ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಸಿಖ್ ವ್ಯಾಪಾರಿ ಹತ್ಯೆ ಮಾಡಿದ ಬೈಕಿನಲ್ಲಿ ಬಂದ ಅಪರಿಚಿತರು : ವರದಿ

ಪೇಶಾವರ: ಪೇಶಾವರದ ಕಕ್ಷಾಲ್ ಪ್ರದೇಶದಲ್ಲಿ ಮನಮೋಹನ್ ಸಿಂಗ್ ಎಂದು ಗುರುತಿಸಲಾದ ಸಿಖ್ ವ್ಯಾಪಾರಿಯನ್ನು ಅಪರಿಚಿತ ಮೋಟಾರು ಸೈಕಲ್ ಸವಾರರು ಶನಿವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮೂಲದ ಇಂಗ್ಲಿಷ್ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅಬ್ದುಲ್ ಸಲಾಮ್ ಖಾಲಿದ್ ಪ್ರಕಾರ, ಈ ಘಟನೆಯು ಶನಿವಾರ ರಾತ್ರಿ 8 ಗಂಟೆಗೆ ಸಂಭವಿಸಿದ್ದು, ಆ ಸಮಯದಲ್ಲಿ ಗುಲ್ದಾರ ಚೌಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಿಂಗ್ ಅವರನ್ನು ಮೋಟಾರ್‌ ಸೈಕ್ಲಿಸ್ಟ್‌ಗಳು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಿದ್ದಾರೆ. ಅಧಿಕಾರಿಗಳು ಬರುವ ಮೊದಲು ಅಪರಾಧಿಗಳು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ದಾಳಿಕೋರರ ಉದ್ದೇಶ ಮತ್ತು ಗುರುತುಗಳ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಘಟನೆಯು ಉದ್ದೇಶಿತ ಹತ್ಯೆಯೇ ಅಥವಾ ಇನ್ನೇನಾದರೂ ಪ್ರಕರಣವೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣಗೊಂಡ ನಂತರವಷ್ಟೇ ಅಂತಿಮವಾಗಿ ಹೆಚ್ಚಿನ ವಿವರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಶುಕ್ರವಾರ ಅದೇ ಪ್ರದೇಶದಲ್ಲಿ ನಡೆದ ಮತ್ತೊಂದು ದುಃಖಕರ ಘಟನೆಯಲ್ಲಿ, ಸಿಖ್ ಅಂಗಡಿಯವನು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗೆ ಗುರಿಯಾಗಿದ್ದ..
ಪೇಶಾವರ ಪೊಲೀಸ್ ವಕ್ತಾರ ಮುಹಮ್ಮದ್ ಆಲಂ ಮಾತನಾಡಿ, ಗುಲ್ದಾರಾ ಚೌಕ್ ಬಳಿ ಸಿಖ್ ಸಮುದಾಯದ ತರ್ಲೋಗ್ ಸಿಂಗ್ ಮೇಲೆ ಹಲ್ಲೆ ನಡೆದಿತ್ತು ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement