“ದಯವಿಟ್ಟು ಬೇರೆ ಕಾಲೋನಿಗೆ ಹೋಗಿ…”: ರಾಮಮಂದಿರ ವಿರೋಧಿ ಪೋಸ್ಟ್‌ ನಂತರ ಮಣಿಶಂಕರ್ ಅಯ್ಯರ್ ಮಗಳಿಗೆ ಮನೆ ತೊರೆಯುವಂತೆ ನೋಟಿಸ್‌

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ತೆರೆಯುವುದನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ದೆಹಲಿಯ ಜಂಗ್‌ಪುರದ ನಿವಾಸಿ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ) ಅವರಿಗೆ ತಮ್ಮ ಮನೆ ಬಿಟ್ಟು ಹೋಗುವಂತೆ ಸೂಚಿಸಿದೆ.
ಈ ಕುರಿತು ದೆಹಲಿಯ ಜಂಗ್ಪುರ ವಿಸ್ತರಣೆಯ ನಿವಾಸಿಗಳ ಕಲ್ಯಾಣ ಸಂಘ(RWA)ವು ಅವರಿಗೆ ನೋಟಿಸ್ ನೀಡಿದೆ. ಅಯೋಧ್ಯಾ ರಾಮಮಂದಿರ ಪ್ರತಿಷ್ಠಾಪನೆಯ ವಿರುದ್ಧ ಪ್ರತಿಭಟಿಸಿ, ಮುಸ್ಲಿಂ ನಾಗರಿಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಮತ್ತು ಹಿಂದೂ ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಮಾಡಿದ ಕೃತ್ಯಗಳನ್ನು ಖಂಡಿಸಿ ಸುರಣ್ಯಾ ಅಯ್ಯರ್ ಜನವರಿ 20 ರಿಂದ 23 ರವರೆಗೆ ಮೂರು ದಿನಗಳ ಉಪವಾಸವನ್ನು ಆಚರಿಸುವ ಬಗ್ಗೆ ಸಾಂಾಜಿ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ನಂತರ ಜಂಗ್‌ಪುರದ ನಿವಾಸಿ ಕಲ್ಯಾಣ ಸಂಘ (RWA)ದ ಈ ನೋಟಿಸ್‌ ಬಂದಿದೆ.
ಅಯ್ಯರ್‌ಗಳು ತಮ್ಮ ನಿಲುವಿಗೆ ಅಂಟಿಕೊಂಡರೆ, ಅಂತಹ ಅಭಿಪ್ರಾಯಗಳನ್ನು ಕಡೆಗಣಿಸಬಹುದಾದ ಸಮುದಾಯ(ಸ್ಥಳ)ಕ್ಕೆ ಸ್ಥಳಾಂತರಿಸುವುದನ್ನು ಪರಿಗಣಿಸಲು ಆರ್‌ಡಬ್ಲ್ಯೂಎ ಸೂಚಿಸಿದೆ.

“ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯನ್ನು ವಿರೋಧಿಸಿ ನೀವು ಏನು ಮಾಡಿದ್ದೀರಿ ಎಂದು ನೀವು ಇನ್ನೂ ಯೋಚಿಸಿದರೆ, ಜನರು ಮತ್ತು ಆರ್‌ಡಬ್ಲ್ಯೂಎಗಳು ಅಂತಹ ದ್ವೇಷದ ಬಗ್ಗೆ ಕಣ್ಣು ಮುಚ್ಚಿಕೊಂಡಿರಬಹುದಾದ ಮತ್ತೊಂದು ಕಾಲೋನಿಗೆ ದಯವಿಟ್ಟು ತೆರಳುವಂತೆ ನಾವು ನಿಮಗೆ ಸೂಚಿಸುತ್ತೇವೆ” ಎಂದು ಅದು ಹೇಳಿದೆ.
ಫೇಸ್‌ಬುಕ್ ವೀಡಿಯೊದಲ್ಲಿ, ಸುರಣ್ಯಾ ಅಯ್ಯರ್ ಪ್ರಶ್ನೆಯಲ್ಲಿರುವ ಆರ್‌ಡಬ್ಲ್ಯೂಎ (RWA) ತಾವು ವಾಸಿಸುವ ಕಾಲೋನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.
ಸುರಣ್ಯಾ ಅಯ್ಯರ್ ಅವರ ಕ್ರಮಗಳು ಮತ್ತು ಹೇಳಿಕೆಗಳು ಸಮುದಾಯದೊಳಗೆ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಆತಂಕ ವ್ಯಕ್ತಪಡಿಸಿದ ನಿವಾಸಿಗಳು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಆರ್‌ಡಬ್ಲ್ಯೂಎ ಪತ್ರದಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಪತ್ನಿಗೆ ವಿಡಿಯೋ ಕಾಲ್‌ ಮಾಡಿ ಕ್ಯಾಮರಾ ಮುಂದೆಯೇ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ...!

“ಶ್ರೀಮತಿ ಅಯ್ಯರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದ್ದು ಖಂಡಿತವಾಗಿಯೂ ವಿದ್ಯಾವಂತ ವ್ಯಕ್ತಿ ಹೇಳುವಂತದ್ದಲ್ಲ. ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಸಂಪೂರ್ಣವಲ್ಲ ಮತ್ತು ದ್ವೇಷದ ಭಾಷಣವನ್ನು ಸ್ವೀಕಾರಾರ್ಹವಲ್ಲ ಎಂದು ನೆನಪಿಸುತ್ತದೆ ಎಂದು ಆರ್‌ಡಬ್ಲ್ಯೂಎ ಹೇಳಿದೆ. ಶ್ರೀಮತಿ ಅಯ್ಯರ್ ಅವರು ಶಾಂತಿಪ್ರಿಯ ಪ್ರದೇಶದಲ್ಲಿ 3 ದಿನಗಳ ಉಪವಾಸವನ್ನು ಘೋಷಿಸುವ ದ್ವೇಷದ ಮಾತು ಮತ್ತು ನಡವಳಿಕೆಯು ಹೆಚ್ಚು ದುರದೃಷ್ಟಕರವಾಗಿದೆ” ಎಂದು ಅದು ಹೇಳಿದೆ.
ಅಯ್ಯರ್ ಮತ್ತು ಆಕೆಯ ತಂದೆಗೆ ಆರ್‌ಡಬ್ಲ್ಯೂಎ ಬರೆದ ಪತ್ರವು ಉತ್ತಮ ಪೌರತ್ವದ ಮಾನದಂಡಗಳಿಗೆ ಬದ್ಧವಾಗಿರಲು ಮತ್ತು “ದ್ವೇಷ ಮತ್ತು ಅಪನಂಬಿಕೆಯನ್ನು ಸೃಷ್ಟಿಸುವುದರಿಂದ” ದೂರವಿರಬೇಕು ಎಂದು ಹೇಳಿದೆ. ಮಣಿಶಂಕರ್ ಅಯ್ಯರ್ ತಮ್ಮ ಮಗಳ ಕೃತ್ಯವನ್ನು ಖಂಡಿಸುವಂತೆ ಸಂಘವು ವಿನಂತಿಸಿದೆ ಹಾಗೂ “ಇದು ಕಾಲೋನಿಗೆ ಮತ್ತು ಇಡೀ ಸಮಾಜಕ್ಕೆ ಒಳ್ಳೆಯದಲ್ಲ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ಎಲ್ಲ ನಿವಾಸಿಗಳ ನಡುವೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವ ತನ್ನ ಜವಾಬ್ದಾರಿ ಎತ್ತಿ ತೋರಿಸುತ್ತ, ಆರ್‌ಡಬ್ಲ್ಯೂಎ ತನ್ನ ನೋಟೀಸ್‌ನಲ್ಲಿ, “ಕಾಲೋನಿಯಲ್ಲಿ ಶಾಂತಿಯನ್ನು ಕದಡುವ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ನಿವಾಸಿಗಳ ಅಟ್ಟಹಾಸವನ್ನು ನಾವು ಪ್ರಶಂಸಿಸುವುದಿಲ್ಲ ಎಂದು ಹೇಳಿದೆ.
ರಾಮಮಂದಿರ ಪ್ರತಿಷ್ಠಾಪನೆಯ ವಿರುದ್ಧ ಜನವರಿ 20 ಮತ್ತು 23 ರ ನಡುವೆ ಸುರಣ್ಯಾ ಅಯ್ಯರ್ ಉಪವಾಸವನ್ನು ಉಲ್ಲೇಖಿಸಿದ ಆರ್‌ಡಬ್ಲ್ಯೂಎ , “500 ವರ್ಷಗಳ ನಂತರ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಮತ್ತು ಸುಪ್ರೀಂ ಕೋರ್ಟ್ ಪೀಠದ 5-0 ತೀರ್ಪಿನ ನಂತರವೇ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement