ಸಿದ್ದಾಪುರ: ಹೊಳೆಯ ಗುಂಡಿಗೆ ಬಿದ್ದು ಇಬ್ಬರು ಸಾವು

ಸಿದ್ದಾಪುರ: ಜಮೀನಿನ ಪಕ್ಕದಲ್ಲಿರುವ ಹೊಳೆಯ ಗುಂಡಿಯ ಬದಿಯಲ್ಲಿನ ಗಿಡಗಂಟಿಗಳನ್ನು ಸವರುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸಮೀಪದ ಇರಾಸೆಯಲ್ಲಿ ಶನಿವಾರ ಸಂಜೆ ನಡೆದ ವರದಿಯಾಗಿದೆ.
ಮೃತರನ್ನು ಹಾರ್ಸಿಕಟ್ಟಾ ಕಂಚಿಮನೆಯ ದೇವಾನಂದ ಧರ್ಮ ಮಡಿವಾಳ(೩೫) ಹಾಗೂ ಮಾಬ್ಲೇಶ್ವರ ಮಂಜ ಮಡಿವಾಳ(೪೮) ಎಂದು ಗುರುತಿಸಲಾಗಿದೆ. ಇರಾಸೆಯ ಮಂಜುನಾಥ ನಾಯ್ಕ ಅವರ ಜಮೀನಿನ ಕೆಲಸ ಮಾಡುತ್ತಿದ್ದಾಗ ದೇವಾನಂದ ಎನ್ನುವವರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋದ ಮಾಬ್ಲೇಶ್ವರ ಎನ್ನುವವರು ಸಹ ನೀರಿಗೆ ಹಾರಿದ್ದಾರೆ. ಅದು ಸಾಧ್ಯವಾಗದೇ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement