ವೀಡಿಯೊ…| ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಸಮಾರಂಭವನ್ನು ಮರಳಿನಲ್ಲಿ ಅದ್ಭುತವಾಗಿ ಚಿತ್ರಿಸಿದ ಕಲಾವಿದ | ವೀಕ್ಷಿಸಿ

ಸೋಮವಾರ ಭವ್ಯವಾದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭವನ್ನು ಅದ್ಭುತವಾಗಿ ಚಿತ್ರಿಸುವ ಮರಳು ಅನಿಮೇಷನ್ ಅನ್ನು ಒಡಿಶಾ ಮೂಲದ ಕಲಾವಿದರೊಬ್ಬರು ಹಂಚಿಕೊಂಡಿದ್ದಾರೆ.
ಆರು ನಿಮಿಷಗಳ ವೀಡಿಯೊದಲ್ಲಿ ಮರಳು ಕಲಾವಿದ ಮಾನಸ್ ಸಾಹೂ ಎಂಬವರು ಬ್ರಷ್‌ನ ಬದಲಿಗೆ ಕ್ಯಾನ್ವಾಸ್ ಮತ್ತು ಮರಳಿನ ಮೇಲೆ ತನ್ನ ಕೈಗಳನ್ನು ಬಳಸಿ ಚಿತ್ರಿಸುವುದನ್ನು ತೋರಿಸುತ್ತದೆ.
ಕಲಾವಿದನು ರಾಮನ ಆಕೃತಿಯ ಮೇಲೆ ಸಂಕೀರ್ಣವಾದ ವಿವರಗಳನ್ನು ಚಿತ್ರಿಸುವುದರೊಂದಿಗೆ ಇದು ಪ್ರಾರಂಭವಾಗುತ್ತದೆ, ನಂತರ ಮರಳು ಕಲೆಗಳು ಹನುಮಂತ, ದರ್ಶಕರ ಗುಂಪು, ಕಾಣಿಕೆಗಳನ್ನು ನೀಡುವ ಜನರು, 2020 ರ ಭೂಮಿ ಪೂಜೆ ಸಮಾರಂಭ ಮತ್ತು ದೇವಾಲಯದ ನಿರ್ಮಾಣವನ್ನು ಚಿತ್ರಿಸುತ್ತದೆ.

ದೇವಾಲಯದ ನಿರ್ಮಾಣದ ನಂತರ, ದೇಶಾದ್ಯಂತ ಸಂಭ್ರಮಾಚರಣೆ, ಕಳಸ ಯಾತ್ರೆ ಮೆರವಣಿಗೆ ಮತ್ತು ಅಯೋಧ್ಯೆ ದೇವಸ್ಥಾನಕ್ಕೆ ಶ್ರೀರಾಮನ ಮರಳುವಿಕೆಯ ಸಂದರ್ಭವನ್ನು ಕಲಾವಿದರು ಮರಳಿನಲ್ಲಿ ಚಿತ್ರಿಸಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ಸಂಪೂರ್ಣ ಸ್ಯಾಂಡ್ ಅನಿಮೇಷನ್ ಫಿಲ್ಮ್ ಅನ್ನು ರಚಿಸಲು ಸಾಹೂ ಅವರು ಸುಮಾರು 20 ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಮಂದಿರ ನಿರ್ಮಾಣದ ಕುರಿತು ಸ್ವತಃ ಕಲಾವಿದರೇ ವೀಡಿಯೊದಲ್ಲಿ ನಿರೂಪಣೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ಶ್ರೀರಾಮನನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ 500 ವರ್ಷಗಳ ಹಿಂದಿನ ಎಲ್ಲಾ ಭಾರತೀಯರ ಕನಸು ಜನವರಿ 22 ರಂದು “ಪ್ರಾಣ ಪ್ರತಿಷ್ಠಾಪನೆ” ಸಮಾರಂಭದಲ್ಲಿ ಈಡೇರಲಿದೆ ಎಂದು ಅವರು ಹೇಳಿದರು.
ಕಲಾವಿದರು ಈ ಹಿಂದೆ ದಂತಕಥೆ ಫುಟ್ಬಾಲ್ ಆಟಗಾರ ಪೀಲೆ ಮತ್ತು ಯುಕೆ ರಾಣಿ ಎಲಿಜಬೆತ್ ಅವರ ಮರಳು ಕಲೆಗಳಿಗಾಗಿಯೂ ಹೆಡ್‌ಲೈನ್ಸ್‌ ಪಡೆದುಕೊಂಡಿದ್ದರು.
ಸೋಮವಾರ (ಜನವರಿ 22) ಮಧ್ಯಾಹ್ನದ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶಾದ್ಯಂತದ ಪ್ರಮುಖ ವ್ಯಕ್ತಿಗಳು ಭಾಗವಹಿಸುವ ಭವ್ಯ ಸಮಾರಂಭದಲ್ಲಿ ‘ಪ್ರಾಣ ಪ್ರತಿಷ್ಠಾಪನೆ’ ನಡೆಯಲಿದೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement