ವೀಡಿಯೊ | ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿದ್ದ ಸಫಾರಿ ಬಸ್ಸಿಗೆ ಜಿಗಿದು ಒಳಗೆ ನುಸುಳಲು ಯತ್ನಿಸಿದ ಚಿರತೆ ; ವೀಕ್ಷಿಸಿ

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಮಿನಿ ಸಫಾರಿ ಟೂರಿಸ್ಟ್ ಬಸ್ಸಿಗೆ ಜಿಗಿದು ಕಿಟಕಿ ಹಿಡಿದುಕೊಳ್ಳುವ ಮೂಲಕ ಪ್ರವಾಸಿಗರನ್ನು ದಿಗ್ಭ್ರಮೆಗೊಳಿಸಿತು.
ವರದಿಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಸ್‌ ಚಾಲಕ ಪ್ರವಾಸಿಗರು ಸುತ್ತಮುತ್ತಲಿನ ವನ್ಯಜೀವಿಗಳನ್ನು ವೀಕ್ಷಿಸಲು ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸಫಾರಿ ಬಸ್‌ ನಿಂತ ಸಂದರ್ಭದಲ್ಲಿ ಚಿರತೆ ಹಾರಿ, ಬಸ್ಸಿನ ಕಿಟಕಿಗಳ ಮೂಲಕ ಇಣುಕಿ ನೋಡಿ ಪ್ರಯಾಣಿಕರನ್ನು ಭಯಭೀತರನ್ನಾಗಿಸಿತು.
ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ ಮತ್ತು ನಂತರ ಕರ್ನಾಟಕ ಪೋರ್ಟ್ಫೋಲಿಯೋ ಎಂಬ ಹೆಸರಿನ ಎಕ್ಸ್‌ ಬಳಕೆದಾರರು ಅಕ್ಟೋಬರ್ 7 ರಂದು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಬಸ್ಸಿನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾದ ವರದಿಯಾಗಿಲ್ಲ, ಆದರೆ ಚಿರತೆಯೊಂದಿಗೆ ಈ ತರಹದ ಮುಖಾಮುಖಿ ಟೂರಿಸ್ಟ್ ಬಸ್‌ನಲ್ಲಿದ್ದ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಈ ರೋಮಾಂಚಕ ಕ್ಷಣದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿರತೆ ಬಸ್‌ ಮೇಲೆ ಏರಲು ಪ್ರಯತ್ನಿಸಿದ್ದು ಮಾತ್ರವಲ್ಲದೆ ಕಿಟಕಿಯ ಮೂಲಕ ಭಯಭೀತರಾದ ಪ್ರಯಾಣಿಕರನ್ನು ಇಣುಕಿ ನೋಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಬಳಿಕ ಚಿರತೆ ಬಸ್‌ನ ಮೇಲಕ್ಕೆ ಹಾರಲು ಯತ್ನಿಸಿದೆ. ಆಗ ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಾನೆ. ನಂತರ ಚಿರತೆ ಅಲ್ಲಿಂದ ತೆರಳಿದೆ.
ಭಾನುವಾರ ಸಫಾರಿ ವೇಳೆ ಚಾಲಕ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಬಸ್‌ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಚಿರತೆ ಏಕಾಏಕಿ ಬಸ್‌ಗೆ ನುಗ್ಗಿದೆ. ಈ ದೃಶ್ಯವನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

https://twitter.com/karnatakaportf/status/1842986573216043385?ref_src=twsrc%5Etfw%7Ctwcamp%5Etweetembed%7Ctwterm%5E1842986573216043385%7Ctwgr%5Ea01e246d31d78b57bc653750bb5c0eff166d3aa5%7Ctwcon%5Es1_&ref_url=https%3A%2F%2Fwww.deccanherald.com%2Findia%2Fkarnataka%2Fbengaluru%2Fvideo-of-leopard-leaping-at-safari-bus-at-bannerghatta-national-park-goes-viral-3222544

ಪ್ರವಾಸಿಗರು ಆರಂಭದಲ್ಲಿ ಗಾಬರಿ ಮತ್ತು ಭಯಭೀತರಾದರು, ಆದರೆ ಶೀಘ್ರದಲ್ಲೇ ಅವರು ಪ್ರಾಣಿಯನ್ನು ನೋಡಿ ಮಂತ್ರಮುಗ್ಧರಾದರು. ಚಿರತೆಯ ಅನಿರೀಕ್ಷಿತ ನೋಟವು ಸ್ವಲ್ಪ ಸಮಯದ ಭಯವನ್ನು ಸೃಷ್ಟಿಸಿತು, ಆದರೆ ಪ್ರವಾಸಿಗರು ತಮ್ಮ ಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ ಮತ್ತು ಅಪರೂಪದ ದೃಶ್ಯವನ್ನು ಆನಂದಿಸಿದರು. ಏಕೆಂದರೆ ಎಲ್ಲಾ ಸಫಾರಿ ವಾಹನಗಳು ಜಾಲರಿಗಳನ್ನು ಹೊಂದಿದ್ದವು.
ಕಳೆದ ವರ್ಷ, ಕೇಸಿ ಕೂಪರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಆಫ್ರಿಕಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದ ಪ್ರವಾಸದ ಸಮಯದಲ್ಲಿ ಚಿರತೆಯೊಂದು ಸಫಾರಿ ವಾಹನದ ತೆರೆದ ಛಾವಣಿಯ ಮೇಲೆ ಹತ್ತುತ್ತಿರುವುದನ್ನು ತೋರಿಸಿತ್ತು. ಇದು ಪ್ರವಾಸಿಗರು ಮತ್ತು ಚಿರತೆ ಅತಿ ಸಮೀಪದಲ್ಲಿ ಮುಖಾಮುಖಿಯಾಗಲು ಕಾರಣವಾಗಿತ್ತು.

ಪ್ರಮುಖ ಸುದ್ದಿ :-   ತುಮಕೂರು : ಲಾಡ್ಜ್‌ನಲ್ಲಿ ದಾವಣಗೆರೆ ಪಿಎಸ್ಐ ಆತ್ಮಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement