ವಿಷಕಾರಿ ರಾಸಾಯನಿಕ ಬಳಸುತ್ತಿದ್ದಾರೆಂದು ಕುರಿತು ಬಿಜೆಪಿ ಸಂಸದರ ಆಕ್ರೋಶದ ನಂತರ ಯಮುನಾ ನೀರಿನಲ್ಲಿ ಸ್ನಾನ ಮಾಡಿ ತೋರಿಸಿದ ದೆಹಲಿ ಜಲ ಮಂಡಳಿ ಅಧಿಕಾರಿ| ವೀಕ್ಷಿಸಿ

ನವದೆಹಲಿ: ಛತ್ ಹಬ್ಬಕ್ಕೆ ಮುನ್ನ ಯಮುನಾ ನದಿ ನೊರೆ ತೆಗೆಯಲು ವಿಷಕಾರಿ ವಸ್ತುವನ್ನು ಬಳಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಛೀಮಾರಿ ಹಾಕಿದ ಕೆಲವೇ ದಿನಗಳಲ್ಲಿ, ದೆಹಲಿ ಜಲ ಮಂಡಳಿಯ ಗುಣಮಟ್ಟ ನಿಯಂತ್ರಣ ನಿರ್ದೇಶಕ ಸಂಜಯ್ ಶರ್ಮಾ ಅವರು ನದಿಯಲ್ಲಿ ಸ್ನಾನ ಮಾಡುವ ಮೂಲಕ ಇದು ವಿಷಕಾರಿಯಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ. ಡಿಜೆಬಿ ಅಧಿಕಾರಿಯು ಪಾತ್ರೆಯಲ್ಲಿ ಶೇಖರಿಸಲಾದ ಯಮುನಾ ನದಿಯ ನೀರಿನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು.
ಬಿಜೆಪಿ ನಾಯಕರಾದ ಪರ್ವೇಶ್ ವರ್ಮಾ ಮತ್ತು ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಯಮುನಾ ನದಿ ನೀರು ಮಲೀನಗೊಳಿಸುವ ವಸ್ತುವನ್ನು ಸಿಂಪಡಿಸಲಾಗಿದೆ ಎಂದು ಆರೋಪಿಸಿ ಡಿಜೆಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಶರ್ಮಾ ಈ ಕ್ರಮ ಕೈಗೊಂಡಿದ್ದಾರೆ.

ವೀಡಿಯೊವನ್ನು ನಂತರ ದೆಹಲಿ ಜಲ ಬೋರ್ಡ್‌ ಉಪಾಧ್ಯಕ್ಷ ಹಾಗೂ ಎಎಪಿ ಶಾಸಕ ಸೌರಭ್ ಭಾರದ್ವಾಜ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಪರ್ವೇಶ್ ವರ್ಮಾ ಸಂಜಯ್ ಶರ್ಮಾ ಅವರೊಂದಿಗೆ ಡಿಫೋಮರ್ ಅನ್ನು ಸಿಂಪಡಿಸಿದ್ದಕ್ಕಾಗಿ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಅವರು “ವಿಷಕಾರಿ” ಎಂದು ಅದನ್ನು ಲೇಬಲ್ ಮಾಡಿದ್ದಾರೆ. ಅವರು ಶರ್ಮಾಗೆ ನದಿಯಲ್ಲಿ ಸ್ನಾನ ಮಾಡುವಂತೆ ಸವಾಲು ಹಾಕಿದರು.
ಶರ್ಮಾ ಅವರು ಶುಕ್ರವಾರ ಕಾಳಿಂದಿ ಕುಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶರ್ಮಾ ಅವರ ದೂರಿನ ಪ್ರಕಾರ, ವರ್ಮಾ ಅವರು “ತುಂಬಾ ಅಸಭ್ಯ ಭಾಷೆ ಬಳಸಿದ್ದಾರೆ ಮತ್ತು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಾನು ಡಿಜೆಬಿಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಯಮುನಾ ನದಿಯ ನೀರಿಗೆ ವಿಷ ಬೆರೆಸುತ್ತಿದ್ದೇವೆ ಎಂಬ ಸುಳ್ಳು ಪ್ರಚಾರವನ್ನೂ ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ರಾಸಾಯನಿಕವನ್ನು ಸಿಂಪಡಿಸುವ ಬಗ್ಗೆ ಡಿಜೆಬಿಯ ನಿಲುವನ್ನು ಸಮರ್ಥಿಸಿಕೊಂಡ ಶರ್ಮಾ ಅವರು ಇದು ವಿಷಕಾರಿಯಲ್ಲ ಎಂದು ಸಮರ್ಥಿಸಿಕೊಂಡರು. ಇದು ಆಹಾರ ದರ್ಜೆಯ ರಾಸಾಯನಿಕವಾಗಿದ್ದು ಇದನ್ನು ಸೌಂದರ್ಯವರ್ಧಕಗಳಲ್ಲಿಯೂ ಬಳಸಲಾಗುತ್ತದೆ ಎಂದು ಅವರು ಹೇಳಿದರು. “ಭಕ್ತರು ಯಾವುದೇ ಭಯವಿಲ್ಲದೆ ನದಿಯಲ್ಲಿ ಸ್ನಾನ ಮಾಡಲು ನಾನು ಸ್ವಾಗತಿಸುತ್ತೇನೆ” ಎಂದು ಶರ್ಮಾ ಸ್ನಾನದ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಛತ್ ಪೂಜೆಗೂ ಮುನ್ನ ಕಲುಷಿತ ಯಮುನಾ ನೀರಿನ ವಿಚಾರದಲ್ಲಿ ಎಎಪಿ ಮತ್ತು ಬಿಜೆಪಿ ಪರಸ್ಪರ ಟಾರ್ಗೆಟ್ ಮಾಡಿಕೊಂಡಿವೆ. ಏತನ್ಮಧ್ಯೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಕಾರ ಛತ್ ಆಚರಣೆಯ ಭಾಗವಾಗಿ ಯಾವುದೇ ಅರ್ಪಣೆಗಳನ್ನು ನದಿಯಲ್ಲಿ ಬಿಡಲು ಅನುಮತಿಸಲಾಗುವುದಿಲ್ಲ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement