಲದೆ ಪ್ರಜಾಪ್ರಭುತ್ವವಿಲ್ಲ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ