ಮೇಡಂ ಶಾಂತವಾಗಿದ್ದಳು, ದಾರಿಯುದ್ದಕ್ಕೂ ಒಂದು ಮಾತಾಡಿಲ್ಲ…ಗೂಗಲ್‌ ಮ್ಯಾಪಲ್ಲಿ ಠಾಣೆ ಸರ್ಚ್‌ ಮಾಡಿದೆ : ಸುಚನಾ ಸೇಠ್‌ ಬಗ್ಗೆ ಮಹತ್ವದ ಸಂಗತಿ ಬಿಚ್ಚಿಟ್ಟ ಟ್ಯಾಕ್ಸಿ ಚಾಲಕ

ಗೋವಾ: ತನ್ನ ಮಗನನ್ನು ಹತ್ಯೆಗೈದ ಆರೋಪಿ ಬೆಂಗಳೂರಿನ ಸಿಇಒ ಸುಚನಾ ಸೇಠ್ ಅವಳನ್ನು ಗೋವಾದಿಂದ ಕರ್ನಾಟಕಕ್ಕೆ ಕರೆದೊಯ್ಯದ ಟ್ಯಾಕ್ಸಿ ಚಾಲಕ ತನ್ನ 10 ಗಂಟೆಗಳ ಸುದೀರ್ಘ ಪ್ರಯಾಣದ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಪ್ರಯಾಣದುದ್ದಕ್ಕೂ ಆರೋಪಿ ಸುಚನಾ ಸೇಠ್ ಮೌನವಾಗಿದ್ದಳು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ.
ಗೋವಾದ ತನ್ನ ಸರ್ವಿಸ್ ಅಪಾರ್ಟ್‌ಮೆಂಟ್‌ನಿಂದ ಕ್ಯಾಬ್‌ಗೆ ತನ್ನ ‘ತೂಕ’ದ ಬ್ಯಾಗ್ ಅನ್ನು ಕೊಂಡೊಯ್ಯಲು ಅವಳು ಹೇಳಿದ್ದಳು. ಮತ್ತು ಆ ಬ್ಯಾಗ್‌ ಭಾರ ನೋಡಿ ಅದರಲ್ಲಿ ಕೆಲವು ವಸ್ತುಗಳನ್ನು ತೆಗೆದು ಅದನ್ನು ಹಗುರಗೊಳಿಸಲು ವಿನಂತಿಸಿದಾಗ ಆಕೆ ನಿರಾಕರಿಸಿದಳು ಎಂದು ಹೇಳಿದ್ದಾನೆ.
ಸುಚನಾ ಸೇಠ್‌ ತಂಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲಿ ರಕ್ತದ ಕೆಲಗಳನ್ನು ಕಂಡನಂತರ ಹೊಟೇಲ್‌ ಸಿಬ್ಬಂದಿ ಪೊಲೀಸಿರಿಗೆ ಮಾಹಿತಿ ನಂತರ, ಗೋವಾ ಪೊಲೀಸರು ಕ್ಯಾಬ್ಸ್‌ ಚಾಲಕ ರೇ ಜಾನ್ ಅವರನ್ನು ಸಂಪರ್ಕಿಸಿದರು, ಅವರು ತಮ್ಮ ಕ್ಯಾಬ್ ಅನ್ನು ಸಮೀಪದ ಕರ್ನಾಟಕದ ಪೊಲೀಸ್ ಠಾಣೆಗೆ ತಿರುಗಿಸಲು ಸೂಚಿಸಿದರು. ನಂತರ ಪೊಲೀಸರಿಗೆ ಬ್ಯಾಗ್‌ನಲ್ಲಿ ಮಗನ ಶವ ಪತ್ತೆಯಾಗಿದೆ.

“ನಾನು ಸರ್ವಿಸ್ ಅಪಾರ್ಟ್‌ಮೆಂಟ್ ತಲುಪಿದಾಗ, ಅವಳು (ಸೇಠ್) ತನ್ನ ಬ್ಯಾಗ್ ಅನ್ನು ರಿಸೆಪ್ಶನ್‌ನಿಂದ ಟ್ಯಾಕ್ಸಿಗೆ ಸಾಗಿಸಲು ನನ್ನನ್ನು ಕೇಳಿದಳು. ಅದು ಭಾರವಾಗಿತ್ತು. ನಾನು ಅವಳನ್ನು ಹಗುರಗೊಳಿಸಲು ಬ್ಯಾಗ್‌ನಿಂದ ಕೆಲವು ಸಾಮಾನುಗಳನ್ನು ತೆಗೆಯಬಹುದೇ ಎಂದು ಕೇಳಿದೆ. ಆದರೆ ಅವಳು ನಿರಾಕರಿಸಿದಳು. ನಾವು ಬ್ಯಾಗ್ ಅನ್ನು ಕಾರಿನ ಬೂಟ್‌ಗೆ ಎಳೆದುಕೊಂಡು ಹೋಗಬೇಕಾಯಿತು ಎಂದು ಕ್ಯಾಬ್ ಚಾಲಕ ತಿಳಿಸಿದ್ದಾನೆ.
ಕರ್ನಾಟಕ-ಗೋವಾ ಗಡಿಯಲ್ಲಿರುವ ಚೋರ್ಲಾ ಘಾಟ್ ವಿಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಯನ್ನು ತೆರವುಗೊಳಿಸಲು ಆರು ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಅವರು ವಿಮಾನ ನಿಲ್ದಾಣಕ್ಕೆ ಹೋದರೆ ಇದಕ್ಕೂ ಬೇಗ ಹೋಹಬಹುದು. ಬೇಕಾದರೆ ಬಿಡುತ್ತೇನೆ ಎಂದು ಹೇಳಿದರೂ ಅವಳು ರಸ್ತೆ ಮಾರ್ಗದಲ್ಲೇ ಮುಂದುವರಿಯಲು ಒತ್ತಾಯಿಸಿದಳು ಎಂದು ಚಾಲಕ ಎಂದು ಜಾನ್ ಹೇಳಿದ್ದಾರೆ. ಆಗ ಮಿಸ್‌ ಆಗಿದೆ ಎಂದು ಭಾವಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

ಗೋವಾ ಪೊಲೀಸರಿಂದ ಕರೆ ಬಂದ ನಂತ್ರ ಗೂಗಲ್ ಮ್ಯಾಪ್‌ನಲ್ಲಿ ಪೊಲೀಸ್ ಠಾಣೆ ಹುಡುಕಿದೆ….
“ಗೋಪಾದ ಕಲಂಗುಟ್ ಪೋಲೀಸರು ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಲು ಮತ್ತು ಅವಳನ್ನು ಅಲ್ಲಿಗೆ ಕರೆದೊಯ್ಯಲು ಹೇಳಿದರು. ನಾನು ಗೂಗಲ್‌ ಮ್ಯಾಪ್‌ (Google Map) ಮತ್ತು GPS ನಲ್ಲಿ ಸರ್ಚ್‌ ಪ್ರಯತ್ನಿಸಿದೆ. ಆದರೆ ಯಾವುದೂ ಸಿಗಲಿಲ್ಲ. ನಾನು ಟೋಲ್ ಪ್ಲಾಜಾಗಳಲ್ಲಿ ಪೊಲೀಸರನ್ನು ಹುಡುಕಿದೆ, ಆದರೆ ಯಾರೂ ಇರಲಿಲ್ಲ ”ಎಂದು ಅವರು ಹೇಳಿದರು.
ಏನೂ ಆಗಿಲ್ಲವೆಂದು ಸುಚನಾ ಅವಳನ್ನು ನಂಬಿಸಲು ಏನು ಮಾಡಬೇಕೆಂದು ತಿಳಿದಿತ್ತು. ಹೀಗಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲು ರಸ್ತೆಬದಿಯ ರೆಸ್ಟೋರೆಂಟ್ ಬಳಿ ನಿಲ್ಲಿಸಿದೆ. ಅಲ್ಲಿ ವಿಚಾರಿಸಿದಾಗ ಪೊಲೀಸ್ ಠಾಣೆ ಕೇವಲ 500 ಮೀಟರ್ ದೂರದಲ್ಲಿದೆ ಎಂದು ಗೊತ್ತಾಯಿತು ಎಂದು ರೇ ಜಾನ್‌ ಹೇಳಿದರು.
“ನಾವು ಬೆಂಗಳೂರಿನಿಂದ ಒಂದೂವರೆ ತಾಸು ದೂರದಲ್ಲಿದ್ದೆವು. ನಾನು ಐಯಮಂಗಲ ಪೊಲೀಸ್ ಠಾಣೆಗೆ (ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ) ಕಾರನ್ನು ಚಲಾಯಿಸಿದೆ. ಕ್ಯಾಲಂಗುಟ್ ಪೊಲೀಸ್ ಅಧಿಕಾರಿಯೊಬ್ಬರು ನನ್ನೊಂದಿಗೆ ಫೋನ್‌ನಲ್ಲಿ ಆನ್‌ಲೈನ್‌ನಲ್ಲಿಯೇ ಇದ್ದರು ಎಂದು ಅವರು ಹೇಳಿದರು.
ಪೊಲೀಸ್ ಠಾಣೆ ಮುಂದೆ ಕಾರನ್ನು ನಿಲ್ಲಿಸಿದಾಗ ಯಾಕೆ ನಿಲ್ಲಿಸಿದೆ ಎಂದು ಕೇಳಲಿಲ್ಲ. 15 ನಿಮಿಷಗಳ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಹೊರಗೆ ಬಂದರು. ಆದರೂ ಸುಚನಾ ಸೇಠ್ ಶಾಂತಚಿತ್ತರಾಗಿ ಕಾರಿನಲ್ಲಿಯೇ ಕುಳಿತಿದ್ದರು. ಪೊಲೀಸರು ಆಕೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ಆಗಲೂ ಶಾಂತವಾಗಿದ್ದಳು. ಶವ ನಿಮ್ಮ ಮಗನದ್ದೇ ಎಂದು ಪೊಲೀಸರು ಅವಳನ್ನು ಕೇಳಿದಾಗ, ಅವಳು ಶಾಂತವಾಗಿ ‘ಹೌದು’ ಎಂದು ಹೇಳಿದಳು ಎಂದು ಚಾಲಕ ಹೇಳಿದ್ದಾರೆ.
ಸ್ಟಾರ್ಟಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಜನವರಿ 6 ರಂದು ತಮ್ಮ ಮಗನೊಂದಿಗೆ ಗೋವಾದ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದಳು. ಜನವರಿ 8 ರಂದು, ತನ್ನ ಮಗ ಸಂಬಂಧಿಕರೊಂದಿಗೆ ಇದ್ದಾನೆ ಎಂದು ಹೇಳಿದ್ದಳು. ಗೋವಾದಿಂದ ಬೆಂಗಳೂರಿಗೆ ಹೋಗಲು ಕ್ಯಾಬ್ ಕೇಳಿದ್ದಾಳೆ. ಕ್ಯಾಬ್‌ ಮಾಡಿ ಹೊರ ನಂತರ ಆಕೆ ಉಳಿದ ಸರ್ವಿಸ್‌ ಅಪಾರ್ಟ್‌ಮೆಂಟ್‌ ರೂಮಿನಲ್ಲಿ ರಕ್ತದ ಕಲೆಗಳು ಕಂಡು ಬಂದ ನಂತರ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನನ್ನು ದಿಂಬು ಅಥವಾ ಬಟ್ಟೆಯಿಂದ ಕೊಚ್ಚಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆಯನ್ನು ಪ್ರಜ್ಞಾಹೀನಗೊಳಿಸಲು ಬಳಸಬಹುದಾದ ಎರಡು ಕೆಮ್ಮಿನ ಸಿರಪ್ ಬಾಟಲಿಗಳನ್ನು ಸಹ ಪೊಲೀಸರು ಪತ್ತೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement