ಸ್ನೇಹಿತನನ್ನು ಪ್ರಕರಣದಲ್ಲಿ ಸಿಲುಕಿಸಲು ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದ್ದ ಅಪ್ರಾಪ್ತ…!

ಮುಂಬೈ: ಸೋಮವಾರದಿಂದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಪ್ರಾಪ್ತ ವಯಸ್ಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್ ಬೆದರಿಕೆಗಳಿಂದಾಗಿ ಕೆಲವು ವಿಮಾನಗಳನ್ನು ದೂರದ ಕೆನಡಾದ ವಿಮಾನ ನಿಲ್ದಾಣಕ್ಕೂ ತಿರುಗಿಸಲಾಗಿತ್ತು. ಹುಡುಗನು ತನ್ನ ಸ್ನೇಹಿತನೊಬ್ಬನನ್ನು ಬಂಧನಕ್ಕೆ ಒಳಗಾಗುವಂತೆ ಮಾಡಬೇಕು ಎಂದು ಬಯಸಿ ಬಾಂಬ್‌ ಬೆದರಿಕೆಗಳನ್ನು ಹಾಕಿದ್ದ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢದ ರಾಜ್‌ನಂದಗಾಂವ್‌ ನ ಶಾಲೆ ಬಿಟ್ಟ 17 ವರ್ಷದ ಅಪ್ರಾಪ್ತ ಮತ್ತು ಆತನ ತಂದೆಯನ್ನು ಮುಂಬೈ ಪೊಲೀಸರು ಮಂಗಳವಾರ ಕರೆಸಿದ್ದರು. ಆತನನ್ನು ವಶಕ್ಕೆ ಪಡೆದು ರಿಮಾಂಡ್ ಹೋಮ್‌ಗೆ ಕರೆದೊಯ್ಯಲಾಗುತ್ತಿದ್ದು, ಆತನ ತಂದೆಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪ್ರಾಪ್ತನು ತನ್ನೊಂದಿಗೆ ಜಗಳವಾಡಿದ ಸ್ನೇಹಿತನ ಹೆಸರಿನಲ್ಲಿ ಎಕ್ಸ್‌ನಲ್ಲಿ ಹ್ಯಾಂಡಲ್ ಅನ್ನು ರಚಿಸಿದ್ದಾನೆ. ಮತ್ತು ಅದರಿಂದ ಬಾಂಬ್ ಬೆದರಿಕೆಗಳನ್ನು ಪೋಸ್ಟ್ ಮಾಡಿದ್ದಾನೆ.

ಸೋಮವಾರದಿಂದ ಕನಿಷ್ಠ 19 ಬೆದರಿಕೆಗಳಳನ್ನು ಕಳುಹಿಸಿದ್ದ ಮತ್ತು ಮುಂಬೈ ಪೊಲೀಸರು ಈ ಸಂಬಂದ ಮೂರು ಎಫ್‌ಐಆರ್ ದಾಖಲಿಸಿದ್ದಾರೆ. ಸೋಮವಾರದ ಬೆದರಿಕೆ ಬಂದ ಪ್ರಕರಣದ ಮೊದಲ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಪ್ರಸ್ತುತ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಸೋಮವಾರ, ಹುಡುಗ ನಾಲ್ಕು ವಿಮಾನಗಳಿಗೆ ಸುಳ್ಳು ಬಾಂಬ್‌ ಬೆದರಿಕೆಗಳನ್ನು ಕಳುಹಿಸಿದ್ದಾನೆ, ಅವುಗಳಲ್ಲಿ ಮೂರು ಅಂತಾರಾಷ್ಟ್ರೀಯ ವಿಮಾನಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ 119 ಸೇರಿದಂತೆ ಎರಡು ವಿಳಂಬವಾಗಿದ್ದು, ಅದನ್ನು ನವದೆಹಲಿಗೆ ತಿರುಗಿಸಲಾಯಿತು ಮತ್ತು ಒಂದನ್ನು ರದ್ದುಗೊಳಿಸಬೇಕಾಯಿತು.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ಮಂಗಳವಾರ ಈ ಬೆದರಿಕೆಗಳು ಕನಿಷ್ಠ ಏಳು ವಿಮಾನಗಳ ಮೇಲೆ ಪರಿಣಾಮ ಬೀರಿದ್ದು, ದೆಹಲಿಯಿಂದ ಚಿಕಾಗೋಗೆ ಏರ್ ಇಂಡಿಯಾ ವಿಮಾನವನ್ನು ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಸೌದಿ ಅರೇಬಿಯಾದ ದಮ್ಮನ್‌ನಿಂದ ಲಕ್ನೋಗೆ ಇಂಡಿಗೋ ವಿಮಾನ 6E 98 ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಅಲಯನ್ಸ್ ಏರ್‌ನಿಂದ ಬೆದರಿಕೆಗಳು ಬಂದವು.
ಮಂಗಳವಾರದ ಬೆದರಿಕೆಗಳನ್ನು X ಹ್ಯಾಂಡಲ್‌ನಿಂದ ಹಾಕಲಾಗಿತ್ತು.
ಬುಧವಾರವೂ ಇದು ಮುಂದುವರಿದಿದ್ದು, ನವದೆಹಲಿ-ಬೆಂಗಳೂರು ಆಕಾಶ ಏರ್ ವಿಮಾನ (ಕ್ಯೂಪಿ 1335) ರಾಜಧಾನಿಗೆ ಮರಳಿತು ಮತ್ತು ಇಂಡಿಗೋದ ಮುಂಬೈ-ದೆಹಲಿ ವಿಮಾನ 6E 651 ಅನ್ನು ಅಹಮದಾಬಾದಿಗೆ ತಿರುಗಿಸಲಾಯಿತು. ಸ್ಪೈಸ್‌ಜೆಟ್‌ನ ಎರಡು ಸೇರಿದಂತೆ ಇತರ ಐದು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದವು.
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಮ್ಮ ಇಲಾಖೆ ಮತ್ತು ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement