ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ವಿರುದ್ಧ ದೆಹಲಿ ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ ಜಾರಿ ನಿರ್ದೇಶನಾಲಯ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಗುರುವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.
ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಇಡಿ ಸೆಪ್ಟೆಂಬರ್ 3, 2019 ರಂದು ಬಂಧಿಸಿತ್ತು, ಆದರೆ ದೆಹಲಿ ಹೈಕೋರ್ಟ್ 2019 ರ ಅಕ್ಟೋಬರ್‌ನಲ್ಲಿ ಅವರಿಗೆ ಜಾಮೀನು ನೀಡಿತು.
ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಸದ್ಯ ಜಾಮೀನಿನ ಮೇಲಿದ್ದಾರೆ.

ಆರಂಭಿಕ ತನಿಖೆಯಲ್ಲಿ, ಐಟಿ ಇಲಾಖೆಯು ಕಾಂಗ್ರೆಸ್ ನಾಯಕನಿಗೆ ಸಂಬಂಧಿಸಿದ ಲೆಕ್ಕವಿಲ್ಲದ ಮತ್ತು ತಪ್ಪಾಗಿ ವರದಿ ಮಾಡಲಾದ ಸಂಪತ್ತನ್ನು ಪತ್ತೆ ಮಾಡಿತ್ತು. ಆದಾಗ್ಯೂ, ಶಿವಕುಮಾರ್ ಈ ಹಿಂದೆ ಆರೋಪಗಳನ್ನು “ಆಧಾರರಹಿತ” ಮತ್ತು “ರಾಜಕೀಯ ಪ್ರೇರಿತ” ಎಂದು ಕರೆದಿದ್ದರು.

ಇಡಿ ಕಾಂಗ್ರೆಸ್ ನಾಯಕನ ಪತ್ನಿ ಮತ್ತು ತಾಯಿಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು, ನಂತರ ಇದನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮೂಲಗಳ ಪ್ರಕಾರ ಇಡಿ ಆರೋಪಪಟ್ಟಿಯಲ್ಲಿ ಶಿವಕುಮಾರ ಅವರ ಪತ್ನಿ ಮತ್ತು ತಾಯಿಯ ಹೆಸರನ್ನು ಉಲ್ಲೇಖಿಸಿಲ್ಲ.
ಇಲಾಖೆಯು 2017 ರಲ್ಲಿ ಅವರ ಬೆಂಗಳೂರಿನ ಆಸ್ತಿಯಿಂದ 2.5 ಕೋಟಿ ಸೇರಿದಂತೆ ಒಟ್ಟು 10 ಕೋಟಿ ರೂ. ವಶಪಡಿಸಿಕೊಂಡಿತ್ತು. ಆಗಸ್ಟ್ 3, 2017 ರಂದು, ಶಿವಕುಮಾರ್ ಅವರ ನಿವಾಸ ಮತ್ತು 44 ಕಾಂಗ್ರೆಸ್ ಗುಜರಾತ್ ಶಾಸಕರು ತಂಗಿದ್ದ ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಐಟಿ ದಾಳಿ ನಡೆಸಿತು. ಆಗ, ಬೆಂಗಳೂರಿನಲ್ಲಿ ತಂಗಿದ್ದ ಗುಜರಾತ್‌ನ ಎಲ್ಲ ಕಾಂಗ್ರೆಸ್ ಶಾಸಕರಿಗೆ ಶಿವಕುಮಾರ್ ಆತಿಥ್ಯದ ಉಸ್ತುವಾರಿ ವಹಿಸಿದ್ದರು.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement