ಸಬರಕಾಂತ (ಗುಜರಾತ್): ಗುಜರಾತಿನ ಸಬರಕಾಂತ ಜಿಲ್ಲೆಯಿಂದ ಮಾನವೀಯತೆಯೇ ತಲೆತಗ್ಗಿಸುವ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಯಾರೋ ಒಬ್ಬ ರೈತನ ಹೊಲದಲ್ಲಿ ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಿದ್ದರು. ಹೊಲವನ್ನು ತಲುಪಿದ ರೈತನು ಮಗುವಿನ ಕೈಯನ್ನು ನೋಡಿದ ನಂತರ ಆತ ಆ ಜಾಗವನ್ನು ಅಗೆದು ನೋಡಿದಾಗ ಅಲ್ಲಿದ್ದ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಗುರುವಾರ ಬೆಳಿಗ್ಗೆ ಜಿಲ್ಲೆಯ ಗಂಭೋಯಿ ಗ್ರಾಮದ ಹೊಲವೊಂದರಲ್ಲಿ ಮಗುವನ್ನು ಜೀವಂತ ಸಮಾಧಿ ಮಾಡಿದ ಪ್ರಕರಣದ ಕುರಿತು ಸಬರಕಾಂತ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಳಿಗ್ಗೆ ಹೊಲಕ್ಕೆ ಬಂದಾಗ ರೈತರೊಬ್ಬರು ಶಿಶುವನ್ನು ಗಮನಿಸಿದ್ದಾರೆ. ಮಣ್ಣಿನ ಹೊರಗೆ ಒಂದು ಸಣ್ಣ ತೋಳನ್ನು ನೋಡಿದ ಅವರು ಜೀವಂತ ಶಿಶುವನ್ನು ಹುಡುಕಲು ಇತರರ ಸಹಾಯದಿಂದ ಆ ಜಾಗವನ್ನು ಅಗೆದರು. ನಂತರ ಅವರು ಮಗುವನ್ನು ಹೊರ ತೆಗೆದಾಗ ಅವರು ಜೀವಂತವಾಗಿರುವುದು ಗೊತ್ತಾಗಿ ಹಿಮತ್ನಗರ ಸಿವಿಲ್ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಭೋಯ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿ.ಎಫ್. ಠಾಕೋರ್ ಅವರು, ಹಿತೇಂದ್ರ ಸಿನ್ಹ ಅವರ ಒಡೆತನದ ಜಮೀನಿನಲ್ಲಿ ಶಿಶುವನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ನಮಗೆ ಮಾಹಿತಿ ಬಂದಿದೆ. ಹಿತೇಂದ್ರ ಸಿನ್ಹ ಅವರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಹಿತೇಂದ್ರಸಿಂಹ ಮತ್ತು ಇತರ ಸ್ಥಳೀಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಮತ್ತು ತನಿಖೆ ಆರಂಭಿಸಿದ್ದಾರೆ.
ಪೋಷಕರು ಅಥವಾ ತಾಯಿಯನ್ನು ಗುರುತಿಸಿದ ನಂತರ ಅಧಿಕೃತ ದೂರು ದಾಖಲಿಸಲಾಗುವುದು ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.
ರೈತ ಹಿತೇಂದ್ರ ಸಿನ್ಹ ಮಾಧ್ಯಮಗಳ ಜೊತೆ ಮಾತನಾಡಿ, ಗುರುವಾರ ಬೆಳಿಗ್ಗೆ ನಾನು ಜಮೀನನ್ನು ಪರಿಶೀಲಿಸುತ್ತಿದ್ದಾಗ, ಮಗುವಿನ ತೋಳು ಕಂಡಿತು, ಆದ್ದರಿಂದ ನಾನು ನನ್ನ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ವಿತರಣಾ ಕಂಪನಿಯ ಕಚೇರಿಯ ಉದ್ಯೋಗಿಗಳ ಸಹಾಯ ಕೇಳಿದೆ. ಅವರೆಲ್ಲರೂ ಧಾವಿಸಿ ಅವರಲ್ಲಿ ಒಬ್ಬರು ಮಗುವನ್ನು ರಕ್ಷಿಸಿದರು. ಹಳ್ಳವು ಆಳವಾಗಿರಲಿಲ್ಲ ಮತ್ತು ಮಗು ಜೀವಂತವಾಗಿದೆ ಎಂದರೆ ಯಾರಾದರೂ ಅದನ್ನು ಇಂದು ಮುಂಜಾನೆ ಹೂಳಿರಬೇಕು ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ