ಇಲಿ ಕೊಂದವನ ವಿರುದ್ಧ ಎಫ್‌ಐಆರ್ : ನ್ಯಾಯಾಲಯಕ್ಕೆ 30 ಪುಟಗಳ ಚಾರ್ಜ್‌ ಶೀಟ್ ಸಲ್ಲಿಕೆ…!

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದ ‘ಇಲಿ ಹತ್ಯೆ’ ಪ್ರಕರಣವೊಂದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಇಲಿಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ 30 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಬರೇಲಿಯ ಐವಿಆರ್‌ಐ(IVRI)ನಲ್ಲಿ ಮರಣೋತ್ತರ ಪರೀಕ್ಷೆ ಮತ್ತು ಪ್ರಕರಣದ ಆರೋಪಪಟ್ಟಿಯು ದೇಶದ ಮೊದಲ ಈ ರೀತಿಯ ವಿಚಾರಣೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬದೌನ್‌ನ ಸದರ್ ಕೊತ್ವಾಲಿಗೆ ಸಂಬಂಧಿಸಿದ ಪ್ರಕರಣವು ಕಳೆದ ನವೆಂಬರ್ 25 ರಂದು ವೃತ್ತಿಯಲ್ಲಿ ಕುಂಬಾರಿಕೆ ಮಾಡುವ ಮೊಹಲ್ಲಾ ಪನ್ವಾಡಿ ಚೌಕ್‌ನ ನಿವಾಸಿ ಮನೋಜಕುಮಾರ ಅವರು ಹಗ್ಗದಿಂದ ಬಿಗಿದು ಕಲ್ಲಿಗೆ ಕಟ್ಟಿದ ಇಲಿಯನ್ನು ಚರಂಡಿಗೆ ಎಸೆದಿದ್ದರು. ಈ ವೇಳೆ ಸಾಗುತ್ತಿದ್ದ ಪ್ರಾಣಿ ಪ್ರೇಮಿ ಹಾಗೂ ಪಿಎಫ್‌ಎ ಜಿಲ್ಲಾಧ್ಯಕ್ಷ ವಿಜೇಂದ್ರ ಶರ್ಮಾ ಅವರು ಚರಂಡಿಗೆ ಹಾರಿ ಇಲಿಯನ್ನು ಹೊರತೆಗೆದರೂ ಅದನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಇಲಿಯ ಜೀವ ಉಳಿಸಲು ವಿಫಲವಾದ ನಂತರ, ವಿಜೇಂದ್ರ ಶರ್ಮಾ ಆರೋಪಿಗಳ ವಿರುದ್ಧ ಸದರ್ ಕೊತ್ವಾಲಿಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತ ಇಟ್ಟಿಗೆಯೊಂದಕ್ಕೆ ಇಲಿಯನ್ನು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಲ್ಲುವ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಸತ್ತ ಇಲಿಯನ್ನು ಇಟ್ಟಿಗೆಯಲ್ಲಿ ಕಟ್ಟಿದ್ದ ದಾರದ ಸಮೇತ ಆರೋಪಿ ವಿಡಿಯೋದಲ್ಲಿ ತೋರಿಸಿದ್ದ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಸತ್ತ ಇಲಿಯ ಮರಣೋತ್ತರ ಪರೀಕ್ಷೆಗೆ ಬಂದಾಗ, ಜಿಲ್ಲಾ ಪಶುವೈದ್ಯಾಧಿಕಾರಿ ಬದೌನ್ ಜಿಲ್ಲೆಯಲ್ಲಿ ಇಲಿಯ ಮೃತ ದೇಹಕ್ಕೆ ಮರಣೋತ್ತರ ಪರೀಕ್ಷೆಯ ಸೌಲಭ್ಯವಿಲ್ಲದ ಕಾರಣ ಅದನ್ನು ನಡೆಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿ ಶವವನ್ನು ಬರೇಲಿಯ IVRI ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದರು. ಪೊಲೀಸರು ಈ ವಿಷಯದಲ್ಲಿ ಆಸಕ್ತಿ ತೋರದಿದ್ದರೂ, ವಿಜೇಂದ್ರ ಮರಣೋತ್ತರ ಪರೀಕ್ಷೆಯನ್ನು ಮಾಡಬೇಕು ಎಂದು ಹಠ ಹಿಡಿದಿದ್ದರು. ಇಲಿಯ ಮರಣೋತ್ತರ ಪರೀಕ್ಷೆ, ಅದರ ಕಳೆಬರದ ಸಾಗಾಟ, ಪ್ರಯೋಗಾಲಯದ ವೆಚ್ಚ ಸೇರಿದಂತೆ ಎಲ್ಲವನ್ನೂ ತಾವೇ ಭರಿಸುವುದಾಗಿ ದೂರುದಾರ ಶರ್ಮಾ ಅವರು ಹೇಳಿದ್ದಾರೆ.
ನಂತರ ಬರೇಲಿಯ ಐವಿಆರ್‌ಐ(IVRI)ನಲ್ಲಿ ಇಲಿಯ ಮರಣೋತ್ತರ ಪರೀಕ್ಷೆಗೆ ಉಲ್ಲೇಖಿಸಿದ ನಂತರ, ವಿಜೇಂದ್ರ ಅವರು ಪೊಲೀಸರೊಂದಿಗೆ ಇಲಿಯ ದೇಹವನ್ನು ಬರೇಲಿಯ IVRI ಗೆ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋದರು, ಅಲ್ಲಿ ಇಲಿಯ ಮರಣೋತ್ತರ ಪರೀಕ್ಷೆಯನ್ನು ಮಾಡಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯು ಇಲಿ ಸಾವಿಗೆ ಉಸಿರುಗಟ್ಟುವಿಕೆ ಕಾರಣ ಎಂದು ಉಲ್ಲೇಖಿಸಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದರಾದರೂ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತ್ತು.

ಇಂದಿನ ಪ್ರಮುಖ ಸುದ್ದಿ :-   ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿ-ವಾಚಕಿ ಗೀತಾಂಜಲಿ ಅಯ್ಯರ್ ನಿಧನ

ಅರಣ್ಯ ಇಲಾಖೆಯ ಡಿಎಫ್‌ಒ ಅಶೋಕಕುಮಾರ ಸಿಂಗ್ ಮಾತನಾಡಿ, ಇಲಿಯನ್ನು ಅರಣ್ಯ ಇಲಾಖೆ ಕಾಯ್ದೆಯಲ್ಲಿ ಸೆಕ್ಷನ್ 5 ರ ಅಡಿಯಲ್ಲಿ ವಾರ್ಮಿಂಗ್ ವಿಭಾಗದಲ್ಲಿ ಇರಿಸಲಾಗಿದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತು ಆದ್ದರಿಂದ ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇಷ್ಟೆಲ್ಲ ವಾದ-ಪ್ರತಿವಾದಗಳ ನಡುವೆ ಪೊಲೀಸರು ಮನೋಜ ಅವರನ್ನು ಆರೋಪಿ ಎಂದು ಪರಿಗಣಿಸಿ 30 ಪುಟಗಳ ಚಾರ್ಜ್ ಶೀಟ್ ಅನ್ನು ಕೆಲ ದಿನಗಳ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತನಿಖೆಯ ಸಮಯದಲ್ಲಿ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಪ್ರತಿ ಲಿಂಕ್ ಅನ್ನು ಸೇರಿಸಿದ್ದಾರೆ ಎಂದು ಸಿಒ ಸಿಟಿ ಅಲೋಕ್ ಮಿಶ್ರಾ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ, ಮಾಧ್ಯಮಗಳಲ್ಲಿ ಬಿಡುಗಡೆಯಾದ ವೀಡಿಯೋಗಳು, ಸಂಬಂಧಿಸಿದ ವಿವಿಧ ಇಲಾಖೆಗಳ ತಜ್ಞರ ಅಭಿಪ್ರಾಯವನ್ನು ಸೇರಿಸಿ ಈ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ.
ಹಿರಿಯ ವಕೀಲ ರಾಜೀವಕುಮಾರ ಶರ್ಮಾ ಪ್ರಕಾರ, ಪ್ರಾಣಿ ಹಿಂಸೆ ಕಾಯ್ದೆ ಪ್ರಕರಣದಲ್ಲಿ 10 ರಿಂದ 20,000 ರೂ.ವರೆಗೆ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಸೆಕ್ಷನ್ 429 ರ ಅಡಿಯಲ್ಲಿ, ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ಎರಡಕ್ಕೂ ಅವಕಾಶವಿದೆ. ದೇಶದಲ್ಲಿ ಈ ಹಿಂದೆ ಇಂತಹ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಪ್ರಾಣಿ ಹಿಂಸೆಯ ಪ್ರಕರಣಗಳು ದಾಖಲಾಗುತ್ತವೆ ಆದರೆ ಇಲಿಗಳಿಗೆ ಸಂಬಂಧಿಸಿದ ಪ್ರಕರಣ ಮತ್ತು ಮರಣೋತ್ತರ ಪರೀಕ್ಷೆ ಮಾಡಿದ್ದು ಈ ಮೊದಲು ಬೆಳಕಿಗೆ ಬಂದಿಲ್ಲ. ಹೀಗಿರುವಾಗ ಮನೋಜ ಅವರಿಗೆ ನ್ಯಾಯಾಲಯ ಯಾವ ತೀರ್ಮಾ ಕೈಗೊಳ್ಳುತ್ತದೆ ಎಂಬುದು ಕೂಡ ನಿದರ್ಶನವಾಗುತ್ತದೆ.

ಇಂದಿನ ಪ್ರಮುಖ ಸುದ್ದಿ :-   ಕೇರಳಕ್ಕೆ ಆಗಮಿಸಿದ ನೈಋತ್ಯ ಮಾನ್ಸೂನ್....ಆದರೆ

ಮನೋಜ ಅವರ ತಂದೆ ಮಥುರಾಪ್ರಸಾದ, “ಇಲಿ ಮತ್ತು ಕಾಗೆಯನ್ನು ಕೊಲ್ಲುವುದು ತಪ್ಪಲ್ಲ. ಇವು ಹಾನಿಕಾರಕ ಜೀವಿಗಳು. ಇಲಿಗಳು ತನ್ನ ಕುಟುಂಬದವರು ಮಾಡಿದ ಕಚ್ಚಾ ಮಡಿಕೆಗಳನ್ನು ಕಚ್ಚಿ ಮಣ್ಣಿನ ರಾಶಿಯಾಗಿ ಪರಿವರ್ತಿಸುತ್ತವೆ, ಇದು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಹಳಷ್ಟು ನೋವನ್ನು ಉಂಟುಮಾಡುತ್ತದೆ. ಈ ಪ್ರಕರಣದಲ್ಲಿ ನನ್ನ ಮಗನಿಗೆ ಶಿಕ್ಷೆಯಾದರೆ ಕೋಳಿ, ಮೇಕೆ, ಮೀನುಗಳನ್ನು ಕೊಲ್ಲುವವರ ಮೇಲೂ ಎಲ್ಲಾ ಕ್ರಮ ಕೈಗೊಳ್ಳಬೇಕು. ಹಾಗೂ ಇಲಿ ವಿಷ ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಾಣಿ ಪ್ರೇಮಿ ವಿಜೇಂದ್ರ ಶರ್ಮಾ ಅವರು, ಇಲಿ ನಾಲ್ಕು ಕಾಲುಗಳು ಮತ್ತು ಬಾಲ ಹೊಂದಿರುವ ಜೀವಿಯಾಗಿದೆ. ನಾವು ಇಲಿಯನ್ನು ಕೊಂದಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿಲ್ಲ, ಆದರೆ ಅದರ ಬಗ್ಗೆ ಕ್ರೂರವಾಗಿ ವರ್ತಿಸಿದ್ದಕ್ಕಾಗಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement