ಏಷ್ಯಾ ಕಪ್ 2023 : ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಪಾಕ್‌ ತಂಡದ ನಾಯಕ ಬಾಬರ್ ಅಜಂ-ಶಾಹೀನ್ ಅಫ್ರಿದಿ ನಡುವೆ ತೀವ್ರ ವಾಗ್ವಾದ: ವರದಿ

2023 ರ ಏಷ್ಯಾ ಕಪ್‌ ನಲ್ಲಿ ಉತ್ತಮ ಆರಂಭ ಹೊರತಾಗಿಯೂ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅದನ್ನು ಮುಂದುವರಿಸಲು ಸಾಧ್ಯವಾಗದೆ ಸೂಪರ್ 4 ಹಂತದಿಂದ ಹೊರಬಿತ್ತು. ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ಬೋಲ್ ನ್ಯೂಸ್‌ ಪ್ರಕಾರ ಈ ಸೋಲು ಪಂದ್ಯದ ನಂತರ, ಇದು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಮತ್ತು ವೇಗಿ ಶಾಹೀನ್ ಶಾ ಅಫ್ರಿದಿ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಹಾಗೂ ಇದು ಡ್ರೆಸ್ಸಿಂಗ್ ರೂಂನಲ್ಲಿ ವಿಭಜನೆಗೆ ಕಾರಣವಾಯಿತು. ODI ವಿಶ್ವಕಪ್‌ಗೆ ಇನ್ನೂ ಒಂದು ತಿಂಗಳಿಗಿಂತ ಕಡಿಮೆ ಅವಧಿ ಇರುವಾಗ ಪಾಕಿಸ್ತಾನ ಕ್ರಿಕೆಟ್ ತಂಡದ ಸಿದ್ಧತೆಗಳು ನಡೆಯುತ್ತಿರಬೇಕಾದರೆ ಈ ಘಟನೆ ಪಾಕಿಸ್ತಾನದ ವಿಶ್ವಕಪ್‌ ಪಯಣಕ್ಕೆ ತೊಂದರೆ ನೀಡಬಹುದು.
ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರು ಗಾಯಗೊಂಡಿದ್ದು ಸಹ ಪಾಕಿಸ್ತಾನ ತಂಡಕ್ಕೆ ಹಿನ್ನಡೆಗೆ ಕಾರಣವಾಯಿತು. ಸೂಪರ್‌ 4ರ ಹಂತದಲ್ಲಿ ಶ್ರೀಲಂಕಾ ವಿರುದ್ಧದ ಉತ್ತಮ ತುರುಸಿನ ಪಂದ್ಯದಲ್ಲಿ ಅದಕ್ಕೆ ವಿಜಯಶಾಲಿಯಾಗಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ವಿರುದ್ಧದ ಸೋಲು ಪಂದ್ಯಾವಳಿಯ ಫೈನಲ್‌ಗೆ ಏರಲು ವಿಫಲವಾದ ಪಾಕಿಸ್ತಾನಕ್ಕೆ ಈ ಪಂದ್ಯಾವಳಿಯು ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ಮುಂಚಿತವಾಗಿ ದೊಡ್ಡ ಪಂದ್ಯಾವಳಿಗಳಲ್ಲಿ ಒಂದಾಗಿತ್ತು.

ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ಬೋಲ್ ನ್ಯೂಸ್‌ ವರದಿಯ ಪ್ರಕಾರ, ತಂಡಕ್ಕೆ ವಿಷಯಗಳನ್ನು ಇನ್ನಷ್ಟು ಹದಗೆಡಿಸುವಂತಹ ವಿದ್ಯಮಾನದಲ್ಲಿ ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಮಧ್ಯೆ ಮಾತಿನ ಚಕಮಕಿ ಸಹ ನಡೆದಿದೆ. ವರದಿಯ ಪ್ರಕಾರ, ಸೋಲಿನ ನಂತರ, ಏಷ್ಯಾ ಕಪ್ 2023 ಅಭಿಯಾನದಲ್ಲಿ ಹಿರಿಯ ಆಟಗಾರರ ಪಾತ್ರವನ್ನು ಬಾಬರ್ ಪ್ರಶ್ನಿಸಿದ್ದಾರೆ. ಆದಾಗ್ಯೂ, ಶಾಹೀನ್ ಅದನ್ನು ಆಕ್ಷೇಪಿಸಿದರು ಮತ್ತು ಅದನ್ನು ಸಾಮಾನ್ಯೀಕರಿಸಬಾರದು ಮತ್ತು ಉತ್ತಮವಾಗಿ ಮಾಡಿದವರನ್ನು ಟೀಕಿಸಬಾರದು ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ನಿಕಟ ಸೋಲಿನ ನಂತರ ಆಟಗಾರರು ಜವಾಬ್ದಾರಿಯುತವಾಗಿ ಆಡಿಲ್ಲ ಎಂದು ಬಾಬರ್ ಹೇಳಿದರು. ಪಾಕಿಸ್ತಾನ ಗೆದ್ದಿದ್ದರೆ ಸಾಂಪ್ರದಾಯಿಕ ಎದುರಾಳಿಯಾದ ಭಾರತದ ವಿರುದ್ಧ ಭಾನುವಾರದ ಫೈನಲ್‌ನಲ್ಲಿ ಆಡಬಹುದಿತ್ತು. ಆದರೆ ಅವರು ಶ್ರೀಲಂಕಾ ವಿರುದ್ಧ ಅಂತಿಮ ಎಸೆತದಲ್ಲಿ ಸೋತೆವು ಎಂದು ಹೇಳಿದ್ದಾರೆ. ಬಾಬರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಹೀನ್, ‘ಕನಿಷ್ಠ ಯಾರು ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಿದರು ಎಂಬುದನ್ನು ಪ್ರಶಂಸಿಸಿ ಎಂದು ಹೇಳಿದರು.ಯಾರು ಚೆನ್ನಾಗಿ ಆಡುತ್ತಿದ್ದಾರೆ ಮತ್ತು ಯಾರು ಆಡುತ್ತಿಲ್ಲ ಎಂಬ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ಬಾಬರ್ ಉತ್ತರಿಸಿದರು. ಯಾವುದೇ ಭೌತಿಕ ಜಗಳ ನಡೆಯದೇ ಇದ್ದರೂ ಆಟಗಾರರು ವಾಗ್ಯುದ್ಧದಲ್ಲಿ ತೊಡಗಿದ್ದರು. ಹಿರಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಇಬ್ಬರನ್ನು ಬೇರ್ಪಡಿಸಿದರು ಎಂದು ಬಹು ವರದಿಗಳು ಹೇಳಿವೆ.

ಇಂದಿನ ಪ್ರಮುಖ ಸುದ್ದಿ :-   ನಾಜಿ ಹೋರಾಟಗಾರನ ಗೌರವಿಸಿದ್ದಕ್ಕೆ ವ್ಯಾಪಕ ಟೀಕೆ ನಂತರ ರಾಜೀನಾಮೆ ನೀಡಿದ ಕೆನಡಾದ ಹೌಸ್ ಆಫ್ ಕಾಮನ್ಸ್‌ ಸ್ಪೀಕರ್

ಬಾಬರ್ ಸೋತ ನಂತರ ಪತ್ರಿಕಾಗೋಷ್ಠಿಗೆ ಹೋಗಿದ್ದರು ಮತ್ತು ಹೋಟೆಲ್‌ಗೆ ಹೋಗುವಾಗ ಯಾರೊಂದಿಗೂ ಮಾತನಾಡಲಿಲ್ಲ ಎಂದು ವರದಿ ಹೇಳಿದೆ.
ಕುಸಾಲ್ ಮೆಂಡಿಸ್ ಅವರ 91 ಮತ್ತು ಚರಿತ್ ಅಸಲಂಕಾ ಅವರ ಅಜೇಯ 49 ರನ್‌ಗಳ ನೆರವಿನಿಂದ ಶ್ರೀಲಂಕಾ ಏಷ್ಯಾಕಪ್‌ನ ಕೊನೆಯ ಎಸೆತದ ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ ಭಾರತದೊಂದಿಗೆ ಅಂತಿಮ ಹಣಾಹಣಿ ನಡೆಸಲು ಫೈನಲ್‌ ಪ್ರವೇಶಿಸಿತು. ಕೊಲಂಬೊದಲ್ಲಿ ನಡೆದ 42 ಓವರ್-ಎ-ಸೈಡ್ ಸ್ಪರ್ಧೆಯಲ್ಲಿ DLS ಪರಿಷ್ಕೃತ 252 ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಅಂತಿಮ ಓವರ್‌ ನಲ್ಲಿ ಎಂಟು ರನ್ ಗಳಿಸಿತು ಮತ್ತು ಕೊನೆಯ ಎಸೆತದಲ್ಲಿ ಅಸಲಂಕಾ ಅವರು ಗೆಲುವಿನ ರನ್‌ ಬಾರಿಸಿದರು.
ಈ ಸೋಲು ಪಾಕಿಸ್ತಾನ ತಂಡದ ಆಟಗಾರರಿಗೆ ಅದರಲ್ಲೂ ವಿಶೇಷವಾಗಿ ಅವರ ನಾಯಕ ಬಾಬರ್ ಆಜಮ್‌ಗೆ ನೋವುಂಟು ಮಾಡಿದೆ. 2023 ರ ಏಷ್ಯಾಕಪ್‌ನಿಂದ ಪಾಕಿಸ್ತಾನ ನಿರ್ಗಮಿಸಿದ ನಂತರ ಬಾಬರ್‌ಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ತಂಡದ ನಾಯಕನ ತಂದೆ ಅಜಮ್ ಸಿದ್ದಿಕ್ ಬಹಿರಂಗಪಡಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಇರಾಕ್‌ನ ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 114 ಮಂದಿ ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement