ಸಂಪತ್ತಿನಿಂದ ತ್ಯಾಗ ಜೀವನಕ್ಕೆ : ಸನ್ಯಾಸಿಗಳಾಗಲು 200 ಕೋಟಿ ರೂಪಾಯಿ ಸಂಪತ್ತು ದಾನ ಮಾಡಿದ ದಂಪತಿ…!

ಗುಜರಾತ್‌ನ ಪ್ರಮುಖ ಉದ್ಯಮಿ ಕುಟುಂಬವು ತಮ್ಮ ಸಂಪೂರ್ಣ ಜೀವಮಾನದ ಗಳಿಕೆಯ 200 ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಅನೇಕರನ್ನು ಬೆರಗುಗೊಳಿಸಿದೆ.
ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿ ಭವೇಶ ಭಾಯ್ ಭಂಡಾರಿ ಅವರು ತಮ್ಮ ಪತ್ನಿಯೊಂದಿಗೆ ಸನ್ಯಾಸಿ ಜೀವನವನ್ನು ಸ್ವೀಕರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಭೌತಿಕ ಸಂಪತ್ತಿನ ಐಷಾರಾಮಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಅವರ ನಿರ್ಧಾರದ ಸುದ್ದಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್‌ ಆಗಿದೆ. ಅವರ ದಿಟ್ಟ ನಿರ್ಧಾರ ಬಗ್ಗೆ ಅನೇಕರು ಬೆರಗಾಗಿದ್ದಾರೆ.

ಹಿಮ್ಮತ್‌ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಭಂಡಾರಿ ದಂಪತಿ 35 ಮಂದಿಯೊಂದಿಗೆ ಶಿಸ್ತು, ಸನ್ಯಾಸ ಮತ್ತು ಆಧ್ಯಾತ್ಮಿಕ ಜೀವನ ಪ್ರಾರಂಭಿಸುವ ಪ್ರತಿಜ್ಞೆ ಮಾಡಿದರು. ಸರಿಸುಮಾರು 4 ಕಿಲೋಮೀಟರ್‌ಗಳಷ್ಟು ನಡೆದ ಮೆರವಣಿಗೆಯು ಭವೇಶ ಭಾಯ್ ತನ್ನ ಸಂಪೂರ್ಣ ಸಂಪತ್ತಿನ 200 ಕೋಟಿಗಳನ್ನು ದಾನ ಮಾಡಲು ಸಾಕ್ಷಿಯಾಯಿತು. ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಈ ದಂಪತಿಯ ಮಗ ಮತ್ತು ಮಗಳು ಐಷಾರಾಮಿ ಜೀವನವನ್ನು ತ್ಯಜಿಸಿ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೀಗ ತಂದೆ-ತಾಯಿ ಕೂಡ ಅದೇ ಹಾದಿ ಅನುಸರಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 22 ರಂದು, ಅವರು ತಮ್ಮ ಐಷಾರಾಮಿ ಜೀವನ ತ್ಯಜಿಸಿ ಹಿಮ್ಮತ್‌ನಗರ ರಿವರ್‌ಫ್ರಂಟ್‌ನಲ್ಲಿ ಔಪಚಾರಿಕವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಾರೆ. ಇದು ಅವರ ಬಲವಾದ ಆಧ್ಯಾತ್ಮಿಕ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ.
ಸಬರಕಾಂತದಲ್ಲಿ ಸಮೃದ್ಧ ಕುಟುಂಬಕ್ಕೆ ಸೇರಿದ ಭವೇಶ್ ಭಾಯ್ ಅವರು ಸಮೃದ್ಧ ಜೀವನದಲ್ಲಿ ಬದುಕಿದವರು. ಅವರು ಸಬರಕಾಂತ ಮತ್ತು ಅಹಮದಾಬಾದ್ ಎರಡರಲ್ಲೂ ನಿರ್ಮಾಣ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಜೈನ ಸಮುದಾಯದೊಂದಿಗೆ ಆಳವಾಗಿ ಬೆರೆತಿರುವ ಭಂಡಾರಿ ಕುಟುಂಬವು ಸನ್ಯಾಸಿಗಳು ಮತ್ತು ಭಕ್ತರೊಂದಿಗೆ ಆಗಾಗ್ಗೆ ಸಂವಹನ ನಡೆಸುತ್ತಿತ್ತು.

ಈಗ, ಭವೇಶ ಭಾಯ್ ಮತ್ತು ಅವರ ಪತ್ನಿ ಫ್ಯಾನ್‌ಗಳು, ಏರ್ ಕಂಡಿಷನರ್‌ಗಳು ಮತ್ತು ಮೊಬೈಲ್ ಫೋನ್‌ಗಳಂತಹ ಆಧುನಿಕ ಅನುಕೂಲಗಳು ಸೇರಿದಂತೆ ಎಲ್ಲಾ ಭೌತಿಕ ಆಸ್ತಿ ಹಾಗೂ ಐಷಾರಾಮಿ ಜೀವನವನ್ನು ತ್ಯಜಿಸಿ ತಪಸ್ವಿ ಜೀವನ ನಡೆಸುವ ಪ್ರತಿಜ್ಞೆ ಮಾಡಿದ್ದಾರೆ.
ಈ ದಂಪತಿಯ ನಿರ್ಧಾರವು ಅವರ ಮಕ್ಕಳ ಹೆಜ್ಜೆಗಳನ್ನು ಅನುಸರಿಸುತ್ತದೆ, 16 ವರ್ಷದ ಮಗ ಮತ್ತು 19 ವರ್ಷದ ಮಗಳು 2022 ರಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ತಮ್ಮ ಮಕ್ಕಳ ಆಧ್ಯಾತ್ಮಿಕ ಪ್ರಯಾಣದಿಂದ ಪ್ರೇರಿತರಾದ ಭವೇಶ ಭಾಯಿ ಮತ್ತು ಅವರ ಪತ್ನಿ ತಾವೂ ಪರಿತ್ಯಾಗದ ಜೀವನವನ್ನು ಆಯ್ಕೆ ಮಾಡಿಕೊಂಡರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement