ಇಟ್‌ ಹ್ಯಾಪನ್ಸ್‌ ಓನ್ಲಿ ಇನ್‌ ಇಂಡಿಯಾ..: ಸಚಿವರು, ಅವರ ಪರಿವಾರದ ವಾಹನಗಳು ಹಾದು ಹೋಗುವವರೆಗೆ ಆಂಬ್ಯುಲೆನ್ಸ್ ಅನ್ನೇ ತಡೆದು ನಿಲ್ಲಿಸಿದ ಪೊಲೀಸರು…! ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ವಿವಿಐಪಿ ಸಂಸ್ಕೃತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಚಿವರು ಹಾಗೂ ಅವರ ಪರಿವಾರದ ಕಾರುಗಳ ಗುಂಪು ರಸ್ತೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್ ಅನ್ನು ಪೊಲೀಸರು ತಡೆಹಿಡಿದ ಆಘಾತಕಾರಿ ಹಾಗೂ ವಿಲಕ್ಷಣ ಘಟನೆಯ ಮೊಬೈಲ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
ಶುಕ್ರವಾರ, ಆಗಸ್ಟ್ 5 ರಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು ತಂಜಾವೂರು ಜಿಲ್ಲೆಯ ತಿರುವಿಡೈಮರುತ್ತೂರು ತಾಲೂಕಿನ ಕೋಲಿಡಂ ನದಿಯ ದಡದಲ್ಲಿ ಪ್ರವಾಹ ತಡೆ ಕಾಮಗಾರಿ ಪರಿಶೀಲಿಸಲು ಹೋಗುತ್ತಿದ್ದಾಗಿನ ಈ ಘಟನೆ ವೀಡಿಯೊ ವೈರಲ್ ಆಗಿದೆ.

ಅನೈಕರೈ ಸೇತುವೆಯ ಒಂದು ತುದಿಯಲ್ಲಿ ಸಚಿವರ ಬೆಂಗಾವಲು ಪಡೆ ಸೇತುವೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್‌ ಕಾಯಬೇಕಾಯಿತು. ಸಚಿವರು ಹಾಗೂ ಅವರ ಪರಿವಾರದ ಇಪ್ಪತ್ತೈದು ಕಾರುಗಳು ಹೋಗುವ ವರೆಗೆ ಆಂಬುಲೆನ್ಸ್‌ ಅನ್ನು ತಡೆ ಹಿಡಿಯಲಾಗಿತ್ತು ಎಂದು ಹೇಳಲಾಗಿದೆ.
ಸಚಿವರ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಅನೈಕರೈ ಸೇತುವೆಯ ಇನ್ನೊಂದು ತುದಿಯಲ್ಲಿ ಬಂದ ತಕ್ಷಣದಿಂದ ಸಚಿವರ ಕಾರು ಮತ್ತು ಅವರ ಜೊತೆಗಿನ ವಾಹನಗಳು ಹಾದುಹೋಗುವವರೆಗೆ ಸೇತುವೆಯ ಮೂಲಕ ಆಂಬುಲೆನ್ಸ್‌ಗೆ ಹಾದುಹೋಗಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ವೀಡಿಯೊದಲ್ಲಿ ಸಚಿವರು ಹಾಗೂ ಅವರ ಪರಿವಾರದ ವಾಹನಗಳು ಹಾದು ಹೋಗುವ ವರೆಗೂ ಅಲ್ಲಿದ್ದ ಪೊಲೀಸ್‌ ಅಧಿಕಾರಿ ತಡೆದಿರುವುದು ಹಾಗೂ ಸಚಿವರು ಹಾದು ಹೋಗುವಾಗ ಅವರಿಗೆ ಸೆಲ್ಯೂಟ್‌ ಹೊಡೆಯುತ್ತಿರುವುದನ್ನು ನೋಡಬಹುದು.
ಪ್ರತಿಪಕ್ಷ ಎಐಎಡಿಎಂಕೆಯ ಪದಾಧಿಕಾರಿಗಳು ಈ ವಿಡಿಯೋವನ್ನು ಉಲ್ಲೇಖಿಸಿ ಆಡಳಿತಾರೂಢ ಡಿಎಂಕೆಯನ್ನು ಟೀಕಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement