ಧೂಮಪಾನ ಮಾಡಿದ್ದಕ್ಕೆ ಶಿಕ್ಷಕರು ಥಳಿಸಿದ ನಂತರ 10 ನೇ ತರಗತಿ ವಿದ್ಯಾರ್ಥಿ ಸಾವು

ಪಾಟ್ನಾ: 15 ವರ್ಷದ ಬಿಹಾರದ ಬಾಲಕ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದುದನ್ನು ಹಿಡಿದ ಶಾಲೆಯ ಶಿಕ್ಷಕರು ಆತನಿಗೆ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ.
ಶನಿವಾರ ಪೂರ್ವ ಚಂಪಾರಣ್‌ನ ಮಧುಬನ್‌ನಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ 10 ನೇ ತರಗತಿ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಲಾಗಿತ್ತು. ಪೂರ್ವ ಚಂಪಾರಣ್ ನಿವಾಸಿ ಬಜರಂಗಿಕುಮಾರ ಎಂದು ಗುರುತಿಸಲಾದ ಬಾಲಕ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ರಿಪೇರಿ ಅಂಗಡಿಯಿಂದ ಮರಳಿ ತರಲು ಮಧುಬನ್ ಪ್ರದೇಶಕ್ಕೆ ಹೋಗಿದ್ದಾನೆ. ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಮನೆಗೆ ವಾಪಸ್ಸಾಗುವಾಗ ಹರ್ದಿಯಾ ಸೇತುವೆಯ ಕೆಳಗೆ ಸ್ನೇಹಿತರ ಜತೆಗೂಡಿ ಸಿಗರೇಟ್ ಸೇದಿದ್ದಾನೆ.
ಖಾಸಗಿ ವಸತಿ ಶಾಲೆಯ ಮಧುಬನ್ ರೈಸಿಂಗ್ ಸ್ಟಾರ್ ಪ್ರಾಥಮಿಕ ಶಾಲೆಯ ಅಧ್ಯಕ್ಷ ವಿಜಯಕುಮಾಯ ಯಾದವ್ ಅವರು ಬಜರಂಗಿ ಧೂಮಪಾನ ಮಾಡುತ್ತಿದ್ದುದನ್ನು ಗಮನಿಸಿದರು. ನಂತರ ಅವರು ಬಾಲಕನ ತಂದೆಯನ್ನು ಕರೆಯಲು ಮುಂದಾದರು ಮತ್ತು ಶಾಲೆಯ ಕಾಂಪೌಂಡ್‌ಗೆ ಬಾಲಕನನ್ನು ಕರೆದೊಯ್ದ ಅವರು ಅಲ್ಲಿ ಇತರ ಶಿಕ್ಷಕರೊಂದಿಗೆ ಸೇರಿ ಅಮಾನುಷವಾಗಿ ಥಳಿಸಿದ್ದಾರೆ. ಶಿಕ್ಷಕರು ತನ್ನ ಮಗನನ್ನು ವಿವಸ್ತ್ರಗೊಳಿಸಿ ಬೆಲ್ಟ್‌ನಿಂದ ಹೊಡೆದಿದ್ದಾರೆ ಎಂದು ಬಜರಂಗಿಯ ತಾಯಿ ಆರೋಪಿಸಿದ್ದಾರೆ.
NDTV ವರದಿಯ ಪ್ರಕಾರ, ಬಜರಂಗಿ ಹೊಡೆತದಿಂದ ಪ್ರಜ್ಞೆ ತಪ್ಪಿದಾಗ, ಆತನನ್ನು ಮಧುಬನದಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು ಆದರೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮುಜಾಫರ್‌ಪುರಕ್ಕೆ ಕಳುಹಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಜರಂಗಿ ಸಾವಿಗೀಡಾಗಿದ್ದಾನೆ. ಬಾಲಕನ ಕುತ್ತಿಗೆ ಮತ್ತು ತೋಳುಗಳಲ್ಲಿ ಆಳವಾದ ಗಾಯದ ಗುರುತುಗಳಿವೆ ಮತ್ತು ಅವನ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆದಾಗ್ಯೂ, ಶಾಲೆಯ ಅಧ್ಯಕ್ಷರು, ಕುಟುಂಬದ ಆರೋಪಗಳನ್ನು ತಳ್ಳಿಹಾಕಿದರು, ಹುಡುಗನನ್ನು ಹೊಡೆದಿಲ್ಲ ಆದರೆ ಧೂಮಪಾನ ಮಾಡುವುದನ್ನು ಹಿಡಿದ ನಂತರ ಆತ ಕುಟುಂಬಕ್ಕೆ ಹೆದರಿ ವಿಷ ಸೇವಿಸಿದ್ದಾನೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಬಜರಂಗಿ ಎರಡು ತಿಂಗಳ ಹಿಂದೆ ಶಾಲೆಯ ಹಾಸ್ಟೆಲ್‌ಗೆ ಪ್ರವೇಶ ಪಡೆದ ಮತ್ತು ಬೇಸಿಗೆ ರಜೆಗಾಗಿ ಮನೆಗೆ ಮರಳಿದ್ದ.
ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶಾಲೆಯನ್ನು ಸೀಲ್‌ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ...ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement