ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ತಿಳಿದು 4 ದಿನ ಚಾಪೆ ಮೇಲೆ ನಾಗರ ಹಾವಿನ ಜೊತೆ ಕಳೆದ ವೃದ್ಧೆ..!

ಬಾಗಲಕೋಟೆ : ಮೃತ ಗಂಡ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಮನೆಯಲ್ಲಿ 4 ದಿನಗಳಿಂದ ಹಾವಿನ ಜೊತೆ ಅಜ್ಜಿ ಇದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ ನಂಬಿಕೆಗೆ ಜನರೇ ಬೆರಗಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿದೆ. ಆದರೆ ಹಾವನ್ನು ಹೊರಗೆ ಹಾಕಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಹೋಗಲಿಲ್ಲವಂತೆ. ಇದರಿಂದ ಅಜ್ಜಿ ಆತಂಕಗೊಳ್ಳುವ ಬದಲು ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿದ್ದಾರೆ. ಅಜ್ಜಿಯ ಪತಿ ಮೋನೇಶ್ ಎನ್ನುವವರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರೇ ಈಗ ಹಾವಿನ ರೂಪದಲ್ಲಿ ತನ್ನ ಬಳಿ ಬಂದಿದ್ದಾರೆ. ಹೀಗಾಗಿ ಅದಕ್ಕೆ ಯಾರೂ ತೊಂದರೆ ಮಾಡಬಾರದು ಹಾಗೂ ಹಿಡಿಯಬಾರದು ಎಂದು ಅಜ್ಜಿ ಕೇಳಿ ಕೊಂಡಿದ್ದಾರೆ. ಅಲ್ಲದೆ ಅದನ್ನು ಜೋಪಾನ ಮಾಡಿದ್ದಾರೆ.
ಈ ನಾಗರ ಹಾವನ್ನು ಅಜ್ಜಿ ನಾಲ್ಕು ದಿನ ಮನೆಯಲ್ಲಿ ಚಾಪೆಯ ಮೇಲೆ ಇರಿಸಿದ್ದರು. ಅಜ್ಜಿ ಮನೆಯಲ್ಲಿ ಹಾವು ಇದೆ ಎಂದು ತಿಳಿದು ಅನೇಕರು ನೋಡಲು ಬರಲಾರಂಭಿಸಿದ್ದಾರೆ. ಆದರೆ ನಾಲ್ಕು ದಿನಗಳಿಂದ ಹಾವು ಯಾವುದೇ ಆಹಾರವಿಲ್ಲದೆ ಬಳಲಿತ್ತಂತೆ. ಈಗ ಅದು ಕಣ್ಮರೆಯಾಗಿದೆ ಎಂದು ಹೇಳಲಾಗಿದೆ. ಆದರೆ ಅಜ್ಜಿಯ ಅಚಲ ನಂಬಿಕೆಗೆ ಎಲ್ಲರೂ ಬೆಚ್ಚಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ನಾಲ್ಕು ದಿನಗಳಿಂದ ಆ ಹಾವಿಗೆ ಊಟ ಹಾಲು ಏನು ಇಲ್ಲದೆ ಹಾವು ಅಜ್ಜಿ ಮನೆಯಲ್ಲಿಯೇ ಅಸ್ವಸ್ಥಗೊಂಡಿದೆ. ಮೊದಲ ದಿನ ಹಾವನ್ನು ಕಂಡಾಗ ಶಾರವ್ವ, ನನ್ನನ್ನು ಕಚ್ಚಿ ಸಾಯುವಂತೆ ಮಾಡು ಎಂದು ಕೇಳಿದೆ. ಆದರೆ ಹಾವು ನನಗೆ ಏನನ್ನು ಮಾಡಿಲ್ಲ ಎನ್ನುತ್ತಾರೆ. ಹಾವು ಇದುವರೆಗೂ ಏನೂ ಮಾಡಿಲ್ಲ ಎಂದು ಅಜ್ಜಿ ಹೇಳಿದ್ದಾರೆ. ಒಟ್ಟಿನಲ್ಲಿ ವೃದ್ಧೆಯ ಈ ವಿಚಿತ್ರ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement