ʼರಾಜನೇ ಮರಳಿ ರಾಜನಾಗುವ ಯೋಗ’; ಗುಳೇದಗುಡ್ಡದ ಇಲಾಳ ಮೇಳದ ಭವಿಷ್ಯವಾಣಿ

ಬಾಗಲಕೋಟೆ : ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಪ್ರಸಿದ್ಧ ಗುಳೇದಗುಡ್ಡದ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿ ತಿಳಿಸಿದೆ.
ಗುಳೇದಗುಡ್ಡ ಪಟ್ಟಣದ ಮಾರವಾಡಿ ಬಗೀಚ್​ದಲ್ಲಿ ನಡೆಯುವ ಇಲಾಳ ಮೇಳದಲ್ಲಿ ಪ್ರತಿ ವರ್ಷ ಯುಗಾದಿ (Ugadi) ಪಾಡ್ಯದಂದು ಇಲಾಳ ಮೇಳದ ಭವಿಷ್ಯ ನುಡಿಯಲಾಗುತ್ತದೆ. ಇಲ್ಲಿ, ರಾಜಕೀಯ, ಮಳೆ ಮತ್ತು ಬೆಳೆ ಸೇರಿದಂತೆ ಹಲವು ವಿಚಾರವಾಗಿ ಭವಿಷ್ಯ ನುಡಿಯಲಾಗುತ್ತದೆ. ಈ ಬಾರಿಯ ಭವಿಷ್ಯವಾಣಿಯಲ್ಲಿ, “ಈಗ ಇರುವ ರಾಜನೇ ಮತ್ತೆ ರಾಜ ಆಗುತ್ತಾನೆ. ರಾಜ, ಪ್ರಜೆಗಳು, ಮಂತ್ರಿಗಳು, ಸೈನ್ಯ ಬಲಿಷ್ಠವಾಗಿವೆ. ಅಧಿಕಾರ ಬೇಕು ಬೇಕು, ನಾವು ಆಳಬೇಕು ಎಂದು ಹೆಣಗಾಡುತ್ತಾರೆ” ಎಂದು ನುಡಿಯಲಾಗಿದೆ.
ರಾಜಕೀಯದ ಬಗ್ಗೆ ಮಲ್ಲಿಕಾರ್ಜುನ ಗೊಬ್ಬಿ ಹೊರಹಾಕಿದ ಭವಿಷ್ಯವಾಣಿ ನುಡಿದಿದ್ದು, ಈ ಸಲ ದೇಶದಲ್ಲಿ ಈಗ ಇರುವ ರಾಜನೇ ಮತ್ತೆ ರಾಜ ಆಗುತ್ತಾನೆ. ನಿಷ್ಠೆಯಿಂದ ಸ್ಥಿರತೆ ಉಂಟಾಗುವ ಬಲ ಇದೆ ಎಂದು ಭವಿಷ್ಯ ಹೇಳಿದ್ದಾರೆ.
ಇನ್ನು ಕೃಷಿ ಭವಿಷ್ಯ ನಡಿಯಲಾಗಿದ್ದು, ಬೆಳೆಗಳ ಬಗ್ಗೆ ನಾಗಪ್ಪ ಚಿಂದಿ ಭವಿಷ್ಯ ನುಡಿದಿದ್ದಾರೆ. ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ಜೀವನ ಆನಂದವಾಗಿ ಸಾಗುತ್ತೆ. ದೇವರ ಸ್ಮರಣೆ, ದಾನ ಧರ್ಮ ಮಾಡಬೇಕು. ಈ ವರ್ಷ ಹೆಸರು, ಬಿಳಿಜೋಳ, ಗೋಧಿ, ಕಡಲೆ ಬಂಪರ್ ಬೆಳೆ ಇದೆ. ತೊಗರಿ, ಸಜ್ಜಿಗೆ ಕೀಟಬಾಧೆ ಜಾಸ್ತಿ ಆಗುತ್ತದೆ. ಬಟ್ಟೆ ವ್ಯಾಪಾರ ಚನ್ನಾಗಿ ಆಗುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement